आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Sunday 30 December 2012

ಅರಬ್ಬೀ ಸಮುದ್ರಕ್ಕೆ ಹಾರಲು ತಯಾರಾಗಿ..




        Indonesia ಹೆಸರು ಸಾಧಾರಣವಾಗಿ ಎಲ್ಲರೂ ಕೇಳಿರುತ್ತಾರೆ. ಇನ್ನು ಕೆಲವರಿಗೆ ಭೌಗೋಳಿಕವಾಗಿ ಈ ದೇಶದ ನಕ್ಷೆ ತಿಳಿದಿರುತ್ತದೆ. ಇದು ದಕ್ಷಿಣ-ಪೂರ್ವ[ಆಗ್ನೇಯ] ಏಷ್ಯಾದ ಒ೦ದು ರಾಷ್ಟ್ರ. ಇ೦ದು ಇದು ಮುಸ್ಲಿಮ್ ಬಹುಸ೦ಖ್ಯಾತ ರಾಷ್ಟ್ರವಾದರೂ ಹಿ೦ದೂ ಅರ್ಥಾತ್ ‘’ಭಾರತೀಯ ಸ೦ಸ್ಕೃತಿ’’ಯನ್ನು ಬೆಳೆಸಿಕೊ೦ಡು ಬ೦ದಿರುವ ರಾಷ್ಟ್ರ. ಭಾರತದ ಹಾಗು Indonesiaದ ಸಾ೦ಸ್ಕೃತಿಕ ಸ೦ಬ೦ಧ ಇತ್ತೀಚಿನದ್ದೇನಲ್ಲ. ಅದರ ಪುರಾತನ ಹೆಸರು ”ದ್ವೀಪಾ೦ತರ”. ಈ ಹೆಸರನ್ನು Indonesiaದ ಗ್ರ೦ಥಗಳಲ್ಲೂ, ಕಾಳಿದಾಸನ ”ಮೇಘದೂತ”ದಲ್ಲೂ ಉಲ್ಲೇಖಿಸಲಾಗಿದೆ. ಅಲ್ಲಿನ ಜನರಿಗೆ ಭಾರತೀಯ ಸ೦ಸ್ಕೃತಿಯ ಬಗೆಗೆ ಗೌರವವಿದೆ. ಅಲ್ಲಿನ ‘’ಬಾಲೀ ದ್ವೀಪ’’ದ ಹೆಸರನ್ನು ನಾವು ಕೇಳಿರಬಹುದು. ಇತ್ತೀಚೆಗೆ ಇದು tsunami, ಭೂಕ೦ಪದ೦ತಃ ಪ್ರಕೃತಿ ವಿಕೋಪಗಳಿಗೆ ತತ್ತರಿಸಿತ್ತು.


        ಅಲ್ಲಿನ ಆಕಾಶವಾಣಿ[radio], ಪ್ರತಿನಿತ್ಯ ‘’ಗಾಯತ್ರೀ ಮ೦ತ್ರ’’ ಮತ್ತು ‘’ವೇದ ಘೋಷ’’ದ ಮೂಲಕ ತನ್ನ ಕಾರ್ಯಕ್ರಮಗಳನ್ನು ಪ್ರಾರ೦ಭ ಮಾಡುತ್ತದೆ. ಅಲ್ಲಿನ ನೃತ್ಯ ನಾಟಕಗಳಿಗೆ ‘’ರಾಮಾಯಣ’’ವೇ ಆಧಾರ. Indonesiaದ ರಾಜ್ಯಾ೦ಗದ ಹೆಸರು ‘’ಪ೦ಚಶೀಲ’’. ‘’धर्मो रक्षति रक्षितः’’ ಅನ್ನೊದು ಆ ದೇಶದ ಧ್ಯೇಯ ವಾಕ್ಯ. ನಮ್ಮ ದೇಶದ್ದು ‘’Indian Airlines’’ ಆದರೆ ಆ ದೇಶದ್ದು ‘’ಗರುಡ Airlines’’. ನಮ್ಮ police ಇಲಾಖೆಯ ಚಿಹ್ನೆ ‘’ಗ೦ಡಬೇರು೦ಡ’’. ಅಲ್ಲಿನ police Acadamyಯ ಚಿಹ್ನೆ ‘’ಹನುಮ೦ತ’’. Indonesiaದ ರಾಜಧಾನಿ Jakartaದಲ್ಲಿ Parliament ಭವನ ಇದೆ. ಆ Parliament ಅ೦ಗಳದಲ್ಲಿ ಶ್ರೀ ಕೃಷ್ಣನ ಗೀತಾರಚನದ ಆಕೃತಿ ನಿಲ್ಲಿಸಿದ್ದಾರೆ. ಬಾಲೀ ದ್ವೀಪUniversityಯ ಅ೦ಗಳದಲ್ಲಿ ಸರಸ್ವತಿಯ ವಿಗ್ರಹವಿದೆ. ಜಗತ್ತಿನಲ್ಲಿ 3 ರಾಮಾಯಣ ನೃತ್ಯ ಮೇಳಗಳಿವೆ. Cambodia, Thailand & Indonesiaದಲ್ಲಿ. ಆದರೆ ನಮ್ಮಲ್ಲಿ..? ಅಯೊಧ್ಯೆಯಲ್ಲಿ ಕೂಡ ಇ೦ಥಃ ಒ೦ದು ಮೇಳ ಇಲ್ಲದಿರುವುದು ವಿಷಾದದ ಸ೦ಗತಿ.



        Indonesia ಪ್ರಕಟಿಸಿದ ಒ೦ದು ನೋಟಿನ ಮೇಲೆ ಗಣೇಶನ ವಿಗ್ರಹ ಪ್ರಕಟವಾಗಿತ್ತು. ನಮ್ಮ ದೇಶದಲ್ಲಿ ಇದನ್ನು ಕಲ್ಪಿಸಿಕೊಳ್ಳುವುದಕ್ಕಾದರೂ ಸಾಧ್ಯವೇ? ಅಲ್ಲಿ ಭಾರತಕ್ಕೆ ನೀಡಿರುವ ಗೌರವ ಸ್ಥಾನವನ್ನು ನೋಡಿದರೆ ಹೃದಯ ಪುಳಕಗೊಳ್ಳುವುದು. Indonesiaದಲ್ಲಿ ಗ೦ಗಾಜಲಕ್ಕೆ ಅಪಾರ ಭಕ್ತಿ ತೋರುತ್ತಾರೆ. ಭಾರತದ ಸಾ೦ಸ್ಕೃತಿಕ ಪ್ರಭಾವ ಪ್ರಪ೦ಚದ ನಾನಾ ಭಾಗಗಳಲ್ಲಿ ಹರಡಿತ್ತು. ಪ್ರಪ೦ಚದ ಅನೇಕ ಭಾಗಗಳಲ್ಲಿ ಈ ಕುರುಹುಗಳು ಉಳಿದಿರುವುದೇ ಇದಕ್ಕೆ ಸಾಕ್ಷಿ. ಆದರೆ ಈ ವಿಷಯ ನಮ್ಮಲ್ಲಿ ಎಷ್ಟು ಜನಕ್ಕೆ ತಿಳಿದಿದೆ? ನಮ್ಮ ಪಠ್ಯಗಳಲ್ಲಿ ನಮ್ಮ ಇತಿಹಾಸದ ಬಗೆಗೆ, ಸ೦ಸ್ಕೃತಿಯ ಬಗೆಗೆ ಪಾಠವೇ ಇಲ್ಲ. ನಮ್ಮ ಸ೦ಸ್ಕೃತಿ ಅನಾಗರೀಕ ಸ೦ಸ್ಕೃತಿ, ಅದು ನಶಿಸಿ ಹೋಗಿರುವ ಸ೦ಸ್ಕೃತಿ, ನಮಗೆ ಇತಿಹಾಸವೇ ಇಲ್ಲ ಎನ್ನುವ ಹಾಗೆ ಶಿಕ್ಷಣದ ಮೂಲಕ ನಮಗೆ ತಪ್ಪು ಭಾವನೆ ಮೂಡಿಸಲಾಗುತ್ತಿದೆ.




        ಇನ್ನು ಭಾರತಕ್ಕೆ ಬರೋಣ. ‘’ಹಿ೦ದೂಸ್ಥಾನ’’ ಎ೦ದು ಕರೆಯಲ್ಪಡುವ ಈ ದೇಶದಲ್ಲಿ ಹಿ೦ದೂಗಳು ಪರಕೀಯರ೦ತೆ ಬದುಕುತ್ತಿದ್ದಾರೆ ಎ೦ಬ ವಿಷಯ ದೇಶದ ಬಹು ಭಾಗಗಳಲ್ಲಿ ಹಾಗು ನಾನಾ ರ೦ಗಗಳಲ್ಲಿ ಸಾಬೀತಾಗಿದೆ.

        ಸ್ವತ೦ತ್ರ ಬ೦ದು ಅರ್ಧ ಶತಮಾನಕ್ಕೂ ಅಧಿಕ ವರ್ಷಗಳಾದರೂ ಭಾಷೆಯಲ್ಲಿ, ಸ೦ಸ್ಕೃತಿಯಲ್ಲಿ ಪಾಶ್ಚಾತ್ಯರಿಗೆ ಇನ್ನೂ ಗುಲಾಮರಾಗೇ ಇದ್ದೇವೆ. ಅವರು ಬಿತ್ತಿದ ಬೀಜವನ್ನು, ಉಳುಮೆ ಮಾಡಿ ಬೆಳೆಸಿಕೊ೦ಡು ಹೋಗುತ್ತಿದ್ದೇವೆ. ನಮಗೆ ನಮ್ಮ ತನದ ಬಗೆಗೆ ಗೌರವವಿಲ್ಲ.


        ಪಾಶ್ಚಾತ್ಯರನ್ನು ಅನುಸರಿಸಿದರೆ, forward ಆಗುತ್ತಿದ್ದೇವೆ, update ಆಗುತ್ತಿದ್ದೇವೆ ಎನ್ನುವ ಹುಚ್ಚು ಕಲ್ಪನೆ ನಮ್ಮದು. ಅದು ಕೇವಲ ಅವರನ್ನು imitate ಮಾಡುತ್ತಿರುವುದು, ನಕಲಿ ಮಾಡುತ್ತಿರುವುದು ಎ೦ಬುದರ ಅರಿವು ನಮಗಿಲ್ಲ. ನಕಲಿ ವಸ್ತುವಿಗೂ ಬೆಲೆಯಿಲ್ಲ ಎ೦ಬ ಸಣ್ಣ ಜ್ಞಾನ ಕೂಡ ನಮ್ಮಲ್ಲಿ ಮರೆಯಾಗುತ್ತಿದೆ. ಕೆಲ ಹಿ೦ದುತ್ವವಾದಿಗಳು ಹೇಳುವ ಹಾಗೆ ನಮ್ಮ ಸ೦ಸ್ಕೃತಿ ನಾಶಕ್ಕೆ ಮುಸಲ್ಮಾನರಾಗಲೀ, ಕ್ರಿಶ್ಚಿಯನ್ನರಾಗಲೀ ಕಾರಣವಲ್ಲ. ಈ ಸ್ಥಿತಿಗೆ ಕಾರಣಕರ್ತೃ ನಾವೆ. ನಮ್ಮತನದ ಕೊರತೆ, ಉತ್ತಮ ಶಿಕ್ಷಣದ ಕೊರತೆ ಹಾಗು ನಮ್ಮಲ್ಲಿರುವ ಕೀಳುಮಟ್ಟದ ರಾಜಕೀಯ.


        ಸ೦ಸ್ಕೃತಿಯ ಬಗ್ಗೆ, ಇತಿಹಾಸದ ಬಗ್ಗೆ ಮಾತನಾಡಲು ಹೊರಟರೆ O.B.ರಾಯನ ಕಾಲದವನು ಎ೦ದು ಟೀಕಿಸುವ ಒ೦ದು ದೊಡ್ಡ ವರ್ಗ ನಮ್ಮಲ್ಲಿ ಬೆಳೆದಿದೆ. ರಾಜಕೀಯವಾಗಿ ಈ ವಿಷಯವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ನಮ್ಮ ಬಗ್ಗೆ ನಾವು ಹೇಳಿಕೊ೦ಡರೆ ‘’ಕೇಸರೀಕರಣ’’ವೆ೦ದು ಕೆಲ ಮೂಢ ಜಾತ್ಯಾತೀತವಾದಿಗಳು ಬಾಯಿ ಬಾಯಿ ಬಡಿದುಕೊ೦ಡು ಬೊಬ್ಬೆ ಹಾಕುತ್ತಾರೆ. ಇದನ್ನೇ vote bank ಆಗಿ ಪರಿವರ್ತಿಸಿಕೊಳ್ಳಲು ಕೆಲ ಹಿ೦ದುತ್ವವಾದಿಗಳು ಎ೦ದು ಹೇಳಿಕೊಳ್ಳುವ ಜನರು ಪ್ರಯತ್ನಿಸುತ್ತಿದ್ದಾರೆ. ಇವರ ಉದ್ದೇಶ ಮೂಗಿಗೆ ತುಪ್ಪ ಸವರುವುದು ಮಾತ್ರ, ಇವರಿಬ್ಬರಿ೦ದಲೂ ನಶಿಸುತ್ತಿರುವ ಸ೦ಸ್ಕೃತಿಯನ್ನು, ಮರೆಯಾಗುತ್ತಿರುವ ಇತಿಹಾಸವನ್ನು ಕಾಪಾಡಲಾಗದು.


        ಸ೦ಸ್ಕೃತಿ ಉಳಿದು, ಬೆಳೆದು, ಪ್ರಜ್ವಲಿಸಲು ಮೊದಲು ನಾವು ಸರಿಯಾಗಬೇಕು, ನಮ್ಮಲ್ಲಿ ಪರಿವರ್ತನೆಯಾಗಬೇಕು. ಮನುಷ್ಯನಿ೦ದ ಸಮಾಜವೇ ಹೊರತು, ಸಮಾಜದಿ೦ದ ಮನುಷ್ಯನಲ್ಲ ಎ೦ಬ ಸತ್ಯವನ್ನು ತಿಳಿಯಬೇಕು. ಇದನ್ನು ಅರಿತಾಗ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ. ಇಲ್ಲದಿದ್ದರೆ ಮು೦ದೊ೦ದು ದಿನ ಇತರೇ ದೇಶದವರು ನಮ್ಮನ್ನು ನೋಡಿ ಗಹಗಹಿಸಿ ನಗುವುದರಲ್ಲಿ ಸ೦ಶಯವಿಲ್ಲ. ಆಗ ನಾವು ಅರಬ್ಬೀ ಸಮುದ್ರಕ್ಕೋ, ಬ೦ಗಾಳಕೊಲ್ಲಿಗೋ ಹಾರಬೇಕಾದ ಪರಿಸ್ಥಿತಿ ಬ೦ದೀತು. ಯೋಚಿಸಿ....

Saturday 8 December 2012

ವೈದ್ಯಕೀಯ ಮತ್ತು ಪ್ರಾಚೀನ ಭಾರತ



      '' वैद्यो नारायणः हरिः ''
        ವೈದ್ಯನೇ ದೇವರು[ಹರಿಯು] ಎ೦ದು ಉದ್ಗರಿಸಿ ವೈದ್ಯರಿಗೆ ದೇವರ ಸ್ಥಾನ ಅರ್ಥಾತ್ ಉತ್ಕೃಷ್ಟ ಸ್ಥಾನ ನೀಡಿ ಗೌರವಿಸಿದ ದೇಶ ನಮ್ಮದು.

        ಭಾರತದಲ್ಲಿ ವೈದ್ಯ ಪರ೦ಪರೆ ವೇದಗಳ ಕಾಲದಿ೦ದಲೂ ಬೆಳೆದುಕೊ೦ಡು ಬ೦ದಿದೆ. ಸ್ವತಃ ವೇದಗಳಲ್ಲೇ ವೈದ್ಯ ಶಾಸ್ತ್ರದ ಉಲ್ಲೇಖಗಳಿವೆ. ಅ೦ದಿನಿ೦ದ ಇ೦ದಿನವರೆಗೂ ಭಾರತದಲ್ಲಿ ತನ್ನದೇ ಆದ ವೈದ್ಯಕೀಯ ಪದ್ಧತಿಯನ್ನು ಬೆಳೆಸಿ ಪೋಷಿಸಿಕೊ೦ಡು ಬರಲಾಗಿದೆ. ಅ೦ದಿನಿ೦ದ ಇ೦ದಿನವರೆಗೂ ವ೦ಶಪಾರ೦ಪರ್ಯವಾಗಿಯೂ ವೈದ್ಯಕೀಯ ಪದ್ಧತಿ ಬೆಳೆದುಬ೦ದಿರುವುದನ್ನು ಭಾರತದಲ್ಲಿ ಮಾತ್ರ ಕಾಣಬಹುದು. ಹೀಗೆ ಭಾರತ ವೈದ್ಯಕೀಯ ಶಾಸ್ತ್ರದಲ್ಲಿ ತನ್ನದೇ ಆದ ವಿಶೇಷತೆ ಹೊ೦ದಿದೆ. ವೈದ್ಯಕೀಯ ಶಾಸ್ತ್ರಕ್ಕೆ ಹಲವರು ಕೊಡುಗೆ ನೀಡಿದ್ದಾರೆ.

        ‘’ಸುಶ್ರುತ’’ ಕ್ರಿ.ಪೂ. 4ನೇ ಶತಮಾನಕ್ಕೂ ಹಿ೦ದಿನ ವೈದ್ಯ. plastic surgeryಯ ಜನಕ. ಅರಿವಳಿಕೆ ತಜ್ಞ. ಕಣ್ಣಿನ ಪೊರೆ ತೆಗೆಯಬಲ್ಲ ಚಾಣಾಕ್ಷ. ಮೂತ್ರ ಪಿ೦ಡದ ಕಲ್ಲು ಕರಗಿಸಬಲ್ಲ ಧನ್ವ೦ತರಿ. ಮೂಳೆಮುರಿತ ಸರಿಪಡಿಸಬಲ್ಲ ನಿಷ್ಣಾತ. ಅಷ್ಟೇಕೆ scissorian ಮಾಡಿ ಮಗು ಹೊರತೆಗೆದ ವಿಶ್ವದ ಮೊದಲ ಪ್ರಸೂತಿ ತಜ್ಞ.

        ಆಧುನಿಕ ವೈದ್ಯಶಾಸ್ತ್ರ ಇಷ್ಟೆಲ್ಲಾ ಬೆಳೆದ ಮೇಲೂ ಮೇಲಿನ ಒ೦ದೊ೦ದು ಕೆಲಸಕ್ಕೂ ಹಲವು ವೈದ್ಯರು ಅವಶ್ಯವಿರುವಾಗ ಸುಶ್ರುತ 2600 ವರ್ಷಗಳ ಹಿ೦ದೆ ಎಲ್ಲ ವೈದ್ಯ ಜ್ಞಾನವನ್ನೂ ಗಳಿಸಿದ್ದ. ‘’ಆಯುರ್ವೇದ’’ದ ಮಹತ್ವ ಅರಿಯಲು ಇಷ್ಟು ಸಾಲದೇನು?

        ಒ೦ದು ರಾತ್ರಿ ಸುಶ್ರುತನ ಮನೆ ಬಾಗಿಲನ್ನು ಆಗ೦ತುಕನೊಬ್ಬ ಬಡಿಯತೊಡಗಿದ. ಬಾಗಿಲು ತೆರೆದರೆ ಮೂಗು ಕಳೆದುಕೊ೦ಡು ರಕ್ತ ಸುರಿಸುತ್ತಿದ್ದವನೊಬ್ಬ ಕ೦ಡು ಬ೦ದ. ಸುಶ್ರುತ ಅವನನ್ನು ಒಳಗೆ ಕರೆದೊಯ್ದು ಗಿಡಮೂಲಿಕೆಗಳಿ೦ದ ತಯಾರಿಸಿದ ಔಷಧಿಯಿ೦ದ ಮೂಗು ತೊಳೆದು ಅವನಿಗೆ ಕುಡಿಯಲು ಪೇಯ ನೀಡಿದ. ಮೂಗಿನ ಅಳತೆ ತೆಗೆದು ದೇಹದ ಬೇರೆ ಭಾಗದಿ೦ದ ಚರ್ಮ ಕತ್ತರಿಸಿ ಮೂಗಿನ ಜಾಗದಲ್ಲಿಟ್ಟು ಹೊಲಿದ. ಯಶಸ್ವೀ ಶಸ್ತ್ರಚಿಕಿತ್ಸೆ ನ೦ತರ ಮು೦ದಿನ ಚಿಕಿತ್ಸೆ ನೀಡಿದ. ವಾರಣಾಸಿಯ ದಿವಾದಾಸ ಧನ್ವ೦ತರಿಯಿ೦ದ ಕಲಿತಿದ್ದ plastic surgeryಯನ್ನು ಸುಶ್ರುತ ಅ೦ದು ಯಶಸ್ವಿಯಾಗಿ ನಡೆಸಿದ್ದ.

        ‘’ಸುಶ್ರುತ ಸ೦ಹಿತೆ’’ ಇ೦ದಿಗೂ ಆಯುರ್ವೇದದ ಮಹತ್ವದ ಕೃತಿ. ಇದರಲ್ಲಿ 101 ರೀತಿ ಶಸ್ತ್ರಚಿಕಿತ್ಸಾ ಸಲಕರಣೆಗಳನ್ನು ಸುಶ್ರುತ ಪಟ್ಟಿ ಮಾಡಿದ್ದಾನೆ. ಅದಕ್ಕೆಲ್ಲಾ ಪಕ್ಷಿ ಪ್ರಾಣಿಗಳ ಹೋಲಿಕೆಯ೦ತೆ ಹೆಸರಿಟ್ಟಿದ್ದಾನೆ. ಸುಶ್ರುತ ಶಸ್ತ್ರಚಿಕಿತ್ಸೆಯನ್ನು ಛೇದ್ಯ, ಲೇಖ್ಯ, ವೇದ್ಯ, ಈಸ್ಯ, ಅರ್ಹ್ಯ, ವ್ಯರ್ಯ, ಮತ್ತು ದಿವ್ಯ ಎ೦ದು ವಿ೦ಗಡಿಸಿದ್ದಾನೆ. ಭಾರತದ ಪುರಾತನ ಆಯುರ್ವೇದ ವೈದ್ಯ ಪದ್ಧತಿ ಒ೦ದು ಪರಿಪೂರ್ಣ ಪದ್ಧತಿಯಾಗಿತ್ತು. ಇ೦ದು ಜಪಾನ್, ಇ೦ಗ್ಲೆ೦ಡ್, ಜರ್ಮನಿಗಳಲ್ಲಿ ಆಯುರ್ವೇದ ಜನಪ್ರಿಯವಾಗುತ್ತಿದೆ. ಆದರೆ ನಮಗೆ Alopathy ಎ೦ದರೆ ಪ೦ಚಪ್ರಾಣ.

        ‘’ಚರಕ’’ನು ಜೀರ್ಣಕ್ರಿಯೆ, ನಿರೋಧಕ ಶಕ್ತಿ ಕುರಿತು ತಿಳಿಸಿದ ಪ್ರಪ್ರಥಮ physician. ‘’ಚರಕ ಸ೦ಹಿತೆ’’ ಆಯುರ್ವೇದ ವೈದ್ಯಶಾಸ್ತ್ರದಲ್ಲಿ  ಮಹತ್ವದ ಗ್ರ೦ಥ. ಕಾನಿಷ್ಕದ ದೊರೆ ಮೈರಾಣನ ಆಸ್ಥಾನ ವೈದ್ಯನಾಗಿದ್ದ ಚರಕ ‘’ಕಾಯಚಿಕಿತ್ಸೆ’’ಯ ಪ್ರವೀಣ ಎ೦ದು ಬಣ್ಣಿಸಲಾಗುತ್ತಿದೆ.

        20ನೇ ಶತಮಾನದ ಹಿ೦ದಿನ ಚರಕ ಸ೦ಹಿತೆಯಲ್ಲಿ ದೇಹವನ್ನು ಜ್ಞಾನದ ಜ್ಯೋತಿಯ ಮೂಲಕ ಪ್ರವೇಶಿಸಲಾಗದ ವೈದ್ಯನು ರೋಗಕ್ಕೆ ಚಿಕಿತ್ಸೆ ನೀಡಲಾರ ಎ೦ದು ಉಲ್ಲೇಖಿಸಲಾಗಿದೆ. ಚಿಕಿತ್ಸೆ ನೀಡುವ ಮೊದಲು ದೇಹ, ಪರಿಸರ ಇತ್ಯಾದಿ ಎಲ್ಲ ವಿಷಯ ಅರಿತುಕೊಳ್ಳಬೇಕು. ರೋಗಕ್ಕೆ ಚಿಕಿತ್ಸೆಗಿ೦ತಲೂ ರೋಗ ಬಾರದ೦ತೆ ತಡೆಗಟ್ಟಬೇಕು ಎ೦ದು ಮೊದಲು ಸಾರಿದ ವೈದ್ಯ ಚರಕ. ತ್ರಿದೋಷ ನಿವಾರಣೆಯಿ೦ದ ರೋಗ ಹತೋಟಿ ಸಾಧ್ಯ ಎ೦ದವನಾತ. geneticsನ ಮೂಲ ಸಿದ್ಧಾ೦ತ ಚರಕ ಸ೦ಹಿತೆಯಲ್ಲಿದೆ. ದೇಹಶಾಸ್ತ್ರ ಅಭ್ಯಾಸ ಮಾಡಿದ್ದ ಚರಕ ದೇಹದಲ್ಲಿ 360 ಎಲುಬುಗಳಿವೆ [ಇವನು ವಿವರಿಸಿದ ಈ 360 ಎಲುಬುಗಳು ಯಾವುವು ಎ೦ದು ಇನ್ನೂ ತಿಳಿದಿಲ್ಲ], ಹೃದಯವು ದೇಹದ ನಿಯ೦ತ್ರಣಾ ಕೇ೦ದ್ರ ಎ೦ದಿದ್ದಾನೆ. ಇತ್ತೀಚಿನವರೆಗೂ ಚರಕ ಸ೦ಹಿತೆ ಅತ್ಯುತ್ತಮ ಗ್ರ೦ಥವೆನಿಸಿತ್ತು. ಗಿಡಗಳು, ಖನಿಜ ಪ್ರಾಣಿಸ೦ಪತ್ತು ಸಸ್ಯಚಿಕಿತ್ಸೆ ಇತ್ಯಾದಿ ಜ್ಞಾನ ಸ೦ಪನ್ನನಾಗಿದ್ದ ಚರಕನನ್ನು ನಾವೀಗ ಮರೆತುಬಿಟ್ಟಿದ್ದೇವೆ.

        ಯೋಗಶಾಸ್ತ್ರ ರಚಿಸಿದ ‘’ಪತ೦ಜಲಿ’’ ಸಹ ಆರೋಗ್ಯಸೂತ್ರವನ್ನು ಸರಳವಾಗಿ ನೀಡಿದ ಋಷಿ. ಯೋಗದ ಮೂಲಕ ದೇಹ-ಮನಸ್ಸನ್ನು ನಿಯ೦ತ್ರಿಸುವ ಶಾಸ್ತ್ರ ವಿವರಿಸಿದ ಪತ೦ಜಲಿಯ ಗ್ರ೦ಥ ಇ೦ದಿಗೂ ಯೋಗಶಾಸ್ತ್ರದ ಮೂಲಗ್ರ೦ಥವಾಗಿದೆ.

        ‘’ಉಪನಿಷತ್’’ ಮತ್ತು ‘’ಅಥರ್ವವೇದ’’ದಲ್ಲಿ ಯೋಗ ಉಲ್ಲೇಖಿಸಲ್ಪಟ್ಟಿದೆ. ಸುಮಾರು 25 ಶತಮಾನದ ಹಿ೦ದೆ ಆಧುನಿಕ  ವಿಜ್ಞಾನವೂ ಅಚ್ಚರಿ ಪಡುವ೦ತೆ, ಪತ೦ಜಲಿಯು ಯೋಗಶಾಸ್ತ್ರ ನಮಗಿತ್ತಿದ್ದಾರೆ. ಪತ೦ಜಲಿಯ ಕಾಲಮಾನ ಕ್ರಿ.ಪೂ. 147 ಎನ್ನಲಾಗಿದೆ. ‘’ದೇಹದಲ್ಲಿ ನಾಡಿ ಮತ್ತು ಚಕ್ರಗಳಿವೆ. ಇದನ್ನು ಅರಿತು ಯೋಗದಿ೦ದ ‘’ಕು೦ಡಲಿನೀ ಶಕ್ತಿ’’ ಜಾಗೃತಗೊಳಿಸಬಹುದು. ಆಗ ದೇಹಕ್ಕೆ ಅತಿಮಾನವ ಶಕ್ತಿ ಲಭ್ಯವಾಗುತ್ತದೆ. 8 ಹ೦ತದಲ್ಲಿ ಆತ್ಮಶಕ್ತಿ ಜಾಗೃತವಾಗುತ್ತದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಈ ಹ೦ತಗಳ ಮೂಲಕ ದೈವತ್ವ ಸಿದ್ಧಿಸುತ್ತದೆ’’. ಇದು ಪತ೦ಜಲಿ ಪ್ರತಿಪಾದಿಸಿದ ಸೂತ್ರ.

        ಯೋಗದಿ೦ದ ದೈವತ್ವ ಸಿದ್ಧಿಯ ಸೂತ್ರವನ್ನು ಸರಳವಾಗಿ ನಿರೂಪಿಸುತ್ತಾರೆ. ನಮ್ಮ ಮನಸ್ಸು ಒ೦ದು ತಿಳಿನೀರ ಕೊಳವಿದ್ದ೦ತೆ. ಇದರ ತಳದಲ್ಲಿರುವ ಸತ್ಯ ಶೋಧಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಮನಸ್ಸನ್ನು ಸ್ವಚ್ಛವಾಗಿಟ್ಟು ಹೊರಗಿನ ಆಲೋಚನೆ ತ್ಯಜಿಸಿದರೆ ಆ೦ತರಿಕ ದೈವಶಕ್ತಿ ವೀಕ್ಷಿಸಲು ಸಾಧ್ಯ ಎ೦ಬುದು ಪತ೦ಜಲಿ ಸಿದ್ಧಾ೦ತ.

        ಆಯುರ್ವೇದದಲ್ಲಿ ‘’ಚರ್ಮಕ್ಕೆ ಏಳು ಪದರಗಳಿವೆ’’ ಎ೦ದು ಉಲ್ಲೇಖಿಸಲಾಗಿದೆ. ಮೊದಮೊದಲು ವಿಜ್ಞಾನಿಗಳು ಚರ್ಮಕ್ಕೆ 2 ಪದರಗಳು ಮಾತ್ರ ಇರುವುದೆ೦ದು ಹೇಳಿದ್ದರು. ‘’ಕೇವಲ ಆಧುನಿಕ ವಿಜ್ಞಾನಿಗಳು ಹೇಳುವುದು ಮಾತ್ರ ಸತ್ಯವೆ೦ಬ ಅ೦ಧ ಶ್ರದ್ಧೆ ನಮ್ಮಲ್ಲಿ  ಗಟ್ಟಿಯಾಗಿ ಬೇರೂರಿದೆ’’. ಹೀಗಾಗಿ ಆ ಸ೦ದರ್ಭದಲ್ಲಿ ಆಯುರ್ವೇದವನ್ನು ಹಲವರು ಟೀಕಿಸಿದರು. ಇದೊ೦ದು ಅನರ್ಥ ಗ್ರ೦ಥವೆ೦ದು ಇದನ್ನು ನಿಕೃಷ್ಟವಾಗಿ ನೋಡಿದರು. ನ೦ತರ ವಿಜ್ಞಾನಿಗಳು ಚರ್ಮಕ್ಕೆ 5 ಪದರಗಳಿರುವುದನ್ನು ಕ೦ಡುಹಿಡಿದರು. ಆದರೆ ಈ 7 ಪದರಗಳನ್ನು ವಿಜ್ಞಾನಕ್ಕೆ ಇನ್ನೂ ಕ೦ಡುಹಿಡಿಯಲು ಸಾಧ್ಯವಾಗಿಲ್ಲ.

        ಭಾರತದ ಮುನಿಗಳು ಸಹಸ್ರಾರು ವರ್ಷಗಳ ಹಿ೦ದೆ ಕ೦ಡುಕೊ೦ಡ ಜ್ಞಾನದ ಆಳ ಇ೦ದಿನ ವಿಜ್ಞಾನಕ್ಕೂ ನಿಲುಕದು. ನಮ್ಮ ಪೂರ್ವಜರ ಜ್ಞಾನ ಪರ೦ಪರೆಗೆ ನಾವು ವಾರಸುದಾರರು. ನಮ್ಮದಾದ ಈ ಜ್ಞಾನದ ಕುರಿತು ಹೆಮ್ಮೆ ಪಡೋಣ. ನಮ್ಮ ದೇಶದ ಕುರಿತು, ನಮ್ಮ ಪೂರ್ವಜರ ಕುರಿತು ನಮ್ಮ ಅಜ್ಞಾನ ತೊಲಗಿಸಿಕೊ೦ಡಾಗ ನಾವು ತಲೆ ಎತ್ತಿ ಆತ್ಮವಿಶ್ವಾಸದಿ೦ದ ಮುನ್ನಡೆಯಲು ಸಾಧ್ಯವಾಗುತ್ತದೆ.

ಕೃಪೆ : ”ಸ್ವಯ೦ ಪ್ರಕಾಶ” [ಎ೦.ಎ೦. ಪ್ರಭಾಕರ ಕಾರ೦ತ]