आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Friday 22 February 2013

ಭಾರತ ಹಿ೦ದೂಗಳ ದೇಶವಲ್ಲ...!




ಭಾರತ... ಭಾರತ ಎ೦ದ ಕೂಡಲೇ ನಮ್ಮ ಕಿವಿ ನೆಟ್ಟಗಾಗುತ್ತದೆ. ಭಾರತ, ಹಿ೦ದೂಸ್ಥಾನ, ಜ೦ಬೂದ್ವೀಪ, ಎಷ್ಟೊ೦ದು ಹೆಸರು ನಮ್ಮ ದೇಶಕ್ಕೆ. ಹಲವು ಹೆಸರುಗಳಿ೦ದ ನಮ್ಮ ದೇಶವನ್ನು ವರ್ಣಿಸಬಹುದು. ಆದರೆ ಎಲ್ಲ ಹೆಸರುಗಳ ಮಧ್ಯೆ India ಎ೦ಬ ಕರ್ಕಶ ಪದ ಕಿವಿಗೆ ಬೀಳುತ್ತದೆ. ಇದೇ ಇ೦ದು ಚಿ೦ತಿಸಬೇಕಾದ ವಿಷಯ. ಭಾರತ India ಆಗಿ ಬಹು ವೇಗವಾಗಿ ಬದಲಾಗುತ್ತಿರುವ ಕಾಲವಿದು.! ಹೆಸರು ಏನೇ ಆಗಲಿ ಇದು ನಮ್ಮ ದೇಶ ತಾನೇ? ಎ೦ದು ಕೆಲವರು ಯೋಚಿಸಬಹುದು. ಅಯ್ಯೋ ಮೂರಕ್ಷರದ ಬದಲಾವಣೆಯಲ್ಲಿ ಏನಿದೆ ಮಹಾ? ಎ೦ದು ಬಹು ತುಚ್ಛವಾಗಿ ಹೇಳುವ ಜನ ನಮ್ಮ ಮು೦ದೆ ಬಹುಸ೦ಖ್ಯಾತರಾಗಿ ಕ೦ಡುಬರುತ್ತಾರೆ. ಆದರೆ ಬದಲಾವಣೆಯ ಹಿ೦ದೆ ಭಾರತಕ್ಕೆ, ಭಾರತೀಯತೆಗೆ, ಭಾರತೀಯ ಸ೦ಸ್ಕೃತಿಗೆ ಬಹು ದೊಡ್ಡ ಅಪಾಯವಿದೆ. ಭಾಷೆಯಲ್ಲಿ ಬದಲಾವಣೆ ಕಾಲಕಾಲಕ್ಕೆ ತಕ್ಕ೦ತೆ ನಡೆಯುತ್ತಲೇ ಇರುತ್ತದೆ. ಎಲ್ಲ ಭಾಷೆಗಳ ಪರಿಸ್ಥಿತಿಯೂ ಅಷ್ಟೆ. ಅ೦ದಮೇಲೆ India ಎನ್ನುವುದರಲ್ಲೇನು ಆತ೦ಕ ಎ೦ದು ಅನ್ನಿಸಬಹುದು. ಹೌದು.. ಭಾರತ ಎ೦ಬ ಶಬ್ಧ India ಆಗಿ ಬದಲಾಗುತ್ತಿರುವುದರ ಹಿ೦ದೆ ಭಾರತೀಯ ಸ೦ಸ್ಕೃತಿಗೆ ದೀರ್ಘವಾದ ಕುತ್ತು ಒದಗಿಬರಲಿದೆ. ಪಾಶ್ಚಾತ್ಯರ ಎ೦ಜಿಲನ್ನೇ ತೀರ್ಥವೆ೦ದು ಸೇವಿಸಿದವರ, ಹಾಗು ಸೇವಿಸುತ್ತಿರುವವರಿ೦ದ ಹೇಯ ಪರಿವರ್ತನೆ ಸಹಜ ಎನ್ನಿಸುವಷ್ಟು ಸಲೀಸಾಗಿ ನಡೆಯುತ್ತಿದೆ.

Indus, Indica ಎ೦ಬ ಅರ್ಥವಿಲ್ಲದ ಶಬ್ಧದಿ೦ದ ಜನ್ಮ ತಾಳಿದ India ಪದವನ್ನು ಸ೦ಪೂರ್ಣವಾಗಿ ಅ೦ಗೀಕರಿಸಿದರೆ ಭಾರತೀಯರಲ್ಲಿ ಚಿ೦ತಕರೇ ಇಲ್ಲವೆ೦ದಾಗುವುದು. ಗ್ರೀಕರು, ಪರ್ಷಿಯನ್ನರು, ಸಿ೦ಧೂ ನದಿ ಕಣಿವೆ ಭಾಗದಿ೦ದ ಭಾರತವನ್ನು ಪ್ರವೇಶಿಸಿದರು. ಅವರಿಗೆ ಸಿ೦ಧೂ ಎ೦ದು ಉಚ್ಛರಿಸಲು ಆಗಲಿಲ್ಲ. ಸಿ೦ಧೂ ಎ೦ದರೆ ಮ೦ಗಳ, ಶುಭ ಎ೦ದು. ಅ೦ತಃ ಅರ್ಥಪೂರ್ಣವಾದ ಶಬ್ಧ ಅವರ ಬಾಯಿಯಲ್ಲಿ ಹಿ೦ದೂ ಆಯಿತು. ಸ್ಪಷ್ಟ ಉಚ್ಛಾರಣೆ ಬರದ ದಪ್ಪ ನಾಲಗೆಯವರ ಬಾಯಿಯಲ್ಲಿ ಸಿ೦ಧೂ ಕಣಿವೆ ಪ್ರದೇಶ ಹಿ೦ದೂ ಕಣಿವೆಯೆ೦ದಾಗಿ ಅಲ್ಲಿ ವಾಸಿಸುವ ಜನರನ್ನು ಹಿ೦ದೂಗಳೆ೦ದೂ, ಅವರ ಧರ್ಮವನ್ನು ಹಿ೦ದೂ ಧರ್ಮವೆ೦ದು ಕರೆದರು. ಹಿ೦ದೂ ನದಿ ಇ೦ದು ಬಹು ಭಾಗ ಹರಿಯುತ್ತಿರುವುದು ಪಾಕಿಸ್ತಾನದಲ್ಲಿ. ಅಲ್ಲಿ ಇರುವುದು ಮುಸಲ್ಮಾನರು [ ಕನಿಷ್ಟ ಪ್ರಮಾಣದಲ್ಲಿ ಇತರರು ]. ಅರ್ಥದಲ್ಲಿ ನೋಡಿದರೆ ಪಾಕಿಸ್ತಾನಿಗಳು ಹಿ೦ದೂಗಳು. ಅರ್ಥದಲ್ಲಿ ಪಾಕಿಸ್ತಾನದಲ್ಲಿರುವುದು ಹಿ೦ದೂ ಧರ್ಮ. ದೃಷ್ಟಿಕೋನದಲ್ಲಿ ನೋಡಿದಾಗ ಕೆಲ ಬುದ್ಧಿಜೀವಿಗಳು ಬೊಬ್ಬೆಹಾಕುವ ಹಾಗೆ ಭಾರತ ಹಿ೦ದೂಸ್ಥಾನವಲ್ಲ ಎ೦ಬುದು ಅರ್ಥಪೂರ್ಣವಾಗಿದೆಯಲ್ಲ?

ಪಾಶ್ಚಾತ್ಯರು ಹಿ೦ದೂ ಕಣಿವೆಯನ್ನು indus vally ಎ೦ದು indus vally ಇ೦ದ India ಎ೦ದು ಪರಿವರ್ತಿಸಿದರು. ಭೌಗೋಳಿಕವಾಗಿ ಭಾರತ ಇ೦ದು ಬ್ರಿಟೀಷರಿ೦ದ ಸ್ವತ೦ತ್ರವಾಗಿದೆಯಾದರೂ ಭಾರತೀಯರು ಮಾನಸಿಕವಾಗಿ ಇ೦ದೂ ಬ್ರಿಟೀಷರಿಗೆ ಗುಲಾಮರಾಗಿದ್ದಾರೆ ಎ೦ಬುದು ಈಗಾಗಲೇ ತಿಳಿದಿರುವ ವಿಷಯ. India ಶಬ್ಧ ಹೋಗಲಿ ಬಿಡಿ, ಹಿ೦ದೆ ಪ೦ಚೆ ಉಡುತ್ತಿದ್ದ ಭಾರತೀಯರು ಇ೦ದು pant shirt ಧರಿಸುವುದಿಲ್ಲವೇ? ತಮಗೆ ಸರಿಹೊ೦ದುವುದನ್ನು ಸ್ವೀಕರಿಸುವುದರಲ್ಲಿ ತಪ್ಪೇನು? ಇದೇ ರೀತಿ India ಶಬ್ಧವೂ ಕೂಡ ಎ೦ದು ಹಲವರ ಅಭಿಪ್ರಾಯ. आनॊभद्रा: कृतवॊ यन्तु विश्वत: ಅ೦ದರೆ ಮ೦ಗಳಮಯವಾದದ್ದು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು ಎ೦ದು ಹೇಳಿದವರು ನಾವೇ.. ಆದರೆ ಸ್ವೀಕರಿಸುವಾಗ ಯೋಚಿಸಿ ಸ್ವೀಕರಿಸಬೇಕಲ್ಲವೇ? ನಮ್ಮ ದೇಶವನ್ನು ಗುರುತಿಸಲು ನಮ್ಮಲ್ಲಿ ಶಬ್ಧ ದಾರಿದ್ರ್ಯವಿದೆಯಾ? ಸ್ವ೦ತಿಕೆಯ ಕೊರತೆಯಿದೆಯಾ?
ಸ್ವಲ್ಪ ಸ್ವಾಭಿಮಾನ ಬೇಕಷ್ಟೆ, ಸ್ವಲ್ಪ ಇಚ್ಛಾ ಶಕ್ತಿ ಬೇಕಷ್ಟೆ.

ಸಿ೦ಧೂ ಕಣಿವೆ ಪ್ರದೇಶವನ್ನು  Indus valley ಎ೦ದರೆ, ಅದರಿ೦ದುದ್ಭವಿಸಿರುವ India ಭಾರತದ ಅನ್ವರ್ಥವಾದರೆ ಭಾರತ ಭೌಗೋಳಿಕವಾಗಿ ಸ೦ಕುಚಿತಾರ್ಥವನ್ನು ಹೊ೦ದುವುದಿಲ್ಲವೇನು? ಭಾರತ ಹಲವು ನದಿತೀರ್ಥಗಳಿ೦ದ ಪವಿತ್ರವಾಗಿರುವ ದೇಶ. ಇಲ್ಲಿ ಹಲವಾರು ನದಿಯ ನಾಗರೀಕತೆ ಬೆಳೆದುಬ೦ದಿವೆ. ಹಲಾವಾರು ನದಿಗಳು ಭಾರತೀಯರನ್ನು ಪೋಷಿಸುತ್ತಿವೆ. ಅ೦ದಮೇಲೆ ಸಿ೦ಧೂ ನದಿಯ ಪಾತ್ರದ ಜನರ ಹೆಸರಿನಿ೦ದೇಕೆ ಭಾರತೀಯರನ್ನು ಗುರುತಿಸಬೇಕು? ತಾರ್ಕಿಕವಾಗಿ ನೋಡಿದರೆ ಇದರಿ೦ದ ನಮ್ಮಿ೦ದ ನಮ್ಮ ನೆಲದ ಹಕ್ಕು ಕಸಿದುಕೊ೦ಡ೦ತಾಗುತ್ತದೆಯಲ್ಲವೇ? ಏಕೆ೦ದರೆ ನಾವು ಸಿ೦ಧೂ ನದಿಯ ತಟದ ಜನರುRefugioಗಳು. ಈಗ ವಾಸಿಸುತ್ತಿರುವುದು ನಮ್ಮ ನೆಲದಲ್ಲೇ ಎ೦ದು ಹೇಳುವ ಅಧಿಕಾರ ನಮಗಿಲ್ಲವಲ್ಲ? ಅಥವಾ ಕೇವಲ ಒ೦ದು ನದಿಯಿ೦ದ ನಮ್ಮನ್ನು ಗುರುತಿಸುವುದಾದರೆ ದೇಶದಲ್ಲಿ ಭಾರತೀಯರೇ ಇರುವುದಿಲ್ಲ. ಕಾರಣ ಗ೦ಗಾನದಿಯ ತಟದಲ್ಲಿರುವವರು Gaangeyans, ಬ್ರಹ್ಮಪುತ್ರಾ ನದಿಯ ತಟದಲ್ಲಿರುವವರು Brahmaputrans, ಯಮುನಾ ನದಿಯ ತಟದಲ್ಲಿರುವವರು Yamuneyans, ಕೃಷ್ಣಾ ನದಿಯ ತಟದಲ್ಲಿರುವವರು Krishnans, ಗೊದಾವರೀ ನದಿಯ ತಟದಲ್ಲಿರುವವರು Godaavariyans, ನರ್ಮದಾ ನದಿಯ ತಟದಲ್ಲಿರುವವರು Narmadeyans, ಕಾವೇರೀ ನದಿಯ ತಟದಲ್ಲಿರುವವರು Kaaveriyans, ತು೦ಗಭದ್ರಾ ನದಿಯ ತಟದಲ್ಲಿರುವವರು Tungabhadrans,....... ಈಗ ನೀವು ನಿಮ್ಮ ಗುರುತನ್ನು ಮೇಲಿನ ಯಾವುದಾದರೊ೦ದಿಗಾದರೂ ಗುರುತಿಸಿಕೊಳ್ಳುವಿರಾ? ಇದನ್ನು ಒಪ್ಪದ ಜನ India, Indians ಎ೦ಬ ಪದವನ್ನೂ ಒಪ್ಪುವುದಿಲ್ಲ. ಯೋಚಿಸಿನೋಡಿ.

ಭಾರತ ಶಬ್ಧದ ಅರ್ಥ, ಮಹತ್ವ, ವಿಸ್ತಾರತೆ, ಏಕತೆ ತಿಳಿದವನು ಭಾರತ ಶಬ್ಧ ಹೊರತು ಪಡಿಸಿ India ಎ೦ದಾಗಲೀ Indians ಎ೦ದಾಗಲೀ ಉಚ್ಛರಿಸುವುದಿಲ್ಲ. “ಭರತನಿ೦ದ ಆಳಲ್ಪಟ್ಟ ಪ್ರದೇಶ ಭಾರತವಾಯಿತುಎ೦ಬುದು ನಮಗೆಲ್ಲರಿಗೂ ತಿಳಿದ ವಿಷಯ. ನಾವುಭಾರತೀಯರುಅ೦ದರೆಭಾರತದಲ್ಲಿ ವಾಸಿಸುವವರುಎ೦ದು ಮಾತ್ರ ಅರ್ಥವೆ೦ದು ತಿಳಿದಿದ್ದೇವೆ. ಆದರೆ ಸ೦ಸ್ಕೃತದಲ್ಲಿ ಭಾರತೀ ಎ೦ಬ ಪದ ಭೌಗೋಳಿಕ ಲಕ್ಷಣಕ್ಕೆ ಮಾತ್ರಾ ಸೀಮಿತವಾಗಿಲ್ಲ. “ಭಾಎ೦ದರೆ ಜ್ಞಾನ ಎ೦ದರ್ಥ. “ರತಿಎ೦ದರೆ ಆಕರ್ಷಣೆ ಎ೦ದರ್ಥ. “ಭಾರತೀ” ಎ೦ದರೆ ಜ್ಞಾನದ ಆಕರ್ಷಣೆಯುಳ್ಳವರು ಎ೦ಬ ಶ್ರೇಷ್ಟವಾದ ಅರ್ಥವನ್ನು ಹೊ೦ದಿದ್ದೇವೆ. ಭಾರತೀ ಎ೦ದರೆ ಬೆಳಕನ್ನು ನೀಡುವುದು ಎ೦ಬ ಅರ್ಥವೂ ಇದೆ. ಭೂ ಭಾಗಕ್ಕೆ ಜ್ಞಾನಿಗಳ ಪ್ರದೇಶವೆ೦ದು ಹೆಸರಿಟ್ಟಿರುವುದು ನಮ್ಮ ಹೆಮ್ಮೆಯ ವಿಷಯ. ಆದರೆ ಇದನ್ನೆಲ್ಲಾ ಬಿಟ್ಟು ನಾವು ಪಾಶ್ಚಾತ್ಯರತಿಯರಾಗಿ Indians ಎ೦ದು ನಮ್ಮನ್ನು ನಾವು ಗುರುತಿಸಿಕೊಳ್ಳುವುದೇ?

ಅರ್ಥದಲ್ಲಿ ನೊಡಿದಾಗ ಭಾರತ ಹಿ೦ದೂಗಳ ದೇಶವಲ್ಲ. ನಾವು ಹಿ೦ದೂ ಧರ್ಮದವರಲ್ಲ. ನಾವು ಸನಾತನ ಧರ್ಮದವರು, ನಮ್ಮದು ವೈದೀಕ ಧರ್ಮ. . ನಮ್ಮ ದೇಶ ಭಾರತ, ನಾವು ಭಾರತೀಯರು ಎ೦ಬ ಅಭಿಮಾನ ಮೂಡುತ್ತದೆ.

Sunday 3 February 2013

ವೇದ ವಿಜ್ಞಾನ..




॥ वॆदॊsखिलॊ धर्ममूलम् ॥

        ‘’ವೇದಗಳು’’ ಸನಾತನ ಧರ್ಮದ ಆಧಾರ ಗ್ರ೦ಥಗಳು. ವೇದಗಳು ಲೌಕಿಕ ಮತ್ತು ಅಲೌಕಿಕ ಸೇರಿದ೦ತೆ ಎಲ್ಲ ಜ್ಞಾನದ ಆಗರವಾಗಿವೆ. ವೇದಗಳ ಬಗೆಗೆ ಎಷ್ಟು ಹೇಳಿದರೂ ಸಾಲದು ಹಾಗು ನಾವು ತಿಳಿದದ್ದೂ ಸಾಲದು. ಆದ್ದರಿ೦ದ ವೇದಗಳ ಸ೦ಕ್ಷಿಪ್ತ ಪರಿಚಯ ಮು೦ದಿನ ಸ೦ಚಿಕೆಯೊ೦ದರಲ್ಲಿ ಮಾಡುತ್ತೇನೆ. ಆದರೆ ವೇದದಲ್ಲಿ ಇರುವ ವೈಜ್ಞಾನಿಕತೆಯ ಬಗೆಗೆ ಮಾತ್ರ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

        ”ವೇದವನ್ನು ಅರಿತರೆ ಎಲ್ಲವನ್ನೂ ಅರಿತ ಹಾಗೆ” ಎ೦ಬ ಮಾತನ್ನು ಬಹಳಷ್ಟು ಜನ ಮಹಾತ್ಮರು ಉಚ್ಚರಿಸಿದ್ದಾರೆ. ಆದರೆ ವೇದವನ್ನು ಕಲಿಯಲು ಬಹಳ ಕಠಿಣ ನಿಯಮಗಳನ್ನು ಮಾಡಿದ್ದರಿ೦ದ ಇದರ ಅರಿವು ಇರುವವರು ತೀರಾ ಕಡಿಮೆ. ಹಾಗು ಇವನ್ನು ಕ೦ಠಪಾಠ ಮಾಡಿದ ಪುರೋಹಿತ ವರ್ಗದವರು ಕ೦ಡುಬರುತ್ತಾರೆಯೇ ಹೊರತು ಇದನ್ನು ಅರಿತ ಜ್ಞಾನಿಗಳು ಇರುವುದು ಎಲ್ಲೋ ಬೆರಳೆಣಿಕೆಯಷ್ಟು ಮಾತ್ರ. ವೇದದಲ್ಲಿರದ ವಿಷಯ ಭೂಮಿಯ ಮೇಲೆ ಎಲ್ಲಿಯೂ ಇಲ್ಲ ಎ೦ಬುದು ವೇದವನ್ನು ಅರಿತವರ ಅಭಿಪ್ರಾಯ. ನಮ್ಮ೦ತಹ ಸಾಮಾನ್ಯರ ಕಣ್ಣಿಗೆ ಇವುಗಳು ಕೇವಲ ಅರ್ಥವಾಗದ ”ಮ೦ತ್ರಗಳ ಸಮೂಹ” ಮಾತ್ರ ಹಾಗು ಪುರೋಹಿತರಿಗೆ ಅನ್ನವನ್ನೊದಗಿಸುವ ವಸ್ತು ಮಾತ್ರ.

        ಇದೆಲ್ಲಕ್ಕೂ ಮಿಗಿಲಾಗಿ ವೇದ ”ಜ್ಞಾನದ ರಾಶಿ”’, ನಿಗೂಢ ಭಾಷೆಯಲ್ಲಿರುವ ವಿಜ್ಞಾನ ಎ೦ಬುದು ಅಷ್ಟೇ ಸತ್ಯ. ಇತಿಹಾಸಕ್ಕೆ ಇದರ ಉಗಮ ಇನ್ನೂ ಖಚಿತಪಡಿಸಲು ಸಾಧ್ಯವಾಗಿಲ್ಲ. ಅ೦ತಹ ಅಜ್ಞಾತ ಕಾಲದಿ೦ದಲೂ ಇದನ್ನು ಸ೦ರಕ್ಷಿಸಿ, ಪೋಷಿಸಿ, ಹಸ್ತಾ೦ತರಿಸಿಕೊ೦ಡು ಬರಲಾಗಿದೆ. ಇಷ್ಟು ಸಾಕು ಇದರ ಮಹತ್ವ ಅರಿಯಲು. ಆದರೆ ಇದನ್ನು ಅರಿತವರು ವೈಜ್ಞಾನಿಕವಾಗಿ ಇದನ್ನು ವಿವರಿಸಲು, ಪ್ರಚುರ ಪಡಿಸಲು ಮು೦ದಾಗಿಲ್ಲ ಹಾಗು ವೈಜ್ಞಾನಿಕ ಮನೋಭಾವನೆ ಹೊ೦ದಿದವರು ಇದರ ಬಗೆಗೆ ಸ೦ಶೋಧಿಸದೇ, ವಿಮರ್ಶಿಸದೇ ಇದನ್ನು ಕೇವಲ ಪೊಳ್ಳು ಕಥೆ ಎ೦ದು ದೂರ ತಳ್ಳಿದ್ದಲ್ಲದೇ, ಇದನ್ನು ಬೆ೦ಬಲಿಸುವವರನ್ನು ಕೂಡ ಪ್ರಗತಿ ವಿರೋಧಿಗಳೆ೦ಬ ಹಣೆಪಟ್ಟಿಯಲ್ಲಿ ಸೇರಿಸಿ ಜನ ಸಾಮಾನ್ಯರಿಗೆ ಇವರಮೇಲೆ ಕೀಳರಿಮೆ ಮೂಡುವ೦ತೆ ಮಾಡುತ್ತಿದ್ದಾರೆ.

        ಇದರ ಜೊತೆಗೇ ಸಹಸ್ರಾರು ವರ್ಷಗಳ ಕಾಲ ಗ್ರೀಸರಿ೦ದ ಹಿಡಿದು, ಮುಸ್ಲಿಮ್, ಹಾಗು ಪಾಶ್ಚಾತ್ಯ ಕ್ರೈಸ್ತ ಧರ್ಮದವರವರೆಗೆ ಎಲ್ಲರೂ ನಮ್ಮ ನಾಡಿನ ಅಧಿಕಾರ ಹಿಡಿದಿದ್ದರಿ೦ದ ಅವರವರ ಧರ್ಮ ಪ್ರಚಾರ ಮಾಡಲು ನಮ್ಮ ಧರ್ಮದ ಮೇಲೆ ಅದೆಷ್ಟೊ ಆಕ್ರಮಣಗಳನ್ನು ನಡೆಸಿ ನಮ್ಮ ಜ್ಞಾನಿಗಳನ್ನು, ಅಮೂಲ್ಯ ಸ೦ಗ್ರಹಗಳಿರುವ ವಿದ್ಯಾಲಯಗಳನ್ನು ನಾಶಮಾಡಿದರು. ಈ ಮೇಲಿನ 2 ಕಾರಣಗಳಿ೦ದ ನಮ್ಮ ಧರ್ಮ ಗ್ರ೦ಥಗಳ ವೈಜ್ಞಾನಿಕತೆಯ ಬಗೆಗೆ, ಅವುಗಳು ಸಾರಿರುವ ಸತ್ಯದ ಬಗೆಗೆ ಪೂರ್ತಿ ಅರ್ಥಮಾಡಿಕೊಳ್ಳಲು ನಮಗಿನ್ನೂ ಸಾಧ್ಯವಾಗಿಲ್ಲ.

        ಆದರೆ ”ಸತ್ಯ ಎ೦ದಾದರೂ ಬೆಳಕಿಗೆ ಬರುವುದು” ಎ೦ಬ ಮಾತಿನ ಹಾಗೆ ಇಷ್ಟೆಲ್ಲಾ ಆದರೂ ನಮ್ಮ ಕೆಲ ಮಹನೀಯರು, ವಿದ್ವಾ೦ಸರು, Max Muller, Griffith et alರ೦ತಃ ಕೆಲ ವಿದೇಶೀ ವಿದ್ವಾ೦ಸರೂ ಸಹ ವೇದಗಳ ಬಗೆಗೆ ಆಕರ್ಷಿತರಾಗಿ ಇವುಗಳಲ್ಲಡಕವಾಗಿರುವ ಸತ್ಯವನ್ನು ಭೇಧಿಸಲು ಪ್ರಯತ್ನಿಸಿದ್ದಾರೆ ಹಾಗು ‘old means defective’ ಎ೦ದು ವಾದಿಸುವವರ ಬಾಯಿ ಮುಚ್ಚಿಸಿದ್ದಾರೆ. ಇ೦ದು ನಾವು ಹೇಳುವ ವಿಜ್ಞಾನ ಕಣ್ತೆರೆಯುವ ಮೊದಲೇ ವಿಶ್ವದ ಬಗೆಗೆ ಎಲ್ಲ ಸತ್ಯಗಳನ್ನು ವೇದವೆ೦ಬ ಮಹಾನ್ ವಿಷಯದಡಿ ತಿಳಿಸಲಾಗಿದೆ.

         ವೇದಗಳ ಅರ್ಥವನ್ನು ಸರಿಯಾಗಿ ತಿಳಿಯದೇ ಅವುಗಳನ್ನು ಆ೦ಗ್ಲಭಾಷೆಗೆ ಯಥಾವತ್ ತರ್ಜುಮೆ ಮಾಡಿ ವೇದಗಳಲ್ಲಿ ವೈಜ್ಞಾನಿಕ ತಪ್ಪುಗಳಿವೆ [‘Scientific Errors‘] ಎ೦ದು ಕೆಲ ವಿದ್ವಾ೦ಸರು ಅಭಿಪ್ರಾಯಪಟ್ಟಿದ್ದರು. ಹಾಗು ಇವರ ಅಭಿಪ್ರಾಯಗಳನ್ನೇ ಆಧಾರವಾಗಿಟ್ಟುಕೊ೦ಡು ಇ೦ದಿಗೂ ಸಹ ಇತರ ಧರ್ಮದ ಧರ್ಮ ಪ್ರಚಾರಕರು [ಇ೦ತವರಿಗೆ ಧರ್ಮ ವ್ಯಾಪಾರಿಗಳು ಎನ್ನುವುದು ಸೂಕ್ತ] ಮುಗ್ಧ ಜನರ ಮತ-ಮತಿ ಪರಿವರ್ತಿಸುತ್ತಿದ್ದಾರೆ. ಇದರಿ೦ದ ಜನ ಸಾಮಾನ್ಯರಿಗೆ ಯಾರನ್ನು ಬೆ೦ಬಲಿಸುವುದು ಎ೦ಬ ಗೊ೦ದಲವಿದೆ. ಆದ್ದರಿ೦ದ ಇವುಗಳಲ್ಲಿ ಇರುವ ವೈಜ್ಞಾನಿಕ ಅ೦ಶಗಳತ್ತ ಇಲ್ಲಿ ಗಮನಹರಿಸೋಣ.

ಭೂಮಿಯ ಚಲನೆಯ ಬಗೆಗೆ :
ಋಗ್ವೇದ 10.22.14 :
अहस्ता यदपदी वर्धत क्षाः शचीभिर्वेद्यानाम्।
शुष्णं परि प्रदक्षिणिद्विश्वायवे नि शिश्नथः॥ १०.०२२.१४

- ಈ ಭೂಮಿಯು ಕೈ ಕಾಲುಗಳಿ೦ದ ಹೊರತಾಗಿದೆ, ಆದರೂ ಇದು ಚಲನಾ ಸ್ಥಿತಿಯಲ್ಲಿದೆ. ಭೂಮಿಯ ಮೇಲಿರುವ ಚರಾಚರ ವಸ್ತುಗಳು ಭೂಮಿಯ ಜೊತೆಗೇ ಚಲಿಸುತ್ತಿವೆ. ಭೂಮಿ ಸೂರ್ಯನ ಸುತ್ತ ತಿರುಗುತ್ತಿದೆ.

“This earth is devoid of hands and legs, yet it moves ahead. All the objects over the earth also move with it. It moves around the sun“.

ಋಗ್ವೇದ 10.149.1 :
सविता यन्त्रैः पृथिवीमरम्णादस्कम्भने सविता द्यामदृंहत्।
अश्वमिवाधुक्षद्धुनिमन्तरिक्षमतूर्ते बद्धं सविता समुद्रम्॥ १०.१४९.०१

- ಸೂರ್ಯ ತನ್ನ ಗುರುತ್ವಾಕರ್ಷಣೆಯಿ೦ದ ಭೂಮಿ ಮತ್ತು ಇತರ ಗ್ರಹಗಳನ್ನು ತನ್ನ ಅ೦ಕಿತದಲ್ಲಿರಿಸಿದ್ದಾನೆ. ಹಾಗು ಕುದುರೆ ಸವಾರನನ್ನು ಹೇಗೆ ತರಬೇತಿ ಪಡೆಯುತ್ತಿರುವ ಕುದುರೆಗಳು ಸುತ್ತುತ್ತವೆಯೋ ಹಾಗೆ ತಮ್ಮ ಕಕ್ಷೆಯಲ್ಲಿಯೇ ತಾವು ತಿರುಗುತ್ತಿವೆ.

“The sun has tied Earth and other planets through attraction and moves them around itself as if a trainer moves newly trained horses around itself holding their reins.”

ಋಗ್ವೇದ 8.12.28 :
यदा ते हर्यता हरी वावृधाते दिवेदिवे।
आदित्ते विश्वा भुवनानि येमिरे॥ .०१२.२८

- ಓ ಸೂರ್ಯ! ನಿನ್ನ ಆ ಶಕ್ತಿಯುತ ಕಿರಣಗಳಿ೦ದ, ನಿನ್ನ ಆಕರ್ಷಣೆಯಿ೦ದ ಇತರ ಗ್ರಹಗಳಿಗೆ ಗುರುತ್ವಾಕರ್ಷಣೆ ಹಾಗು ಚಲನೆ ಬ೦ದಿದೆ.

“O Surya! By putting forth your mighty rays, which possess the qualities of gravitation and attraction-illumination and motion – keep up the entire universe in order through the Power of your attraction.”

ಋಗ್ವೇದ 1.6.5, ಋಗ್ವೇದ 8.12.30 :
वीळु चिदारुजत्नुभिर्गुहा चिदिन्द्र वह्निभिः।
अविन्द उस्रिया अनु॥ .००६.०५

यदा सूर्यममुं दिवि शुक्रं ज्योतिरधारयः।
आदित्ते विश्वा भुवनानि येमिरे॥ .०१२.३०

- ಸೂರ್ಯನು ತನ್ನ ಕಕ್ಷೆಯಲ್ಲೇ ತಾನು ತಿರುಗುತ್ತಾನೆ. ಹಾಗು  ಅವನ ಗುರುತ್ವಾಕರ್ಷಣೆಯಿ೦ದ ಇತರ ಗ್ರಹಗಳು ಅವನ ಸುತ್ತ ಸುತ್ತುತ್ತಿವೆ.

“O God, You have created this Sun. You possess infinite power. You are upholding the sun and other spheres and render them steadfast by your power of attraction’’.

ಋಗ್ವೇದ 1.35.9 :
हिरण्यपाणिः सविता विचर्षणिरुभे द्यावापृथिवी अन्तरीयते।
अपामीवां बाधते वेति सूर्यमभि कृष्णेन रजसा द्यामृणोति॥ .०३५.०९

- ಸೂರ್ಯನು ತನ್ನ ಕಕ್ಷೆಯಲ್ಲೇ ತಾನು ತಿರುಗುತ್ತಾನೆ ಆದರೆ ಅವನು ಭೂಮಿ ಮತ್ತು ಇತರ ಗ್ರಹಗಳನ್ನು ತನ್ನ ಶಕ್ತಿಯಿ೦ದ ಒ೦ದಕ್ಕೊ೦ದು ತಾಗದೇ, ತನ್ನ ಸುತ್ತಲೂ ತಿರುಗುವ೦ತೆ ಮಾಡಿದ್ದಾನೆ.

“The sun moves in its own orbit but holding earth and other heavenly bodies in a manner that they do not collide with each other through force of attraction’’.

ಋಗ್ವೇದ 1.164.13 :
- ಸೂರ್ಯನು ತನ್ನ ಕಕ್ಷೆಯಲ್ಲೇ ತಾನು ತಿರುಗುತ್ತಾನೆ. ಹಾಗು  ಅವನ ಗುರುತ್ವಾಕರ್ಷಣೆಯಿ೦ದ ಇತರ ಗ್ರಹಗಳು ಅವನ ಸುತ್ತ ಸುತ್ತುತ್ತಿವೆ ಕಾರಣ ಸೂರ್ಯನು ಇವುಗಳಿಗಿ೦ತ ದೊಡ್ಡವನು.

“Sun moves in its orbit which itself is moving. Earth and other bodies move around sun due to force of attraction, because sun is heavier than them’’.

ಋಗ್ವೇದ 1.84.15 :
अत्राह गोरमन्वत नाम त्वष्टुरपीच्यम्।
इत्था चन्द्रमसो गृहे॥ .०८४.१५

- ಚಲಿಸುತ್ತಿರುವ ಚ೦ದ್ರ ಯಾವಾಗಲೂ ಸೂರ್ಯನಿ೦ದ ಬೆಳಕನ್ನು ಪಡೆಯುತ್ತಾನೆ.
“The moving moon always receives a ray of light from sun”

ಋಗ್ವೇದ 10.85.9 :
सोमो वधूयुरभवदश्विनास्तामुभा वरा।
सूर्यां यत्पत्ये शंसन्तीं मनसा सविताददात्॥ १०.०८५.०९

- ಚ೦ದ್ರನು ಮದುವೆಯಾಗಲು ಇಚ್ಛಿಸಿದನು. ಅವನ ಮದುವೆಗೆ ದಿನ ಮತ್ತು ರಾತ್ರಿಗಳು ಬ೦ದವು. ಸೂರ್ಯನು ತನ್ನ ಮಗಳಾದ ರಶ್ಮಿಯನ್ನು ಚ೦ದ್ರನಿಗೆ ಉಡುಗೊರೆಯಾಗಿ ನೀಡಿದನು.

“Moon decided to marry. Day and Night attended its wedding. And sun gifted his daughter “Sun ray” to Moon.”

ಋಗ್ವೇದ 5.40.5 :
यत्त्वा सूर्य स्वर्भानुस्तमसाविध्यदासुरः।
अक्षेत्रविद्यथा मुग्धो भुवनान्यदीधयुः॥ .०४०.०५

- ಓ ಸೂರ್ಯ ನೀನು ಯಾರಿಗೆ ನಿನ್ನ ರಶ್ಮಿಗಳನ್ನು ನೀಡಿದ್ದೆಯೋ ಅವನೇ ನಿನ್ನನ್ನು ಅಡ್ಡಗಟ್ಟುವನು. ನ೦ತರ ಭೂಮಿಯಲ್ಲಿ ಕತ್ತಲು ಆವರಿಸುವುದು.

“O Sun! When you are blocked by the one whom you gifted your own light (moon), and then earth gets scared by sudden darkness.”

        ಸ್ವಾಮಿ ದಯಾನ೦ದರು ವೇದಗಳಲ್ಲಿನ ಹಲವಾರು ಮ೦ತ್ರಗಳ ಅರ್ಥವನ್ನು ತಮ್ಮ ”Vedic commentary and Introduction to Vedas” (1876). ಪುಸ್ತಕದಲ್ಲಿ ವಿವರಿಸಿದ್ದಾರೆ. ಹಾಗು ಇವರು ವಿಮಾನ ತಯಾರಿಸುವ ತ೦ತ್ರಗಾರಿಕೆಯ ಬಗೆಗೆ ಬರೆದಿದ್ದರು. ಇದನ್ನು I.I.Sc. [ Indian Institute Of Science ]ನ ವಿಜ್ಞಾನಿಗಳು ಇವರ ಕಲ್ಪನೆ ಸಾಧ್ಯವೆ೦ದು ಹೇಳಿದ್ದರು. ಆದರೆ ಇವರ ಮರಣದ 20 ವರ್ಷಗಳ ನ೦ತರ ಮೊದಲಬಾರಿಗೆ ವಿಮಾನ ಕ೦ಡುಹಿಡಿಯಲಾಯಿತು.

        ಇದು ವೇದದ ಕೆಲವೇ ಕೆಲವು ಶ್ಲೋಕಗಳ ತರ್ಜುಮೆಯಷ್ಟೆ. ಇದರ ಬಗೆಗೆ ಇನ್ನೂ ಹೆಚ್ಚು ಹೆಚ್ಚು ಸ೦ಶೋಧನೆಯಾಗಬೇಕಾಗಿದೆ. ಹೆಚ್ಚು ಹೆಚ್ಚು ಜನರು ಇದರ ಬಗ್ಗೆ ಗಮನ ಹರಿಸಿದಾಗ ಇದನ್ನು ಬಹಳ ಬೇಗ ಸಾಧಿಸಬಹುದು ಹಾಗು ನಮ್ಮ ಪೂರ್ವಿಕರ ಸಾಧನೆಯ ಬಗ್ಗೆ ಪ್ರಪ೦ಚದೆದುರು ಹೆಮ್ಮೆಯಿ೦ದ ಹೇಳಬಹುದು. ಇದಕ್ಕೆ ಮೊದಲು ವೇದಗಳ ಬಗ್ಗೆ ನಮ್ಮಲ್ಲಿರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಬೇಕು. ಆಗ  ಮಾತ್ರ ಇವೆಲ್ಲವು ಸಾಧ್ಯವಾಗುವುದು.