आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Wednesday, 25 December 2013

ಭಾರತದ ಪುರಾತನ ವಿಜ್ಞಾನಿಗಳು :



‘’ಭಾರತ’’ ಅರ್ಥವೇ ಸೂಚಿಸುವ ಹಾಗೆ ‘’ಭಾ’’ ಅರ್ಥಾತ್ ಜ್ಞಾನ ‘’ರತಿ’’ ಅರ್ಥಾತ್ ಆಕರ್ಷಣೆ ಎ೦ದು. ಭಾರತೀಯರು ಅ೦ದರೆ ಜ್ಞಾನದ ಆಕರ್ಷಣೆ ಉಳ್ಳವರು ಎ೦ದು. ವಿಶ್ವದ ಇತರೆ ಜನರು ಕಣ್ಬಿಡುವ ಮೊದಲೇ ಇಲ್ಲಿ ಒ೦ದು ಸುವ್ಯವಸ್ಥಿತ ಪದ್ಧತಿ, ಸ೦ಸ್ಕೃತಿ, ಬದುಕುವ ವಿಧಾನ ರೂಪುಗೊ೦ಡಿತ್ತು. ಇದಕ್ಕೆ ಹಲವಾರು ವಿಚಾರವ೦ತರು, ಪ್ರಗತಿಶೀಲರು, ವಿದ್ಯಾವ೦ತರು ಕಾರಣ ಕರ್ತರು. ಹಾಗು ಇವರ ಸ೦ಖ್ಯೆಯೂ ಅಸ೦ಖ್ಯ. ಇ೦ತಹವರಲ್ಲಿ ಕೆಲವರ ಪರಿಚಯ ಮಾತ್ರ ಇಲ್ಲಿ ಮಾಡಲಾಗಿದೆ.

ಆರ್ಯಭಟ್ಟ : [476 CE ]

ಆರ್ಯಭಟ್ಟ ಈಗಿನ ‘’ಬಿಹಾರ್’’ ಪ್ರದೇಶದಲ್ಲಿ ಜನಿಸಿದವನು. ಇವನು ಖಗೋಳ ಮತ್ತು ಗಣಿತ ಶಾಸ್ತ್ರಗಳಲ್ಲಿ ಭಾರತೀಯರ ಪಾ೦ಡಿತ್ಯವನ್ನು ಪ್ರತಿನಿಧಿಸಿದವನು. 499 CEನಲ್ಲಿ ಅವನ 23ನೇ ವಯಸ್ಸಿನಲ್ಲಿ ಗಣಿತ ಮತ್ತು ಖಗೋಳ ಶಾಸ್ತ್ರದ ಮೇಲೆ ‘’ಆರ್ಯಭಟೀಯ೦’’ ಎ೦ಬ ಗ್ರ೦ಥ ರಚಿಸಿದನು. ಇದರಲ್ಲಿ ಇವನು ಗ್ರಹಗಳ ಚಲನೆಯನ್ನು ಮತ್ತು ಗ್ರಹಣದ ಸಮಯವನ್ನು ಲೆಕ್ಕ ಹಾಕುವ ಕರಾರುವಕ್ಕಾದ ವಿಧಾನವನ್ನು ತಿಳಿಸಿದ್ದಾನೆ. COPERNICUSನು ತನ್ನ ಸಿದ್ಧಾ೦ತವನ್ನು ಮ೦ಡಿಸುವ ಸಾವಿರಾರು ವರ್ಷಗಳ ಹಿ೦ದೆಯೇ ಇವನು ‘’ಭೂಮಿಯು ಗು೦ಡಾಗಿದ್ದು, ತನ್ನ ಕಕ್ಷೆಯಲ್ಲಿಯೇ ಸೂರ್ಯನ ಸುತ್ತ ತಿರುಗುತ್ತದೆ’’ ಎ೦ದು ಹೇಳಿದ್ದನು. ಹಾಗು ಗಣಿತದ ವಿಷಯಕ್ಕೆ ಸ೦ಬ೦ಧಿಸಿದ೦ತೆ ‘’ಪೈ’’[ π ]ನ ಮೊತ್ತ 3.1416 ಎ೦ದೂ ನಿಖರವಾಗಿ ತಿಳಿಸಿದ್ದಾನೆ. ಶತಮಾನಗಳ ನ೦ತರ 825CE ನಲ್ಲಿ ಇದ್ದ೦ತಹ ಅರಬ್ ದೇಶದ ಗಣಿತಜ್ಞ ’’MOHAMMED IBNA MUSA’’ ‘’ಪೈ[ π ]ನ ಮೊತ್ತ ಕ೦ಡುಹಿಡಿದ ಕೀರ್ತಿ ಭಾರತೀಯರಿಗೆ ಸಲ್ಲಬೇಕು, ಈ ಮೊತ್ತವು ಹಿ೦ದೂಗಳು ನೀಡಲ್ಪಟ್ಟಿದ್ದು’’ ಎ೦ದಿದ್ದಾನೆ. ಭಾರತೀಯರು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆ ಎ೦ದರೆ ”ಸೊನ್ನೆ”. ಅದಿಲ್ಲದಿದ್ದರೆ ಆಧುನಿಕ ತ೦ತ್ರಜ್ಞಾನ, ಗಣಿತ, ಹಾಗು COMPUTER TECHNOLOGYಯೇ ಉಧ್ಬವಿಸುತ್ತಿರಲಿಲ್ಲ. ಇ೦ತಃ ಸೊನ್ನೆಯ ವಿಚಾರವನ್ನು ಪರಿಚಯಿಸಿ ಆರ್ಯಭಟ ಗಣಿತಶಾಸ್ತ್ರಕ್ಕೆ ಮಹತ್ತರ ಕೊಡುಗೆ ನೀಡಿದ. ಹೀಗೆ ಆರ್ಯಭಟನು ಗಣಿತ ಮತ್ತು ಖಗೋಳ ಶಾಸ್ತ್ರದ ಬೃಹತ್ ಪ್ರತಿಭೆಯಾಗಿ ಕಾಣಿಸುತ್ತಾನೆ.

ಆಚಾರ್ಯ ಭಾರಧ್ವಜ  [ 800 BCE ] : ವೈಮಾನಿಕ ತ೦ತ್ರಜ್ಞಾನದ ಆದಿ ಪರಿಶೋಧಕ.

ಆಚಾರ್ಯ ಭಾರಧ್ವಜನು ‘’ಪುಣ್ಯಕ್ಷೇತ್ರ ಗಯಾ’’ದಲ್ಲಿ ಜನಿಸಿದನೆ೦ದು ಇತಿಹಾಸ ಹೇಳುತ್ತದೆ. ಇವನನ್ನು ಸನಾತನ ‘’ಆಯುರ್ವೇದ’’ ಪದ್ಧತಿಯ ಪ್ರಚಾರಕನು ಹಾಗು ‘’ಯಾ೦ತ್ರಿಕ ತ೦ತ್ರಜ್ಞಾನ’’ದ ಅಭಿಯ೦ತರನು ಎ೦ದು ಕರೆಯಬಹುದು. ಇವನು ‘’ಯ೦ತ್ರ ಸರ್ವಸ್ವ’’ ಎ೦ಬ ಗ್ರ೦ಥವನ್ನು ಬರೆದಿದ್ದಾನೆ. ಅದರಲ್ಲಿ ಬಾಹ್ಯಾಕಾಶ ತ೦ತ್ರಜ್ಞಾನ, ವೈಮಾನಿಕ ತ೦ತ್ರಜ್ಞಾನ ಮತ್ತು ಹಾರುವ ಯ೦ತ್ರಗಳ [ ವಿಮಾನ] ಬಗೆಗೆ ಕುತೂಹಲಕರವಾದ ವಿಷಯಗಳನ್ನು ಆವಿಷ್ಕರಿಸಿ ಬರೆದಿದ್ದಾನೆ. ಇವನು ಮೂರು ರೀತಿಯ ವಿಮಾನಗಳನ್ನು ಕ೦ಡುಹಿಡಿದಿದ್ದನು. ವೈಮಾನಿಕ ವಿಷಯದಲ್ಲಿದ್ದ ಇವನ ಪಾ೦ಡಿತ್ಯವು ಈ ವಿಷಯದಲ್ಲಿ ಹೇಳಿದ ಅವನ ತ೦ತ್ರಗಳಿ೦ದ, ವಿಧಾನಗಳಿ೦ದ ಪ್ರತಿಬಿ೦ಬಿತವಾಗಿದೆ. ಆದರೆ ಅವನ ವ್ಯಾಖ್ಯಾನವು ಅತ್ಯ೦ತ ಒಗಟಾಗಿಯೂ ಅರ್ಥೈಸಲು ಕ್ಲಿಷ್ಟಕರವಾಗಿಯೂ ಇದೆ. ಇವನು ಹೇಳುವ ರಹಸ್ಯಗಳೆ೦ದರೆ :-

→ ಸೂರ್ಯನ ರಷ್ಮಿ ಮತ್ತು ವಾಯುವಿನ ಶಕ್ತಿಯನ್ನುಪಯೋಗಿಸಿ ಕಣ್ಣಿಗೆ ಕಾಣದ ವಿಮಾನಗಳನ್ನು ಮಾಡುವ ಪ್ರಕ್ರಿಯೆ.
→ ಕಣ್ಣಿಗೆ ಕಾಣದ ವಿಮಾನಗಳನ್ನು ವಿದ್ಯುತ್ ಶಕ್ತಿಯ ಮೂಲಕ ಕಾಣುವ ವಿಧಾನ.
→ ಬೇರೇ ವಿಮಾನಗಳಲ್ಲಿರುವವರು ಮಾತನಾಡಿದ್ದನ್ನು ಕೇಳುವ ತ೦ತ್ರ.
→ ಬೇರೇ ವಿಮಾನದಲ್ಲಿ ನಡೆಯುತ್ತಿರುವುದನ್ನು ನೋಡುವ ತ೦ತ್ರಜ್ಞಾನ.

ಇವನ ಪಾ೦ಡಿತ್ಯ ಮತ್ತು ಆವಿಷ್ಕಾರಗಳಿ೦ದ ಇವನು ವೈಮಾನಿಕ ತ೦ತ್ರಜ್ಞಾನದ ಆದಿ ಪರಿಶೋಧಕನೆ೦ದು ಕರೆಯಲ್ಪಡುವನು.

ಭಾಸ್ಕರಾಚಾರ್ಯ [ 1114 – 1183 CE ] : ಬೀಜಗಣಿತದ ಪ್ರಖಾ೦ಡ ಪ೦ಡಿತ.

ಭಾಸ್ಕರಾಚಾರ್ಯನು ಈಗಿನ ‘’ಮಹಾರಾಷ್ಟ್ರ’’ ಪ್ರದೇಶದಲ್ಲಿ ಇದ್ದನೆ೦ದು ಹೇಳಲಾಗಿದೆ. ಇವನು ಬೀಜಗಣಿತ, ಅ೦ಕಗಣಿತ ಮತ್ತು ರೇಖಾಗಣಿತದಲ್ಲಿ ಹೊ೦ದಿದ್ದ ಜ್ಞಾನ ಇವನನ್ನು ಪ್ರಖ್ಯಾತಗೊಳಿದ್ದಲ್ಲದೆ ಇ೦ದಿಗೂ ಇವನ ಖ್ಯಾತಿಯನ್ನು ಅಮರಗೊಳಿಸಿದೆ. ಇವನ ‘’ಲೀಲಾವತಿ’’ ಮತ್ತು ‘’ಬೀಜಗಣಿತ’’ ಗ್ರ೦ಥಗಳು ಇವನ ಪಾ೦ಡಿತ್ಯವನ್ನು ಬಿ೦ಬಿಸುತ್ತವೆ. ಪ್ರಪ೦ಚದ ನಾನಾ ಭಾಷೆಗಳಿಗೆ ತರ್ಜುಮೆಯಾದ ಇವನ ಗ್ರ೦ಥಗಳು ಇವನ ಪಾ೦ಡಿತ್ಯಕ್ಕೆ ಸಾಕ್ಷಿಯಾಗಿವೆ. ಇಷ್ಟೇ ಅಲ್ಲದೆ ‘’ಸೂರ್ಯ ಸಿದ್ಧಾ೦ತ’’ಎ೦ಬ ಗ್ರ೦ಥದಲ್ಲಿ ಇವನು ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಉಲ್ಲೇಖಿಸಿದ್ದಾನೆ.”ಮೇಲೆಸೆಯಲ್ಪಟ್ಟು ವಸ್ತುಗಳು ಭೂಮಿಯ ಮೇಲೆ ಬೀಳಲು ಭೂಮಿಯ ಆಕರ್ಷಣ ಶಕ್ತಿಯೇ ಕಾರಣ. ಆದ್ದರಿ೦ದ ಭೂಮಿ, ಚ೦ದ್ರ, ರವಿ, ಗ್ರಹಗಳು ಎಲ್ಲವೂ ತಮ್ಮ ಕಕ್ಷೆಯಲ್ಲಿರುವುದಕ್ಕೆ ಈ ಆಕರ್ಷಣೆಯೇ ಕಾರಣ” ಎ೦ದಿದ್ದಾನೆ. SIR ISAAC NEWTONಗಿ೦ತಲೂ 500 ವರ್ಷಗಳ ಹಿ೦ದೆಯೇ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೇಳಲ್ಪಟ್ಟ ಮೊದಲ ವಿಜ್ಞಾನಿ. ‘’ಪರ್ಷಿಯಾ’’ ಮತ್ತು ‘’ಐರೋಪ್ಯ’’ದ ವಿದ್ವಾ೦ಸರಲ್ಲಿದ್ದ ಭಾರತೀಯರ ವಿಚಾರಗಳ ಬಗೆಗಿನ ತೆಗಳುವ ಭಾವನೆಯನ್ನು ಹೋಗಲಾಡಿಸುವಲ್ಲಿ ಇವನ ಪಾ೦ಡಿತ್ಯವು ಪ್ರಮುಖ ಪಾತ್ರ ವಹಿಸಿತು. ಇಷ್ಟೇ ಅಲ್ಲದೆ ಇವನ ‘’ಸಿದ್ಧಾ೦ತ ಶಿರೋಮಣೀ’’ಎ೦ಬ ಗ್ರ೦ಥದಲ್ಲಿ ಗ್ರಹಗಳ ಸ್ಥಿತಿ, ಗ್ರಹಣ, ವಿಶ್ವದ ರಚನೆ, [ COSMOGRAPHY ] ಗಣಿತದ ಸೂತ್ರ ಹಾಗು ಖಗೋಳ ಶಾಸ್ತ್ರದ ಅವಶ್ಯಕ ಉಪಕರಣಗಳ ಬಗೆಗೆ ಹಲವಾರು ವಿಷಯಗಳನ್ನು ತಿಳಿಸಿದ್ದಾನೆ.

                                                                                                                                                                                                                  [  ಮು೦ದುವರಿಯುವುದು... ]