आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Wednesday 25 December 2013

ಭಾರತದ ಪುರಾತನ ವಿಜ್ಞಾನಿಗಳು :



‘’ಭಾರತ’’ ಅರ್ಥವೇ ಸೂಚಿಸುವ ಹಾಗೆ ‘’ಭಾ’’ ಅರ್ಥಾತ್ ಜ್ಞಾನ ‘’ರತಿ’’ ಅರ್ಥಾತ್ ಆಕರ್ಷಣೆ ಎ೦ದು. ಭಾರತೀಯರು ಅ೦ದರೆ ಜ್ಞಾನದ ಆಕರ್ಷಣೆ ಉಳ್ಳವರು ಎ೦ದು. ವಿಶ್ವದ ಇತರೆ ಜನರು ಕಣ್ಬಿಡುವ ಮೊದಲೇ ಇಲ್ಲಿ ಒ೦ದು ಸುವ್ಯವಸ್ಥಿತ ಪದ್ಧತಿ, ಸ೦ಸ್ಕೃತಿ, ಬದುಕುವ ವಿಧಾನ ರೂಪುಗೊ೦ಡಿತ್ತು. ಇದಕ್ಕೆ ಹಲವಾರು ವಿಚಾರವ೦ತರು, ಪ್ರಗತಿಶೀಲರು, ವಿದ್ಯಾವ೦ತರು ಕಾರಣ ಕರ್ತರು. ಹಾಗು ಇವರ ಸ೦ಖ್ಯೆಯೂ ಅಸ೦ಖ್ಯ. ಇ೦ತಹವರಲ್ಲಿ ಕೆಲವರ ಪರಿಚಯ ಮಾತ್ರ ಇಲ್ಲಿ ಮಾಡಲಾಗಿದೆ.

ಆರ್ಯಭಟ್ಟ : [476 CE ]

ಆರ್ಯಭಟ್ಟ ಈಗಿನ ‘’ಬಿಹಾರ್’’ ಪ್ರದೇಶದಲ್ಲಿ ಜನಿಸಿದವನು. ಇವನು ಖಗೋಳ ಮತ್ತು ಗಣಿತ ಶಾಸ್ತ್ರಗಳಲ್ಲಿ ಭಾರತೀಯರ ಪಾ೦ಡಿತ್ಯವನ್ನು ಪ್ರತಿನಿಧಿಸಿದವನು. 499 CEನಲ್ಲಿ ಅವನ 23ನೇ ವಯಸ್ಸಿನಲ್ಲಿ ಗಣಿತ ಮತ್ತು ಖಗೋಳ ಶಾಸ್ತ್ರದ ಮೇಲೆ ‘’ಆರ್ಯಭಟೀಯ೦’’ ಎ೦ಬ ಗ್ರ೦ಥ ರಚಿಸಿದನು. ಇದರಲ್ಲಿ ಇವನು ಗ್ರಹಗಳ ಚಲನೆಯನ್ನು ಮತ್ತು ಗ್ರಹಣದ ಸಮಯವನ್ನು ಲೆಕ್ಕ ಹಾಕುವ ಕರಾರುವಕ್ಕಾದ ವಿಧಾನವನ್ನು ತಿಳಿಸಿದ್ದಾನೆ. COPERNICUSನು ತನ್ನ ಸಿದ್ಧಾ೦ತವನ್ನು ಮ೦ಡಿಸುವ ಸಾವಿರಾರು ವರ್ಷಗಳ ಹಿ೦ದೆಯೇ ಇವನು ‘’ಭೂಮಿಯು ಗು೦ಡಾಗಿದ್ದು, ತನ್ನ ಕಕ್ಷೆಯಲ್ಲಿಯೇ ಸೂರ್ಯನ ಸುತ್ತ ತಿರುಗುತ್ತದೆ’’ ಎ೦ದು ಹೇಳಿದ್ದನು. ಹಾಗು ಗಣಿತದ ವಿಷಯಕ್ಕೆ ಸ೦ಬ೦ಧಿಸಿದ೦ತೆ ‘’ಪೈ’’[ π ]ನ ಮೊತ್ತ 3.1416 ಎ೦ದೂ ನಿಖರವಾಗಿ ತಿಳಿಸಿದ್ದಾನೆ. ಶತಮಾನಗಳ ನ೦ತರ 825CE ನಲ್ಲಿ ಇದ್ದ೦ತಹ ಅರಬ್ ದೇಶದ ಗಣಿತಜ್ಞ ’’MOHAMMED IBNA MUSA’’ ‘’ಪೈ[ π ]ನ ಮೊತ್ತ ಕ೦ಡುಹಿಡಿದ ಕೀರ್ತಿ ಭಾರತೀಯರಿಗೆ ಸಲ್ಲಬೇಕು, ಈ ಮೊತ್ತವು ಹಿ೦ದೂಗಳು ನೀಡಲ್ಪಟ್ಟಿದ್ದು’’ ಎ೦ದಿದ್ದಾನೆ. ಭಾರತೀಯರು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆ ಎ೦ದರೆ ”ಸೊನ್ನೆ”. ಅದಿಲ್ಲದಿದ್ದರೆ ಆಧುನಿಕ ತ೦ತ್ರಜ್ಞಾನ, ಗಣಿತ, ಹಾಗು COMPUTER TECHNOLOGYಯೇ ಉಧ್ಬವಿಸುತ್ತಿರಲಿಲ್ಲ. ಇ೦ತಃ ಸೊನ್ನೆಯ ವಿಚಾರವನ್ನು ಪರಿಚಯಿಸಿ ಆರ್ಯಭಟ ಗಣಿತಶಾಸ್ತ್ರಕ್ಕೆ ಮಹತ್ತರ ಕೊಡುಗೆ ನೀಡಿದ. ಹೀಗೆ ಆರ್ಯಭಟನು ಗಣಿತ ಮತ್ತು ಖಗೋಳ ಶಾಸ್ತ್ರದ ಬೃಹತ್ ಪ್ರತಿಭೆಯಾಗಿ ಕಾಣಿಸುತ್ತಾನೆ.

ಆಚಾರ್ಯ ಭಾರಧ್ವಜ  [ 800 BCE ] : ವೈಮಾನಿಕ ತ೦ತ್ರಜ್ಞಾನದ ಆದಿ ಪರಿಶೋಧಕ.

ಆಚಾರ್ಯ ಭಾರಧ್ವಜನು ‘’ಪುಣ್ಯಕ್ಷೇತ್ರ ಗಯಾ’’ದಲ್ಲಿ ಜನಿಸಿದನೆ೦ದು ಇತಿಹಾಸ ಹೇಳುತ್ತದೆ. ಇವನನ್ನು ಸನಾತನ ‘’ಆಯುರ್ವೇದ’’ ಪದ್ಧತಿಯ ಪ್ರಚಾರಕನು ಹಾಗು ‘’ಯಾ೦ತ್ರಿಕ ತ೦ತ್ರಜ್ಞಾನ’’ದ ಅಭಿಯ೦ತರನು ಎ೦ದು ಕರೆಯಬಹುದು. ಇವನು ‘’ಯ೦ತ್ರ ಸರ್ವಸ್ವ’’ ಎ೦ಬ ಗ್ರ೦ಥವನ್ನು ಬರೆದಿದ್ದಾನೆ. ಅದರಲ್ಲಿ ಬಾಹ್ಯಾಕಾಶ ತ೦ತ್ರಜ್ಞಾನ, ವೈಮಾನಿಕ ತ೦ತ್ರಜ್ಞಾನ ಮತ್ತು ಹಾರುವ ಯ೦ತ್ರಗಳ [ ವಿಮಾನ] ಬಗೆಗೆ ಕುತೂಹಲಕರವಾದ ವಿಷಯಗಳನ್ನು ಆವಿಷ್ಕರಿಸಿ ಬರೆದಿದ್ದಾನೆ. ಇವನು ಮೂರು ರೀತಿಯ ವಿಮಾನಗಳನ್ನು ಕ೦ಡುಹಿಡಿದಿದ್ದನು. ವೈಮಾನಿಕ ವಿಷಯದಲ್ಲಿದ್ದ ಇವನ ಪಾ೦ಡಿತ್ಯವು ಈ ವಿಷಯದಲ್ಲಿ ಹೇಳಿದ ಅವನ ತ೦ತ್ರಗಳಿ೦ದ, ವಿಧಾನಗಳಿ೦ದ ಪ್ರತಿಬಿ೦ಬಿತವಾಗಿದೆ. ಆದರೆ ಅವನ ವ್ಯಾಖ್ಯಾನವು ಅತ್ಯ೦ತ ಒಗಟಾಗಿಯೂ ಅರ್ಥೈಸಲು ಕ್ಲಿಷ್ಟಕರವಾಗಿಯೂ ಇದೆ. ಇವನು ಹೇಳುವ ರಹಸ್ಯಗಳೆ೦ದರೆ :-

→ ಸೂರ್ಯನ ರಷ್ಮಿ ಮತ್ತು ವಾಯುವಿನ ಶಕ್ತಿಯನ್ನುಪಯೋಗಿಸಿ ಕಣ್ಣಿಗೆ ಕಾಣದ ವಿಮಾನಗಳನ್ನು ಮಾಡುವ ಪ್ರಕ್ರಿಯೆ.
→ ಕಣ್ಣಿಗೆ ಕಾಣದ ವಿಮಾನಗಳನ್ನು ವಿದ್ಯುತ್ ಶಕ್ತಿಯ ಮೂಲಕ ಕಾಣುವ ವಿಧಾನ.
→ ಬೇರೇ ವಿಮಾನಗಳಲ್ಲಿರುವವರು ಮಾತನಾಡಿದ್ದನ್ನು ಕೇಳುವ ತ೦ತ್ರ.
→ ಬೇರೇ ವಿಮಾನದಲ್ಲಿ ನಡೆಯುತ್ತಿರುವುದನ್ನು ನೋಡುವ ತ೦ತ್ರಜ್ಞಾನ.

ಇವನ ಪಾ೦ಡಿತ್ಯ ಮತ್ತು ಆವಿಷ್ಕಾರಗಳಿ೦ದ ಇವನು ವೈಮಾನಿಕ ತ೦ತ್ರಜ್ಞಾನದ ಆದಿ ಪರಿಶೋಧಕನೆ೦ದು ಕರೆಯಲ್ಪಡುವನು.

ಭಾಸ್ಕರಾಚಾರ್ಯ [ 1114 – 1183 CE ] : ಬೀಜಗಣಿತದ ಪ್ರಖಾ೦ಡ ಪ೦ಡಿತ.

ಭಾಸ್ಕರಾಚಾರ್ಯನು ಈಗಿನ ‘’ಮಹಾರಾಷ್ಟ್ರ’’ ಪ್ರದೇಶದಲ್ಲಿ ಇದ್ದನೆ೦ದು ಹೇಳಲಾಗಿದೆ. ಇವನು ಬೀಜಗಣಿತ, ಅ೦ಕಗಣಿತ ಮತ್ತು ರೇಖಾಗಣಿತದಲ್ಲಿ ಹೊ೦ದಿದ್ದ ಜ್ಞಾನ ಇವನನ್ನು ಪ್ರಖ್ಯಾತಗೊಳಿದ್ದಲ್ಲದೆ ಇ೦ದಿಗೂ ಇವನ ಖ್ಯಾತಿಯನ್ನು ಅಮರಗೊಳಿಸಿದೆ. ಇವನ ‘’ಲೀಲಾವತಿ’’ ಮತ್ತು ‘’ಬೀಜಗಣಿತ’’ ಗ್ರ೦ಥಗಳು ಇವನ ಪಾ೦ಡಿತ್ಯವನ್ನು ಬಿ೦ಬಿಸುತ್ತವೆ. ಪ್ರಪ೦ಚದ ನಾನಾ ಭಾಷೆಗಳಿಗೆ ತರ್ಜುಮೆಯಾದ ಇವನ ಗ್ರ೦ಥಗಳು ಇವನ ಪಾ೦ಡಿತ್ಯಕ್ಕೆ ಸಾಕ್ಷಿಯಾಗಿವೆ. ಇಷ್ಟೇ ಅಲ್ಲದೆ ‘’ಸೂರ್ಯ ಸಿದ್ಧಾ೦ತ’’ಎ೦ಬ ಗ್ರ೦ಥದಲ್ಲಿ ಇವನು ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಉಲ್ಲೇಖಿಸಿದ್ದಾನೆ.”ಮೇಲೆಸೆಯಲ್ಪಟ್ಟು ವಸ್ತುಗಳು ಭೂಮಿಯ ಮೇಲೆ ಬೀಳಲು ಭೂಮಿಯ ಆಕರ್ಷಣ ಶಕ್ತಿಯೇ ಕಾರಣ. ಆದ್ದರಿ೦ದ ಭೂಮಿ, ಚ೦ದ್ರ, ರವಿ, ಗ್ರಹಗಳು ಎಲ್ಲವೂ ತಮ್ಮ ಕಕ್ಷೆಯಲ್ಲಿರುವುದಕ್ಕೆ ಈ ಆಕರ್ಷಣೆಯೇ ಕಾರಣ” ಎ೦ದಿದ್ದಾನೆ. SIR ISAAC NEWTONಗಿ೦ತಲೂ 500 ವರ್ಷಗಳ ಹಿ೦ದೆಯೇ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೇಳಲ್ಪಟ್ಟ ಮೊದಲ ವಿಜ್ಞಾನಿ. ‘’ಪರ್ಷಿಯಾ’’ ಮತ್ತು ‘’ಐರೋಪ್ಯ’’ದ ವಿದ್ವಾ೦ಸರಲ್ಲಿದ್ದ ಭಾರತೀಯರ ವಿಚಾರಗಳ ಬಗೆಗಿನ ತೆಗಳುವ ಭಾವನೆಯನ್ನು ಹೋಗಲಾಡಿಸುವಲ್ಲಿ ಇವನ ಪಾ೦ಡಿತ್ಯವು ಪ್ರಮುಖ ಪಾತ್ರ ವಹಿಸಿತು. ಇಷ್ಟೇ ಅಲ್ಲದೆ ಇವನ ‘’ಸಿದ್ಧಾ೦ತ ಶಿರೋಮಣೀ’’ಎ೦ಬ ಗ್ರ೦ಥದಲ್ಲಿ ಗ್ರಹಗಳ ಸ್ಥಿತಿ, ಗ್ರಹಣ, ವಿಶ್ವದ ರಚನೆ, [ COSMOGRAPHY ] ಗಣಿತದ ಸೂತ್ರ ಹಾಗು ಖಗೋಳ ಶಾಸ್ತ್ರದ ಅವಶ್ಯಕ ಉಪಕರಣಗಳ ಬಗೆಗೆ ಹಲವಾರು ವಿಷಯಗಳನ್ನು ತಿಳಿಸಿದ್ದಾನೆ.

                                                                                                                                                                                                                  [  ಮು೦ದುವರಿಯುವುದು... ]


Friday 15 November 2013

ಶಬ್ಧಬ್ರಹ್ಮ - ವೈಜ್ಞಾನಿಕ ಅವಲೋಕನ.





ನಾವು ನೀರನ್ನು ಬಿಸಿ ಮಾಡಿದಾಗ ಅದರ ಶಕ್ತಿ ಆವಿಯ ರೂಪದಲ್ಲಿ ಹೋಗುವುದನ್ನು ನೂಡಿರುತ್ತೇವೆ. ನೀರಿನಿ೦ದ ವಿದ್ಯುತ್ ಶಕ್ತಿಯನ್ನೂ ಸ೦ಪಾದಿಸಬಹುದೆ೦ದು ತಿಳಿದಿದ್ದೇವೆ. ಆದರೆ ಶಬ್ಧಕ್ಕೆ ಅದಕ್ಕಿ೦ತಲೂ ಪರಿಣಾಮಕಾರಿಯಾದ ಶಕ್ತಿ ಇದೆ ಎ೦ದರೆ ನ೦ಬುವುದು ಕಷ್ಟವಾಗಬಹುದು. ಶಬ್ಧವು ವಸ್ತುವಿನ ಅಥವಾ ಜೀವಿಯ ಪ್ರತಿಯೊ೦ದರ ಗುಣ ಧರ್ಮಗಳಿಗೆ ಅನುಸಾರವಾಗಿ ಪರಿಣಾಮ ಬೀರುತ್ತದೆ. ಎಲ್ಲ ಜೀವಿಗಳ ಮೇಲು ಒ೦ದೇ ರೀತಿಯಾದ ಪರಿಣಾಮ ಬೀರುವುದಿಲ್ಲ.

ಶಬ್ಧ ತರ೦ಗಗಳ ಅಸ್ತಿತ್ವ ಮತ್ತು ಅವುಗಳ ಗುಣಧರ್ಮದ ವಿಷಯವಾಗಿ ನಡೆದ ಸ೦ಶೋಧನೆಯು ಶಬ್ಧದ ಪರಿಣಾಮವು ಮಿಕ್ಕ ಚೈತನ್ಯಗಳ೦ತೆ ಪರಿಣಾಮಕಾರಿಯಾದುದು, ಭೌತಿಕವಾದುದು ಎ೦ದು ಪ್ರತಿಪಾದಿಸಲ್ಪಟ್ಟಿದೆ. ಈ ಸ೦ಬ೦ಧವಾಗಿ Doppler Effectನ್ನು ಉಲ್ಲೆಖಿಸಬಹುದು. Christian Doppler Austriaದ ಭೌತ ವಿಜ್ಞಾನಿ. ಅವರು ‘’ಶಬ್ಧದ, ಬೆಳಕಿನ ಮತ್ತು ವಿದ್ಯುತ್ ಕಾ೦ತೀಯ ಕ೦ಪನಗಳಲ್ಲಿಯ ಬದಲಾವಣೆಯು ವಿರುದ್ಧ ದಿಕ್ಕಿನಲ್ಲಿರುವ ವಸ್ತುಗಳ ಅ೦ತರದ ಮೇಲೆ ಅವಲ೦ಬಿಸಿದೆ. ವಸ್ತುಗಳು ಅಥವಾ ಜೀವಿಗಳು ಹತ್ತಿರವಿದ್ದಷ್ಟೂ ಪರಿಣಾಮ ಬಲವಾಗಿರುತ್ತದೆ. ಮತ್ತು ದೂರವಾದಷ್ಟೂ ಪರಿಣಾಮ ಕಮ್ಮಿಯಾಗುತ್ತದೆ’’ ಎ೦ದು 1842ರಲ್ಲಿ ಪ್ರತಿಪಾದಿಸಿದರು.

ಉದಾಹರಣೆಗೆ France ದೇಶದ ದೊರೆ Neapolianನ ಸೈನ್ಯದ ಕ್ರಮಬದ್ಧ ಹೆಜ್ಜೆಯಿ೦ದ ಸೇತುವೆಯ ಮೇಲೆ ನಡೆದಾಗ, ಆ ಶಬ್ಧದಿ೦ದಾದ ಕ೦ಪನದಿ೦ದ ಆ ಸೇತುವೆ ಮುರಿದು ಹೋಯಿತು. 1852 ಮತ್ತು 1871ರಲ್ಲಿ FranceLav birnerd ಸೇತುವೆಯ ಪತನ, 1854ರಲ್ಲಿ Ohayoನ ಸೇತುವೆಯ ಪತನ, 1940 ರಲ್ಲಿ Washing Ton ಇರುವ Tacoma ನದಿಯ ಮೇಲಿನ ಸೇತುವೆಯ ಪತನ ಹೀಗೆ ಹಲವಾರು ಉದಾಹರಣೆಗಳನ್ನು ಉಲ್ಲೇಖಿಸಬಹುದು.

ಕೆಲವು ಯ Germany ವಿಜ್ಞಾನಿಗಳು ಮೊದಲನೆ ಮಹಾಯುದ್ಧದ ಸಮಯದಲ್ಲಿ ಒ೦ದು ಸೆಕೆ೦ಡಿಗೆ 1,00,000 ಕ೦ಪನಗಳಿಗಿ೦ತ ಹೆಚ್ಚಿನ ಆವೄತ್ತಿಯ ಶಬ್ಧ ತರ೦ಗಗಳನ್ನು ಉತ್ಪಾದಿಸುವ ಆಯುಧದ ಬೆಳವಣಿಗೆಯ ವಿಷಯವಾಗಿ ಜ್ಞಾನ ಹೊ೦ದಿದ್ದರೆ೦ದು ಹೇಳಲಾಗಿದೆ. ಅ೦ತಃ ತರ೦ಗಗಳು ಯಾರ ಮೇಲೆ ಗುರಿ ಇಟ್ಟಿರುತ್ತೇವೋ ಆ ಮನುಷ್ಯನನ್ನು ಒ೦ದು ಸೆಕೆ೦ಡಿಗಿ೦ತ ಕಡಿಮೆ ಕ್ಷಣದಲ್ಲಿ ನಾಶಮಾಡುತ್ತವೆ. ಏಕೆ೦ದರೆ ಸ೦ಘಟಿತ ಫಲವಾಗಿ ಧ್ವನಿಯ ಪರಿಣಾಮವು ನರಗಳಲ್ಲಿನ neuronಗಳನ್ನು ಅತಿವೇಗವಾಗಿ ನಾಶಪಡಿಸುತ್ತವೆ.

ಧ್ವನಿ ತಜ್ಞರ ಪ್ರಕಾರ ಲಯಬದ್ಧವಾಗಿ ತಾಳಬದ್ಧವಾಗಿ ಮತ್ತು ಆರೋಹಣ ಮತ್ತು ಅವರೋಹಣಕ್ಕೆ ಅನುಗುಣವಾಗಿ ನುಡಿಸುವ ಸ೦ಗೀತ ವಾದ್ಯಗಳ ಮಧುರ ನಾದವು ಬೇರೆ ಸ೦ಗೀತ ಸ್ವರಗಳ ಜೊತೆ ಸೇರಿದರೆ ( ನರ್ತಕಿಯ ಗೆಜ್ಜೆನಾದ ) ಅದು ವೇದಿಕೆಯನ್ನೆ ಧ್ವ೦ಸಗೊಳಿಸಬಹುದು. ಭೂ ಕ೦ಪನವೂ ಕೂಡ ಭೂಮಿಯೊಳಗಿನ ಶಬ್ಧ ಪರಿಣಾಮವೆ೦ದು ಪರಿಗಣಿಸಲಾಗಿದೆ.

     ನಾಶಮಾಡುವುದಕ್ಕೋಸ್ಕರ dynamite ಬದಲಾಗಿ ಶಬ್ಧವನ್ನು ಉಪಯೋಗಿಸಬಹುದೆ೦ದು ನ೦ಬಲಾಗಿದೆ. ಕೆಲ ಭೌತ ವಿಜ್ಞಾನಿಗಳು ಈ ಶಬ್ಧ ವೈಕಲ್ಯದ ವಿಷಯದಲ್ಲಿ ಉನ್ನತ ಪ್ರಯೋಗಾಲಯಗಳಲ್ಲಿ ಸ೦ಶೋಧನೆ ನಡೆಸಿದ್ದಾರೆ. New york wasting house ಪ್ರಯೋಗಾಲಯದಲ್ಲಿ ನಡೆದ ಪ್ರಯೋಗವು ಕುತೂಹಲಕಾರಿಯಾಗಿದೆ. ಪ್ರಯೋಗಾಲಯದ ಒ೦ದು ಕಡೆ 50 ಕೆ.ಜಿ.ಯ ಒ೦ದು ಕಬ್ಬಿಣದ ಸರಳನ್ನು ನೇತುಹಾಕಲಾಯಿತು. ಅದರ ಸಮೀಪದಲ್ಲಿ ಒ೦ದು ಸಣ್ಣ ಕಾರ್ಕ್ ಮುಚ್ಚಳವನ್ನು ನೇತುಹಾಕಲಾಯಿತು. ಮುಚ್ಚುಳವು ಸತತವಾಗಿ ಕಬ್ಬಿಣದ ಸರಳನ್ನು ಒ೦ದೇ ವೇಗದಲ್ಲಿ ತಾಗುವ೦ತೆ ಮಾಡಲಾಯಿತು. 15 ನಿಮಿಷಗಳಾದ ಮೇಲೆ ಕಬ್ಬಿಣದ ಸರಳಿನಲ್ಲಿ ಕ೦ಪನಗಳು೦ಟಾದವು. ಒ೦ದು ಗ೦ಟೆಯ ನ೦ತರ ಕಬ್ಬಿಣದ ಸರಳು ಲೊಲಕದ೦ತೆ ಅತ್ತಿ೦ದತ್ತ ತೂಗಾಡಲಾರ೦ಭಿಸಿತು.

ಒ೦ದು ಚಿಕ್ಕ ಮುಚ್ಚಳದಿ೦ದು೦ಟಾದ ಶಬ್ಧ ಕ೦ಪನವು ಅಷ್ಟು ಶಕ್ತಿಶಾಲಿಯಾಗಿ ಇದ್ದರೆ ಬೃಹತ್ ಶಬ್ಧ ಕ೦ಪನದ ಪರಿಣಾಮವನ್ನು ಊಹಿಸಬಹುದು. ಈ ದಿಕ್ಕಿನಲ್ಲಿ ಸ೦ಶೋಧನೆಗಳು ಮು೦ದುವರಿದಿದೆ.

ಇನ್ನು ಭಾರತೀಯ ಸ೦ಗೀತ ಶಾಸ್ತ್ರದಲ್ಲಿ ಇರುವ ಅನೇಕ ರಾಗಗಳು ಅನೇಕ ರೀತಿಯ ಶಕ್ತಿಯನ್ನು ಹೊ೦ದಿವೆ ಎನ್ನಲಾಗಿದೆ. ದೀಪವು ತಾನಾಗೆ ಹೊತ್ತಿಕೊಳ್ಳುವ ಹಾಗೆ ಮಾಡುವ ‘’ದೀಪಕ ರಾಗ’’, ಒಣ ಕಟ್ಟಿಗೆಯು ಹಚ್ಚ ಹಸಿರಿನ೦ತೆ ಮಾಡುವ ‘’ಶ೦ಕರ ರಾಗ’’, ಮಳೆ ಬರುವ೦ತೆ ಮಾಡುವ ‘’ರಾಗ ಮಲ್ಹಾರ್’’, ಜೋರಾಗಿ ಗಾಳಿ ಬೀಸುವ೦ತೆ ಮಾಡುವ ‘’ಮಲೆಯ ಮಾರುತ ರಾಗ’’.... ಹೀಗೆ ಸ೦ಗೀತದಲ್ಲಿಯ ಅತಿ ಮಾನುಷಶಕ್ತಿಯ ವಿಷಯವಾಗಿ ಸ೦ಶೋಧನೆ ನಡೆಸಬಹುದು.

ಮ೦ತ್ರಗಳಿ೦ದ, ಸ೦ಗೀತದಿ೦ದ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯಬಹುದು ಎ೦ದು ಸ೦ಶೊಧಿಸಲಾಗಿದೆ. ಹಾಗು ಮ೦ತ್ರಗಳಿ೦ದ ಅನೇಕ ರೀತಿಯ ವ್ಯಾಧಿಗಳನ್ನು ಗುಣಪಡಿಸಬಹುದೆ೦ದು ಪ್ರಾಚೀನ ಋಷಿಗಳು ಶಾಸ್ತ್ರ ಗ್ರ೦ಥಗಳಲ್ಲಿ ವರ್ಣಿಸಿದ್ದಾರೆ. ಈ ಎಲ್ಲ ದಿಶೆಗಳಲ್ಲಿ ಸ೦ಶೋಧನೆಗಳು ನಡೆಯುತ್ತಿವೆ.

ವಿಶ್ವಸೃಷ್ಟಿಯ bigbang theoryಯ ಕಲ್ಪನೆಯು ವೈದೀಕ ಸಾಹಿತ್ಯದಲ್ಲಿ ಉಲ್ಲೇಖಿಸಿರುವ ತತ್ವಗಳಿಗೆ ಹತ್ತಿರವಾಗಿದೆ ಎ೦ದು ಹೇಳಲಾಗಿದೆ.

      ಹಲವು ಯೋಗ ಶಾಸ್ತ್ರಗಳು, ಸ್ವರಯೋಗ, ಸುರತಿಯೋಗ ಹಾಗು ಮ೦ತ್ರಯೋಗದ ಅಭ್ಯಾಸದ ಮೂಲಕ ಆಗುವ ಶಬ್ಧಸಾಧನೆಗೆ ಪ್ರಾಮುಖ್ಯತೆಯನ್ನು ನೀಡಿವೆ. ಮ೦ತ್ರ ವಿಜ್ಞಾನ ಮತ್ತು ಅದರ ಪಾರಮಾರ್ಥಿಕ ತತ್ವವು ಋಷಿಗಳ ಆಳವಾದ ಜ್ಞಾನ ಮತ್ತು ಶಬ್ಧ ನಾದದಲ್ಲಿನ ಶಕ್ತಿಯನ್ನು ಉಪಯೋಗಿಸುವ ಪಾ೦ಡಿತ್ಯದಿ೦ದ ಹೊರಹೊಮ್ಮಿದೆ. ಈ ಶಕ್ತಿಯನ್ನು ಮಹೋದ್ದೇಶವಾದ ಭೂಮ೦ಡಲದ ಶುದ್ಧೀಕರಣಕ್ಕೂ ಮತ್ತು ಭೌತಿಕ ಮತ್ತು ಆಧ್ಯಾತ್ಮಿಕ ಉನ್ನತಿಗೂ ಬಳಸಲಾಗಿದೆ. ಆದಕಾರಣ ಯಾವುದೇ ಮ೦ತ್ರವು ಪರಿಣಾಮಕಾರಿಯಾಗಲು ಪ್ರಭಾವ ಬೀರಲು ಅದರ ಕ೦ಪನ ಶಕ್ತಿ ಮತ್ತು ಅದರ ಜಪದಿ೦ದ ಉ೦ಟಾಗುವ ಚೈತನ್ಯ ಶಕ್ತಿಯು ಮುಖ್ಯ ಪಾತ್ರವನ್ನು ವಹಿಸುತ್ತದೆ. ಮ೦ತ್ರದ ಭಾಷಾ ರಚನೆಯಾಗಲಿ, ವ್ಯಾಕರಣವಾಗಲೀ ಮತ್ತು ಶಬ್ಧದ ಅರ್ಥವೇ ಆಗಲಿ ಮ೦ತ್ರಶಕ್ತಿಗೆ ಪೂರಕವಾಗಿರುತ್ತವೆ.

ಪ್ರಾಚೀನ ಋಷಿಗಳು ತಮ್ಮ ಆಳವಾದ ಧ್ಯಾನದಿ೦ದ ತಿಳಿದ೦ತೆ ಅದ್ಭುತ ಕ೦ಪನಗಳುಳ್ಳ ಮೇರೆ ಇಲ್ಲದ ಧ್ವನಿ ರಚನೆಗೆ ಅನುಗುಣವಾಗಿ ಧ್ವನಿ ತ೦ತು ಮತ್ತು ಪದಭಾಗಗಳನ್ನು ಒ೦ದು ನಿರ್ದಿಷ್ಟವಾದ ರೀತಿಯಲ್ಲಿ ಅಳವಡಿಸಿ ವೈದಿಕ ಮ೦ತ್ರಗಳು ರಚಿಸಲ್ಪಟ್ಟಿವೆ ಎ೦ದು ಹೇಳಿದ್ದಾರೆ.

16ರಿ೦ದ 20,000Hzರವರೆಗಿನ ಒ೦ದು ಕ್ರಮಬದ್ಧವಾದ ವ್ಯಾಪ್ತಿಯಲ್ಲಿ ಆಗುವ ಕ೦ಪನಗಳು ವಾಯುವಿನ ಮೂಲಕ ಹಾದುಹೋಗುವಾಗ ಆ ಕ೦ಪನಗಳನ್ನು ನಾವು ಕೇಳಬಲ್ಲೆವು. 16Hzಗಿ೦ತ ಕಡಿಮೆಯಿರುವ ಮತ್ತು 20,000Hzಗಿ೦ತ ಹೆಚ್ಚು ಇರುವ ಕ೦ಪನಗಳನ್ನು ಪ್ರಯತ್ನಪಟ್ಟರೆ ಕೇಳಬಹುದು,  ಇನ್ನು ಕೆಲ ಶಬ್ಧಗಳನ್ನು ಕೇಳಲಾಗುವುದಿಲ್ಲ ಎ೦ದು ವಿಜ್ಞಾನಿಗಳು ಹೇಳುತ್ತಾರೆ. ಇದನ್ನೇ ನಮ್ಮ ವೈದೀಕ ಸಾಹಿತ್ಯದಲ್ಲೂ ಸಾವಿರಾರು ವರ್ಷದ ಹಿ೦ದೆಯೇ ಹೇಳಲಾಗಿದೆ.

परापश्यन्तीमध्यमावैखरी इति चतुर्वाग्रूपा: ॥
-      ಪರಾ ಪಶ್ಯ೦ತೀ ಮಧ್ಯಮಾ ವೈಖರೀ ಎ೦ದು ವಾಗ್ದೇವಿಗೆ 4 ರೂಪಗಳು.

ऋग्वॆद १-१६४-४५ -
चत्वारि वाक्परिमिता पदानि तानि विदुर्ब्रह्मणा ये मनीषिण:
गुहा त्रीणि निहता नॆण्गयन्ती तुरीयम् वाचॊ मनुष्या वदन्ती ॥

- 4 ವಾಕ್ ರೂಪಗಳು ಜ್ಞಾನಿಗಳಿಗೆ ತಿಳಿದಿರುತ್ತದೆ. ಅದರಲ್ಲಿ 3 ಗುಹ್ಯತಮವಾದವುಗಳು.

ಹೀಗೆ ಸರಸ್ವತಿಗೆ ನಾಲ್ಕು  ರೂಪಗಳು ಅವಳ ಒ೦ದು ರೂಪ ಮಾತ್ರ ಸಾಮಾನ್ಯರು ತಿಳಿಯುತ್ತಾರೆ ಎ೦ದು.. ನಮ್ಮ ಪ್ರಾಚೀನರು ತಮ್ಮ ಜ್ಞಾನವನ್ನು ಸಾ೦ಕೇತಿಕ ರೂಪದಲ್ಲಿ ಸ೦ಗ್ರಹಿಸಿಟ್ಟಿದ್ದರಿ೦ದ ಅವುಗಳ ಅರ್ಥ ನಮಗೆ ತಿಳಿಯದೆ ಅವುಗಳನ್ನು ಮೂಢನ೦ಬಿಕೆ, ಗೊಡ್ಡು ತಿಳುವಳಿಕೆ ಎ೦ದು ನಿರ್ಲಕ್ಷಿಸಿಬಿಟ್ಟಿದ್ದೇವೆ. ಕೇವಲ ಮ೦ತ್ರಗಳಿ೦ದ ಹಾವು ಚೇಳುಗಳ ವಿಷವನ್ನು, ನ೦ಜನ್ನು ಕಡಿಮೆ ಮಾಡುವ, ಪುಟ್ಟ ಬಾಲೆಗಳ ಅಳುವನ್ನು ನಿಲ್ಲಿಸುವ, ಉಳುಕಿನ ನೋವನ್ನು ಕಡಿಮೆ ಮಾಡುವ ಅನೇಕ ನಾಟಿ ವೈದ್ಯರು ಇ೦ದಿಗೂ ನಮ್ಮ ನಡುವೆ ಇದ್ದಾರೆ. ಅದೇ ರೀತಿ ಇನ್ನು ಎಷ್ಟೊ ಬಗೆಯ ಮ೦ತ್ರದ ಶಕ್ತಿಯನ್ನು ತಿಳಿದಿರುವ ವಿದ್ವಾ೦ಸರೂ ಇದ್ದಾರೆ. ಹಾಗೆಯೇ ಎಷ್ಟೊ ಬಗೆಯ ಶಬ್ಧಶಕ್ತಿಗಳ ಜ್ಞಾನವನ್ನು ನಾವು ಈಗಾಗಲೇ ನಮ್ಮ ಹಿರಿಯರಿ೦ದ ತಿಳಿದುಕೊಳ್ಳದೆ ಕಳೆದುಕೊ೦ಡಿದ್ದೇವೆ. ಆದ್ದರಿ೦ದ ಈ ವಿಷಯದಲ್ಲಿ ನಮಗಿರುವ ತಿರಸ್ಕಾರವನ್ನು ಮೊದಲು ನಾವು ತೊಡೆದುಹಾಕಬೇಕು.. ಹಾಗು ಮ೦ತ್ರಗಳಲ್ಲಿರುವ  ಶಬ್ಧಶಕ್ತಿಯ ಬಗ್ಗೆ ಹೆಚ್ಚು ಹೆಚ್ಚು ಸ೦ಶೋಧನೆಗಳಾಗಬೇಕು ಎ೦ಬುದೇ ನಮ್ಮ ಆಶಯ.

Sunday 18 August 2013

ಹಾರ್ವರ್ಡ್ ಅಧ್ಯಯನಕ್ಕೆ ಕಾರಣವಾದ ಮಹಾಕುಂಭಮೇಳ









ಅತಿ ಹೆಚ್ಚು ಸಂಖ್ಯೆಯ ಜನರು ಸೇರುವ ಜಗತ್ತಿನ ಅತಿ ದೊಡ್ಡ ಸಮಾವೇಶ ಯಾವುದು?
ಕರ್ಬಾಲಾದಲ್ಲಿ ಇಮಾಂ ಹುಸೇನರ ದರ್ಶನಕ್ಕೆ ಸೇರುವ 25 ದಶಲಕ್ಷ ಸಂಖ್ಯೆಯ ಸಮಾವೇಶವೇ?
ಕೇರಳದ ಶಬರಿಮಲೈ ಕ್ಷೇತ್ರದಲ್ಲಿ ಮಕರವಿಳಕ್ಕು ದರ್ಶನಕ್ಕೆ ಸೇರುವ 5 ದಶಲಕ್ಷ ಸಂಖ್ಯೆಯ ಕಾರ್ಯಕ್ರಮವೆ?
ಜಾಗತಿಕ ಮಟ್ಟದ ಕ್ರೀಡಾಕೂಟವಾಗಿರುವ ಒಲಿಂಪಿಕ್ ಗೇಮ್ಸ್‌ಗೆ ಸೇರಲಿರುವ ಕೆಲವು ದಶಲಕ್ಷ ಸಂಖ್ಯೆಯ ಕಾರ್ಯಕ್ರಮವೆ?


       ಉಹುಂ, ಖಂಡಿತ ಇದ್ಯಾವುದೂ ಅಲ್ಲ. ಇವೆಲ್ಲ ಜಗತ್ತಿನಲ್ಲಿ ಜನರು ಸೇರುವ ಅತಿ ದೊಡ್ಡ ಇವೆಂಟ್‌ಗಳೇ ಆಗಿರಬಹುದು. ಅದರಲ್ಲಿ ಎರಡು ಮಾತಿಲ್ಲ. ಆದರೆ ಇವೆಲ್ಲಕ್ಕಿಂತಲೂ ಅತೀ ಹೆಚ್ಚು ಜನರು ಸೇರುವ ಒಂದು ಅತೀ ದೊಡ್ಡ ಸಂಖ್ಯೆಯ ಇವೆಂಟ್ ಅಂದರೆ, ಪ್ರತೀ 12 ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ನಡೆಯುವ ಮಹಾಕುಂಭಮೇಳ. ಭೂಮಿಯ ಮೇಲೆ ಇದಕ್ಕಿಂತ ಹೆಚ್ಚು ಜನರು ಸೇರುವ ಸಮಾವೇಶ ಇನ್ನೊಂದಿಲ್ಲ. ಏಕೆಂದರೆ ಈ ವರ್ಷ ಜನವರಿ 14 ರಿಂದ ಮಾರ್ಚ್ 10 ರವರೆಗೆ ನಡೆದ ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದವರ ಒಟ್ಟು ಸಂಖ್ಯೆ ಸುಮಾರು 10 ಕೋಟಿ!

  
   ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕೆಂದಾದರೆ ಪೂರ್ವಭಾವಿಯಾಗಿ ಸಾಕಷ್ಟು ದಿನಗಳ ಮುಂಚಿತವಾಗಿ ಅದಕ್ಕೆ ಸಂಬಂಧಿಸಿದ ಪ್ರಚಾರ, ಸಿದ್ಧತೆ, ಇನ್ನಿತರ ಅಗತ್ಯ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಪ್ರಚಾರವಿಲ್ಲದೆ ಇಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಿ ನಡೆಯದು ಎಂಬ ಸನ್ನಿವೇಶ ಸೃಷ್ಟಿಯಾಗಿರುವಾಗ, ಪ್ರಚಾರವೇ ಇಲ್ಲದೆ ಮಹಾಕುಂಭಮೇಳಕ್ಕೆ ಹತ್ತು ಕೋಟಿಯಷ್ಟು ಜನರು ದೇಶದ ಮೂಲೆಮೂಲೆಗಳಿಂದ ಬಂದು ಧನ್ಯರಾಗುತ್ತಾರೆಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೆ? ನಿಮಗೆ ಅಚ್ಚರಿಯಾಗಬಹುದಾದರೂ ಇದು ಮಾತ್ರ ವಾಸ್ತವ. ಕುಂಭಮೇಳಕ್ಕೆ ಯಾವುದೇ ಪ್ರಚಾರ ಸರ್ಕಾರದಿಂದಾಗಲಿ, ಇತರೆ ಖಾಸಗಿ ಸಂಸ್ಥೆಗಳಿಂದಾಗಲಿ ನಡೆಯುವುದಿಲ್ಲ. ಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ ಈ ಬಗ್ಗೆ ಜಾಹೀರಾತು ಕೂಡ ಪ್ರಕಟವಾಗುವುದಿಲ್ಲ. ಪಂಚಾಂಗದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಕುಂಭಮೇಳ ಆರಂಭವಾಗುವ ದಿನವನ್ನು ಚಿಕ್ಕದಾಗಿ ಪ್ರಕಟಿಸಲಾಗಿರುತ್ತದೆ, ಅಷ್ಟೆ. ಅಲ್ಲಿಗೆ ಬರುವ ಕೋಟ್ಯಂತರ ಮಂದಿಗೆ ಅದೊಂದೇ ಸೂಚನೆ. ಇನ್ನಾವುದೇ ಆಮಂತ್ರಣ, ಕರೆ ಅವರಿಗಿರುವುದಿಲ್ಲ. ಆದರೂ ಕುಂಭಮೇಳದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದೊಂದು ಜಗತ್ತಿನ ವಿಸ್ಮಯ! ಅದಕ್ಕೇ, ಅತೀ ಹೆಚ್ಚು ಜನರು ಸೇರುವ ಜಗತ್ತಿನ ಅತಿ ದೊಡ್ಡ ಸಮಾವೇಶ ಇದೆಂದು ವಿಕ್ಕಿಪೀಡಿಯಾದಲ್ಲೂ ದಾಖಲೆಯಾಗಿರುವುದು.


   ಕುಂಭಮೇಳ ಎಂಬ ಹೆಸರೇ ವಿಚಿತ್ರವಾದುದು. ಪೌರಾಣಿಕ ಇತಿಹಾಸ ಗೊತ್ತಿಲ್ಲದವರಿಗೆ ಇದೆಂತಹ ವಿಚಿತ್ರ ಮೇಳ ಎಂದೆನಿಸದೆ ಇರದು. ಸಂಸ್ಕೃತದಲ್ಲಿ ಕುಂಭವೆಂದರೆ ಮಡಿಕೆ. ಅಷ್ಟನ್ನೇ ಅರ್ಥೈಸಿಕೊಂಡರೆ ಮಡಿಕೆಗಳನ್ನು ಮಾರಾಟ ಮಾಡುವ ಮೇಳ ಇದಾಗಿರಬಹುದೇ ಎಂದು ಕೆಲವರು ವ್ಯಾಖ್ಯಾನಿಸಿದರೆ ಆಶ್ಚರ್ಯವಿಲ್ಲ. ಕುಂಭಮೇಳಕ್ಕೊಂದು ಐತಿಹ್ಯವೇ ಇದೆ. ಪುರಾಣಕಾಲದಲ್ಲಿ ದೇವತೆಗಳು ದೂರ್ವಾಸಮುನಿಯ ಶಾಪದಿಂದ ತಮ್ಮ ಶಕ್ತಿಯನ್ನು ಕಳೆದುಕೊಂಡರಂತೆ. ಅದನ್ನು ಮರಳಿ ಪಡೆಯಲು ಅವರು ಬ್ರಹ್ಮ ಹಾಗೂ ಶಿವನ ಮೊರೆ ಹೋದರು. ಆದರೆ ಬ್ರಹ್ಮ ಹಾಗೂ ಶಿವ ವಿಷ್ಣುವಿನ ಬಳಿ ಹೋಗಿ ಎಂದರಂತೆ. ಬಳಿಕ ದೇವತೆಗಳು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿದ ಬಳಿಕ ಕ್ಷೀರಸಾಗರದ ಮಥನ ನಡೆಸಿ ಅಮೃತವನ್ನು ಪಡೆಯಿರಿ. ಆ ಅಮೃತವನ್ನು ಕುಡಿದರೆ ನೀವು ಮತ್ತೆ ಶಕ್ತಿವಂತರಾಗುವಿರಿ ಎಂದನು. ಸಮುದ್ರಮಥನ ನಡೆದಾಗ ಅದರಲ್ಲಿ ತೇಲಿ ಬಂದ ಪದಾರ್ಥಗಳಲ್ಲಿ ಅಮೃತವಿದ್ದ ಕುಂಭವೂ ಒಂದು. ಆದರೆ ಸಮುದ್ರ ಮಥನದಲ್ಲಿ ಪಾಲ್ಗೊಂಡಿದ್ದ ರಾಕ್ಷಸರು ತಮಗೆ ಅಮೃತ ಬೇಕೆಂದರು. ದೇವತೆಗಳು ಬಿಡಲಿಲ್ಲ. ಪರಸ್ಪರ ಕಾದಾಟವಾಗಿ 12 ಹಗಲು ಹಾಗೂ 12 ರಾತ್ರಿಗಳ ಕಾಲ ಇದು ಮುಂದುವರಿಯಿತು. ಈ ನಡುವೆ ವಿಷ್ಣು ಅಮೃತವಿದ್ದ ಕುಂಭವನ್ನು ತನ್ನೊಂದಿಗೆ ಒಯ್ದನೆಂದು ಪುರಾಣ ಕಥೆ ಹೇಳುತ್ತದೆ. ಹಾಗೆ ಅವಸರದಲ್ಲಿ ಅಮೃತ ಕುಂಭವನ್ನು ಒಯ್ಯುವಾಗ ಅದರ ಕೆಲವು ಹನಿಗಳು ಪ್ರಯಾಗ, ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕಗಳಲ್ಲಿ ಚೆಲ್ಲಿದವೆಂದು ಪ್ರತೀತಿ. ಅಮೃತದ ಹನಿಗಳು ಬಿದ್ದ ಈ ಕ್ಷೇತ್ರಗಳು ಪವಿತ್ರ ಕ್ಷೇತ್ರಗಳಾಗಿ ಅಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಲಕ್ಷಾಂತರ, ಈಗ ಕೋಟ್ಯಾಂತರ ಭಕ್ತರು ಆಗಮಿಸಿ ಧನ್ಯರಾಗುತ್ತಿದ್ದಾರೆ. ಕುಂಭಮೇಳವು ಈ ನಾಲ್ಕು ಸ್ಥಳಗಳಲ್ಲಿ ಜರಗುತ್ತದೆ. ಪ್ರತಿ 6 ವರ್ಷಕ್ಕೊಮ್ಮೆ ಹರಿದ್ವಾರ ಹಾಗೂ ಪ್ರಯಾಗಗಳಲ್ಲಿ ಅರ್ಧ ಕುಂಭಮೇಳ ನಡೆದರೆ ಪ್ರತಿ 12 ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳವೂ ಪ್ರಯಾಗದಲ್ಲಿ ನಡೆಯುತ್ತಿದೆ. ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತೀ ನದಿ ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಭಕ್ತರು, ಸಂತರು, ಸಾಧುಗಳು, ಸಂನ್ಯಾಸಿಗಳು ಲಕ್ಷಾಂತರ, ಕೋಟ್ಯಾಂತರ ಸಂಖ್ಯೆಯಲ್ಲಿ ಸ್ನಾನ ಮಾಡಿ ತಮ್ಮ ಜೀವನ ಪಾವನವಾಯಿತೆಂದು ಭಾವಿಸುತ್ತಾರೆ. ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವುದೇ ಪ್ರತಿಯೊಬ್ಬರ ಪ್ರಮುಖ ಕರ್ತವ್ಯ. ಆ ಒಂದು ಸ್ನಾನಕ್ಕಾಗಿ ಅದೆಷ್ಟೋ ಸಾವಿರ ಮೈಲಿ ದೂರದಿಂದಲೂ ಭಕ್ತರು ಆಗಮಿಸುತ್ತಾರೆ. ನೂಕು ನುಗ್ಗಲಿದ್ದರೂ ಕಷ್ಟಸಾಧ್ಯವಾದರೂ ಹೇಗೋ ಆ ಪವಿತ್ರ ಸಂಗಮದಲ್ಲಿ ಒಂದು ಮುಳುಗು ಹಾಕಲೇಬೇಕೆಂಬ ದೃಢಸಂಕಲ್ಪ ವಯೋವೃದ್ಧರಿಗೂ ಇರುತ್ತದೆ. ಸಂಕಲ್ಪ ಈಡೇರದೆ ಅಲ್ಲಿಂದ ವಾಪಸ್ ಯಾರೂ ತೆರಳುವುದಿಲ್ಲ. ಅದೇ ಕುಂಭಮೇಳದ ವಿಶೇಷತೆ.


    ಪ್ರಾಚೀನ ಭಾರತದ ಯಾತ್ರೆ ಕೈಗೊಂಡು ಭಾರತದ ಮಹಾನತೆಯ ಬಗ್ಗೆ ಇತಿಹಾಸದಲ್ಲಿ ದಾಖಲಿಸಿದ ಚೈನಾದ ಯಾತ್ರಿಕ ಹ್ಯುಯನ್‌ತ್ಸಾಂಗ್ ಕೂಡ ಕುಂಭಮೇಳದ ಕುರಿತು ಬರೆದಿದ್ದಾನೆ. ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಆಗಮಿಸಿದ್ದ ಹ್ಯುಯನ್‌ತ್ಸಾಂಗ್ ದಾಖಲೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ೧೮೯೫ರಲ್ಲಿ ಖ್ಯಾತ ಲೇಖಕ ಮಾರ್ಕ್ ಟ್ವೈನ್ ಕುಂಭಮೇಳವನ್ನು ವೀಕ್ಷಿಸಿ ಅನಂತರ ಆತ ತನ್ನ ಅನುಭವವನ್ನು ದಾಖಲಿಸಿರುವುದು ಹೀಗೆ: “It is wonderful, the power of a faith like that, that can make multitudes upon multitudes of the old and weak and the young and frail enter without hesitation or complaint upon such incredible journeys and endure the resultant miseries without repining. It is done in love, or it is done in fear; I do not know which it is. No matter what the impulse is, the act born of it is beyond imagination, marvelous to our kind of people, the cold whites.”  ಕುಂಭಮೇಳ ಆತನಿಗೆ ಒಂದು ವಿಸ್ಮಯವೆನಿಸಿದ್ದು ಹೀಗೆ. ಕಲ್ಪನೆಗೂ ಮೀರಿದ ಸಂಗತಿ ಇದೆಂದು ಆತ ಬಣ್ಣಿಸಿರುವುದು ಉತ್ಪ್ರೇಕ್ಷೆಯೇನಲ್ಲ.


    ಕುಂಭಮೇಳದಲ್ಲಿ ನಡೆಯುವುದು ಪವಿತ್ರ ಸ್ನಾನ, ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು, ಉದ್ಬೋಧನೆ, ಭಜನೆ, ಕೀರ್ತನೆ, ಬಡವರಿಗೆ ಸಾಮೂಹಿಕ ಅನ್ನದಾನ, ಧಾರ್ಮಿಕ ಉಪನ್ಯಾಸ ಇತ್ಯಾದಿ ಇತ್ಯಾದಿ. ಇದೊಂದು ಸಂಪೂರ್ಣ ಧಾರ್ಮಿಕ ಸಮಾವೇಶ. ಇಲ್ಲಿ ಭಕ್ತಿ, ಧಾರ್ಮಿಕತೆಗೇ ಆದ್ಯತೆ. ಹಾಗಾಗಿಯೇ ಇಲ್ಲಿ ಯಾವುದೇ ಗಲಾಟೆ ಗೌಜು ಇರುವುದಿಲ್ಲ. ಯಾರಿಗೂ ಊಟ ಸಿಗಲಿಲ್ಲವೆಂದು ಇಲ್ಲಿ ಪ್ರತಿಭಟನೆ ಕೇಳಿಬರುವುದಿಲ್ಲ. ತಮಗೆ ಸೂಕ್ತ ವಸತಿ ಸಿಗಲಿಲ್ಲವೆಂದು ಯಾರೂ ಅಪಸ್ವರವೆತ್ತುವುದಿಲ್ಲ. ಘನತೆಗೆ ತಕ್ಕಂತೆ ತಮ್ಮನ್ನು ಗೌರವಿಸಲಿಲ್ಲ ಎಂದು ಪ್ರತಿಷ್ಠಿತರಾರೂ ಇಲ್ಲಿ ಕೊರಗುವುದಿಲ್ಲ. ಏಕೆಂದರೆ ಇದು ಜನರೇ ಆಚರಿಸುವ ಮೇಳ. ಇಲ್ಲಿ ಯಾರಿಗೆ ಯಾರೂ ಗೌರವ ನೀಡಬೇಕಾದ ಅಗತ್ಯವಿರುವುದಿಲ್ಲ. ಎಲ್ಲ ಗೌರವವೂ ಆ ಪರಮಾತ್ಮನಿಗೇ ಮೀಸಲು. ಪವಿತ್ರ ಸ್ನಾನದಿಂದ ಪುನೀತರಾಗಿ ಪರಮಾತ್ಮನ ಕೃಪಾಕಟಾಕ್ಷಕ್ಕೆ ಪಾತ್ರರಾಗುವುದೊಂದೇ ಎಲ್ಲರ ಹೆಬ್ಬಯಕೆ. ಕುಂಭಮೇಳ ನಡೆಯುವ ಸಂದರ್ಭದಲ್ಲಿ ಚರ್ಮ ಸೀಳುವ ತೀವ್ರ ಚಳಿ ಬಾಧಿಸುತ್ತಿದ್ದರೂ ಅಲ್ಲಿಗೆ ಬಂದ ಭಕ್ತರಿಗೆ ಅದೊಂದು ಅಡ್ಡಿ ಎನಿಸುವುದೇ ಇಲ್ಲ. ಅಂತಹ ಚಳಿಯಲ್ಲೂ ತ್ರಿವೇಣಿ ಸಂಗಮದ ಶೀತಲ ನೀರು ಅವರನ್ನು ಕೈಬೀಸಿ ಕರೆಯುತ್ತದೆ. ಸ್ನಾನ ಮಾಡಲು ಪ್ರಚೋದಿಸುತ್ತದೆ. ತುಣುಕು ಬಟ್ಟೆಯನ್ನೂ ಧರಿಸದ ನಗ್ನ ನಾಗಾ ಸಂನ್ಯಾಸಿಗಳಂತೂ ಖಡ್ಗ ಹಿಡಿದು ಹರಹರ ಗಂಗೇ, ಜೈ ಭೋಲೇನಾಥ್ ಎಂದು ಘೋಷಣೆ ಕೂಗುತ್ತಾ ತ್ರಿವೇಣಿ ಸಂಗಮದಲ್ಲಿ ಧುಮುಕಿ ಸ್ನಾನದ ಸಂತೋಷ ಅನುಭವಿಸುವ ಆ ದೃಶ್ಯವನ್ನು ಪ್ರತ್ಯಕ್ಷ ನೋಡಿಯೇ ಸವಿಯಬೇಕು. ಸಾವಿರಾರು ಸಂಖ್ಯೆಯಲ್ಲಿ ಹಿಂಡುಹಿಂಡಾಗಿ ಬರುವ ನಾಗಾ ಸಂನ್ಯಾಸಿಗಳನ್ನು ಕಂಡರೆ ಯಾರೂ ತಮಾಷೆ ಮಾಡಲಾರರು. ಅವರ ಕಾಲಿಗೆರಗಿ ಆಶೀರ್ವಾದ ಬೇಡುತ್ತಾರೆ. ಅವರು ಆಶೀರ್ವದಿಸಿದರೆ ತಮ್ಮ ಜನ್ಮ ಪಾವನವಾದೀತೆಂದು ಆಶಿಸುತ್ತಾರೆ. ಮೈತುಂಬ ಬೂದಿ ಬಳಿದುಕೊಂಡು, ಸಂಜೆಯ ವೇಳೆಗೆ ಗಾಂಜಾ ಸೇವಿಸುತ್ತಲೋ ಇಲ್ಲವೆ ಧ್ಯಾನಸ್ಥ ಸ್ಥಿತಿಯಲ್ಲೋ ಕಣ್ಣುಮುಚ್ಚಿ ಕುಳಿತ ನಾಗಾ ಸಂನ್ಯಾಸಿಗಳು ವಿಚಾರವಾದಿಗಳ ಪಾಲಿಗೆ ಗೇಲಿಯ ವಸ್ತುವಾದರೂ ಅವರನ್ನು ಕುಹಕ ದೃಷ್ಟಿಯಿಂದ ಯಾರೂ ನೋಡುವ ಧೈರ್ಯ ತೋರುವುದಿಲ್ಲ.

 
    ಒಮ್ಮೆ ಕುಂಭಮೇಳದ ಸಂದರ್ಭದಲ್ಲಿ ನಗ್ನ ನಾಗಾ ಸಂನ್ಯಾಸಿಗಳು ಹರಹರ ಮಹಾದೇವ್ ಘೋಷಣೆ ಕೂಗುತ್ತಾ ಗಂಗೆಯ ಸ್ನಾನಕ್ಕೆ ಧುಮುಕಿದರು. ಸ್ನಾನವಾದ ಬಳಿಕ ಅವರೆಲ್ಲ ದಡಕ್ಕೆ ಬರುತ್ತಿರುವಾಗ ಶ್ರೀಮಂತ ಸೇಟ್‌ಜೀ ಒಬ್ಬ 1 ಲಕ್ಷ ರೂ.ಗಳ ನೋಟಿನ ಕಂತೆಯೊಂದನ್ನು ಒಬ್ಬ ನಾಗಾ ಸಂನ್ಯಾಸಿಯ ಕೈಗೆ ನೀಡಿ, ತನ್ನನ್ನು ಆಶೀರ್ವದಿಸಬೇಕೆಂದು ಕೋರಿದ. ನೋಟಿನ ಕಂತೆಯನ್ನು ಕೈಗೆ ತೆಗೆದುಕೊಂಡ ಆ ನಾಗಾ ಸಂನ್ಯಾಸಿ ಒಮ್ಮೆ ಗಹಗಹಿಸಿ ನಗುತ್ತಾ, “ಇನ್ ರುಪಯೋಂಸೇ ಮುಝೆ ಕ್ಯಾ ಫಾಯಿದಾ?” ಎನ್ನುತ್ತಾ ಆ ನೋಟುಗಳನ್ನು ಎಲ್ಲರೂ ನೋಡುತ್ತಿದ್ದಂತೆ ಗಂಗಾನದಿಗೆ ಎಸೆದ. ಪಾಪ, ಭಕ್ತಿಯಿಂದ ಅದನ್ನರ್ಪಿಸಿದ ಸೇಟ್‌ಜೀ ಪಾಡು ಹೇಗಾಗಿರಬಹುದು! ನಾಗಾ ಸಂನ್ಯಾಸಿಗಳೇ ಹಾಗೆ. ಯಾವುದೇ ಐಹಿಕ ಭೋಗಗಳು ಅವರನ್ನು ಕಾಡದು. ಅವರಿರುವುದೇ ಹಿಮಾಲಯದ ಯಾವುದೋ ರಹಸ್ಯ ಸ್ಥಳಗಳಲ್ಲಿ. ತಿನ್ನುವುದು ಕೈಗೆ ಸಿಕ್ಕಿದ ಗೆಡ್ಡೆಗೆಣಸಿನಂತಹ ಕಚ್ಚಾ ಆಹಾರ. ಮೈಮುಚ್ಚಲು ಉಡುಪಿನ ಗೊಡವೆ ಅವರಿಗೆ ಬೇಕಿಲ್ಲ. ಅವರದು ಮುಕ್ತ ಬದುಕು. ಅಂಥವರೂ ಕೂಡ 12 ವರ್ಷಕ್ಕೊಮ್ಮೆ ಕುಂಭಮೇಳದ ಸಂದರ್ಭದಲ್ಲಿ ತಪ್ಪದೇ ಪ್ರಯಾಗಕ್ಕೆ ಬಂದು ಸ್ನಾನ ಮಾಡುತ್ತಾರೆ.


    ಕೋಟ್ಯಾಂತರ ಮಂದಿ ಪಾಲ್ಗೊಳ್ಳುವ ಕುಂಭಮೇಳದಲ್ಲಿ ಯಾವುದೇ ದೊಡ್ಡ ಅವಘಡಗಳು ಸಂಭವಿಸುವುದಿಲ್ಲ ಎನ್ನುವುದು ಇನ್ನೊಂದು ವಿಶೇಷತೆ. ಅಲ್ಲಿ ಲಕ್ಷಾಂತರ ಮಂದಿ ಮಹಿಳೆಯರು ಬರುತ್ತಾರೆ. ಆದರೆ ಯಾವುದೇ ಮಾನಭಂಗದ ಘಟನೆ ನಡೆಯುವುದಿಲ್ಲ. ಕೋಟ್ಯಂತರ ಮಂದಿ ಅಲ್ಲಿ ಬೀಡು ಬಿಟ್ಟಿರುತ್ತಾರೆ. ಆದರೆ ಯಾವುದೇ ಕಳ್ಳತನದ ಪ್ರಸಂಗ ವರದಿಯಾಗುವುದಿಲ್ಲ. ಆದರೆ ಕೆಲವೊಮ್ಮೆ ಜನರ ಅವಸರ ಪ್ರವೃತ್ತಿಯಿಂದ ಚಿಕ್ಕಪುಟ್ಟ ಅವಘಡಗಳು ಸಂಭವಿಸಿವೆ ಎನ್ನುವುದು ನಿಜ. 2003 ರಲ್ಲಿ ನಾಸಿಕದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ 39 ಯಾತ್ರಿಕರು ಕಾಲ್ತುಳಿತಕ್ಕೀಡಾಗಿ ಸಾವಿಗೀಡಾಗಿದ್ದರು. ಸಾಧುವೊಬ್ಬ ಜನರತ್ತ ಎಸೆದ ಕೆಲವು ಬೆಳ್ಳಿ ನಾಣ್ಯಗಳನ್ನು ಆರಿಸಿಕೊಳ್ಳುವ ಧಾವಂತದಲ್ಲಿ ಈ ಅವಘಡ ಸಂಭವಿಸಿತ್ತು. 1954ರ ಕುಂಭಮೇಳದ ಸಂದರ್ಭದಲ್ಲಿ 500 ಮಂದಿ ಕಾಲ್ತುಳಿತಕ್ಕೀಡಾಗಿ ಸಾವಿಗೀಡಾಗಿದ್ದರು. ಈ ಬಾರಿಯ ಕುಂಭಮೇಳದಲ್ಲೂ ಅಲಹಾಬಾದ್ ರೈಲ್ವೇ ನಿಲ್ದಾಣದ ಬಳಿ 36 ಮಂದಿ ಕಾಲ್ತುಳಿತಕ್ಕೀಡಾಗಿ ಅಸುನೀಗಿದ್ದರು. 1892 ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಕಾಲರಾ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿತ್ತು. ಆದರೆ ಕೋಟ್ಯಂತರ ಮಂದಿ ಸೇರುವ ಅತಿ ದೊಡ್ಡ ಸಮಾವೇಶದಲ್ಲಿ ಇಂತಹ ಚಿಕ್ಕಪುಟ್ಟ ಅವಘಡಗಳು ಸ್ವಾಭಾವಿಕ.

ಜಗತ್ತಿನ ಅತಿ ದೊಡ್ಡ , ಅತಿ ಹೆಚ್ಚು ಸಂಖ್ಯೆಯ ಜನರು ಸೇರುವ ಸಮಾವೇಶವಾಗಿರುವ ಕುಂಭಮೇಳದ ಬಗ್ಗೆ ಈಗಾಗಲೇ ಸಾಕಷ್ಟು ಸಾಕ್ಷ್ಯಚಿತ್ರಗಳು ಬಿಡುಗಡೆಯಾಗಿವೆ. 1982 ರಲ್ಲಿ ಬಂಗಾಳೀ ಚಿತ್ರ ನಿರ್ದೇಶಕ ದಿಲೀಪ್‌ರಾಯ್ ಅಮೃತ ಕುಂಭೇರ್ ಸಂಧಾನೆ ಎಂಬ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿದ್ದರು. ಗ್ರಹಂ ಡೇ 2001 ರಲ್ಲಿ ಕುಂಭಮೇಳ : ದ ಗ್ರೇಟೆಸ್ಟ್ ಶೋ ಆನ್ ಅರ್ಥ್ ಎಂಬ ಚಿತ್ರ ನಿರ್ಮಿಸಿದ್ದ. 2004 ರಲ್ಲಿ ನದೀಂವುದ್ದೀನ್ ಕುಂಭಮೇಳದ ಕುರಿತು ನಿರ್ಮಿಸಿದ ಸಾಕ್ಷ್ಯಚಿತ್ರ – ಕುಂಭಮೇಳ : ಸಾಂಗ್ಸ್ ಆಫ್ ದಿ ರಿವರ್. 2010 ರಲ್ಲಿ ಅಮೆರಿಕದ “ಸಿಬಿಎಸ್ ಸಂಡೇ ಮಾರ್ನಿಂಗ್” ಎಂಬ ಜನಪ್ರಿಯ ಟಿವಿ ಕಾರ್ಯಕ್ರಮದಲ್ಲಿ ಹರಿದ್ವಾರದ ಕುಂಭಮೇಳದ ಕುರಿತು ವಿಸ್ತೃತ ಕವರೇಜ್ ನೀಡಲಾಗಿತ್ತು. 2004 ರಲ್ಲಿ ನಿಕ್ ಡೇ ಎಂಬ ಇನ್ನೊಬ್ಬ ನಿರ್ದೇಶಕ ಶಾರ್ಟ್ ಕಟ್ ಟು ನಿರ್ವಾಣ : ಕುಂಭಮೇಳ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದ. ಇಂತಹ ಅದೆಷ್ಟೋ ಸಾಕ್ಷ್ಯಚಿತ್ರಗಳು ನಿರ್ಮಾಣವಾಗಿವೆ.
ಕಳೆದ ಜನವರಿ 14 ರಿಂದ 55 ದಿನಗಳ ಕಾಲ ನಡೆದ ಕುಂಭಮೇಳದಲ್ಲಿ ಭಾಗವಹಿಸಿದವರ ಸಂಖ್ಯೆ ಸುಮಾರು 10 ಕೋಟಿ. ಮಕರ ಸಂಕ್ರಾತಿ ದಿನದಂದು 1 ಕೋಟಿಗೂ ಹೆಚ್ಚು ಭಕ್ತರು ಆಗಮಿಸಿದ್ದರು. ಫೆ. 10 ರ ಮೌನಿ ಅಮವಾಸ್ಯೆಯ ಪವಿತ್ರ ದಿನದಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದವರ ಸಂಖ್ಯೆ 3 ಕೋಟಿಗೂ ಹೆಚ್ಚು. ವಿದೇಶೀ ಯಾತ್ರಿಕರ ಸಂಖ್ಯೆ ಈ ಬಾರಿ 10 ಲಕ್ಷಕ್ಕೂ ಅಧಿಕ ಮಂದಿ. ಕುಂಭಮೇಳಕ್ಕೆ ಈ ಬಾರಿಯ ಒಟ್ಟು ಬಜೆಟ್ ಗಾತ್ರ 1,200 ಕೋಟಿ ರೂ. (2001 ರ ಕುಂಭಮೇಳಕ್ಕಿಂತ 200 ಕೋಟಿ ಹೆಚ್ಚಿನ ಮೊತ್ತ) ಕುಂಭಮೇಳದ ಕಾರಣಕ್ಕಾಗಿ ಉದ್ಯೋಗ ದೊರಕಿದವರ ಸಂಖ್ಯೆ 6 ಲಕ್ಷ. ಕುಂಭಮೇಳದಿಂದಾಗಿ ಉ.ಪ್ರ. ಸರ್ಕಾರಕ್ಕೆ ಹರಿದು ಬಂದ ಆದಾಯ 12 ಸಾವಿರ ಕೋಟಿ ರೂ. ಭಕ್ತರ ಅನುಕೂಲಕ್ಕಾಗಿ 571 ಕಿ.ಮೀ.ನಷ್ಟು ನೀರಿನ ಪೈಪ್‌ಲೈನ್, 800 ಕಿ.ಮೀ.ನಷ್ಟು ವಿದ್ಯುತ್ ವಯರ್ ಹಾಗೂ 68 ವಿದ್ಯುತ್ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲಾಗಿತ್ತು. ಯಾತ್ರಿಕರ ಆಹಾರ ವ್ಯವಸ್ಥೆಗಾಗಿ 125 ಪಡಿತರ ಅಂಗಡಿಗಳು, 4 ಗೋದಾಮುಗಳನ್ನು ಮೇಳದ ಪ್ರದೇಶದಲ್ಲಿ ತೆರೆಯಲಾಗಿತ್ತು. ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಜಗತ್ತಿನಾದ್ಯಂತ ಇರುವ 2500 ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳು, ಸಂಘಟನೆಗಳು ಕುಂಭಮೇಳದಲ್ಲಿ ಈ ಬಾರಿ ಪಾಲ್ಗೊಂಡಿದ್ದವು. ಕುಂಭಮೇಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನಿಯೋಜಿತರಾಗಿದ್ದ ಪೊಲೀಸರ ಸಂಖ್ಯೆ 30 ಸಾವಿರ. 30 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿತ್ತು. 72 ಅರೆ ಮಿಲಿಟರಿ ಪಡೆ ಕಂಪೆನಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಮೇಳ ನಡೆಯುವ ಜಾಗ ಹಾಗೂ ಅಲಹಾಬಾದ್ ನಗರಗಳಲ್ಲಿ 120 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. 120 ಆಂಬ್ಯುಲೆನ್ಸ್ ವಾಹನಗಳು ಶ್ರಮಿಸಿವೆ. 100 ಹಾಸಿಗೆಯ ಹೊಸ ಆಸ್ಪತ್ರೆ ಕುಂಭಮೇಳದ ಪ್ರದೇಶದಲ್ಲಿ ನಿರ್ಮಾಣವಾಗಿತ್ತು…  ಹೀಗೆ ಈ ಬಾರಿಯ ಕುಂಭಮೇಳದ ಗಮನಾರ್ಹ ಅಂಶಗಳು ಸಾಕಷ್ಟಿವೆ.
  
    ಕುಂಭಮೇಳ ಆಕರ್ಷಿಸುತ್ತಿರುವುದು ಕೇವಲ ಭಕ್ತರು, ಯಾತ್ರಿಕರನ್ನಷ್ಟೇ ಅಲ್ಲ. ದೂರದ ಹಾರ್ವರ್ಡ್ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಿಗಳು ಹಾಗೂ ಸಂಶೋಧಕರು ಕೂಡ ಈಗ ಕುಂಭಮೇಳದ ಕುರಿತು ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿದ್ದಾರೆ. ಕುಂಭಮೇಳದ ಸಂದರ್ಭದಲ್ಲಿ ಸುಮಾರು 50 ಮಂದಿ ಹಾರ್ವರ್ಡ್ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಂಶೋಧಕರು ಪ್ರಯಾಗಕ್ಕೆ ಬಂದಿಳಿದಿದ್ದರು. ಅವರು ಬಂದಿದ್ದು ಪವಿತ್ರ ಸ್ನಾನಕ್ಕಾಗಿ ಅಲ್ಲ ಅಥವಾ ಪುಣ್ಯ ಸಂಪಾದನೆಗೂ ಅಲ್ಲ. ಕುಂಭಮೇಳಕ್ಕೆ ಲಾಗಾಯ್ತಿನಿಂದ ಯಾಕೆ ಇಷ್ಟೊಂದು ಅಪಾರ ಸಂಖ್ಯೆಯ ಜನರು ಹರಿದು ಬರುತ್ತಿದ್ದಾರೆ, ಇಷ್ಟೊಂದು ಜನರು ಸೇರಿದರೂ ಯಾವುದೇ ಘರ್ಷಣೆ, ಅವಘಡ ಏಕೆ ನಡೆಯುವುದಿಲ್ಲ, ಯಾವುದೇ ಪ್ರಾಥಮಿಕ ವ್ಯವಸ್ಥೆ, ಸೌಲಭ್ಯವಿಲ್ಲದಿದ್ದರೂ ಯಾತ್ರಿಕರು ಯಾಕೆ ಬೇಸರ ಮಾಡಿಕೊಳ್ಳುವುದಿಲ್ಲ… ಮುಂತಾದ ಅನೇಕ ಉತ್ತರ ಸಿಗದ ನಿಗೂಢ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕಲು ಕುಂಭಮೇಳದಲ್ಲಿ ಅವರು ಪ್ರಯತ್ನಿಸಿದರು. ಹಲವು ಬಗೆಯ ಅಧ್ಯಯನಗಳನ್ನು ನಡೆಸಿದರು. ಇದಕ್ಕಾಗಿ ಅವರೆಲ್ಲ ಕುಂಭಮೇಳ ಪರಿಸರದ ಬೀದಿಬೀದಿಗಳಲ್ಲಿ ಸುತ್ತಾಡಿದರು. ಭಕ್ತರ ಭಜನೆಗಳನ್ನು ಆಲಿಸಿದರು. ನಗ್ನ ನಾಗಾ ಸಂನ್ಯಾಸಿಗಳನ್ನು ಹತ್ತಿರದಿಂದ ಕಂಡರು. ಕಷ್ಟಪಟ್ಟು ನದಿಗಿಳಿದು ಸ್ನಾನ ಮಾಡಿದರೂ ಮೇಲೆ ಬರುವಾಗ ಧನ್ಯತೆ ಕಾಣುತ್ತಿದ್ದ ಭಕ್ತರನ್ನು ಕಂಡು ಅಚ್ಚರಿಪಟ್ಟರು. ಇಷ್ಟಾದರೂ ಕುಂಭಮೇಳ ತನ್ನೊಳಗೇ ಅಡಗಿಸಿಕೊಂಡಿದ್ದ ನಿಗೂಢತೆಯನ್ನು ಅವರಿಂದ ಭೇದಿಸಲು ಸಾಧ್ಯವಾಗಿಲ್ಲ. ಅವರೆಲ್ಲ ಮುಂದೆ ಹನ್ನೆರಡು ವರ್ಷಗಳ ಬಳಿಕ ನಡೆಯುವ ಕುಂಭಮೇಳಕ್ಕೆ ಮತ್ತೆ ಬಂದು ಅಧ್ಯಯನ ಮಾಡಬಹುದು. ಒಂದಂತೂ ನಿಜ. ಕುಂಭಮೇಳವೆನ್ನುವುದು ಕೇವಲ ಪಾಪ ಪರಿಹಾರಕ್ಕಾಗಿ, ಪುಣ್ಯ ಸಂಪಾದನೆಗಾಗಿ ಇರುವ ಕಾರ್ಯಕ್ರಮವಲ್ಲ. ಅದೊಂದು ನಂಬಿಕೆಯ ಪ್ರತೀಕ. ಗಂಗೆ ಕೊಳಕಾಗಿದ್ದರೂ ಭಕ್ತರಿಗೆ ಅಸಹ್ಯವೆನಿಸುವುದಿಲ್ಲ. ಚಳಿ ಕೊರೆಯುತ್ತಿದ್ದರೂ ಪುಣ್ಯಸ್ನಾನ ಮುಗಿಸದೆ ಮರಳುವ ಮನಸ್ಸಾಗುವುದಿಲ್ಲ. ಕುಂಭಮೇಳ ಇಂತಹ ಕುತೂಹಲಗಳನ್ನು, ನಿಗೂಢತೆಗಳನ್ನು ಬಚ್ಚಿಟ್ಟುಕೊಂಡು ಜಗತ್ತಿನ ವಿಚಾರವಾದಿಗಳನ್ನು ಕಾಡಿಸುತ್ತಲೇ ಇದೆ.

ಅತೀ ಹೆಚ್ಚು ಜನರು ಸೇರುವ ಜಗತ್ತಿನ ಅತೀ ದೊಡ್ಡ ಸಮಾವೇಶವೆಂದರೆ, ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳ. ಯಾವುದೇ ಪ್ರಚಾರವಿಲ್ಲದೆ ಭಕ್ತರು ತಾವಾಗಿಯೇ ಕೋಟ್ಯಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಕುಂಭಮೇಳ ಈಗ ಹಾರ್ವರ್ಡ್ ವಿ.ವಿ. ವಿಜ್ಞಾನಿಗಳಿಗೂ ಅಧ್ಯಯನದ ವಸ್ತುವಾಗಿದೆ. ಕುಂಭಮೇಳದ ನಿಗೂಢತೆಯನ್ನು ಭೇದಿಸಲು ಅವರು ಮುಂದಾಗಿದ್ದಾರೆ.


Reference : news13 - ನೇರ ನೋಟ

Sunday 26 May 2013

ಯಾರು ಈ ಸಿಖ್ಖರು....?




‘’ಸತ್ ಶ್ರೀ ಅಕಾಲ್’’
ಸತ್ಯವೇ ದೇವರು


        ಸೈನಿಕ ವೃತ್ತಿಯಲ್ಲಿ ನಮ್ಮ ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡುತ್ತಿರುವ ಹಲವರ ಪೈಕಿ ‘’ಸಿಖ್ಖರು’’ ಬಹುಸ೦ಖ್ಯಾತರು ಹಾಗು ಇವರು ಇತರೇ ಎಲ್ಲ ರ೦ಗಗಳಲ್ಲಿಯೂ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿರುವ ಜನರು. ಆದ್ದರಿ೦ದ ಇವರ ಬಗ್ಗೆ, ಇವರ ಧರ್ಮದ ಬಗ್ಗೆ ಪುಟ್ಟ ಪರಿಚಯ ಈ ಸ೦ಚಿಕೆಯಲ್ಲಿ....

        ‘’ಸಿಖ್ಖ್’’ ಎ೦ದರೆ ಪ೦ಜಾಬೀ ಭಾಷೆಯಲ್ಲಿ ‘’ಶಿಷ್ಯ’’ ಎ೦ದರ್ಥ. ಈ ಧರ್ಮವನ್ನು ಪಾಲಿಸುವವರೇ ಸಿಖ್ಖರು. ಸಿಖ್ಖ್  ಧರ್ಮಕ್ಕೆ ‘’ದಶ ಗುರು ಪರ೦ಪರೆ’’ ಹಾಗು ‘’ಗ್ರ೦ಥ್ ಸಾಹೇಬ್’’ ಇವುಗಳು ಆಧಾರ. ಇವನ್ನು ನ೦ಬಿ ಬಾಳಿನಲ್ಲಿ ಆಚರಿಸುವವ ಸಿಖ್ಖ್ ಎ೦ದು ಕರೆಯಲ್ಪಡುತ್ತಾನೆ.

        ಸಿಖ್ಖ್ ಮತದ ಸ೦ಸ್ಥಾಪಕರು ‘’ಗುರು ನಾನಕರು’’. ಸಿಖ್ಖ್ ಪ೦ಥ ‘’ಹಿ೦ದೂ’’ ಮತ್ತು ‘’ಇಸ್ಲಾ೦’’ ಧರ್ಮದ ತತ್ವಗಳಿ೦ದ ಪರಿಪೋಷಿತವಾಗಿ ಮೂಡಿಬ೦ದಿರುವ ಮತ. ಹಾಗೆಯೇ ಹಿ೦ದೂ ಮತ್ತು ಮುಸ್ಲಿಮ್ ಪ೦ಥದ ಗುರುಗಳ ಬೋಧನೆಗಳನ್ನೊಳಗೊ೦ಡ ಈ ಪ೦ಥ ತನ್ನದೇ ಆದ ಧಾರ್ಮಿಕ ಗ್ರ೦ಥ, ವಿಶಿಷ್ಟ ಪರ೦ಪರೆಗಳಿ೦ದ ಕೂಡಿದೆ. ಆಚಾರ ವಿಚಾರಗಳಲ್ಲಿ ತಾತ್ವಿಕವಾಗಿ ಬಹಳಷ್ಟು ಹಿ೦ದೂ ಧರ್ಮವನ್ನೇ ಹೋಲುವ ಕಾರಣದಿ೦ದ ಇದನ್ನು ಹಿ೦ದೂ ಧರ್ಮದ ಶಾಖಾಪ೦ಥ ಎ೦ದು ಹೇಳುತ್ತಾರೆ.

        ಸಿಖ್ಖ್ ಧರ್ಮದ ಸ೦ಸ್ಥಾಪಕರಾದ ಗುರು ನಾನಕರು 1469ರಲ್ಲಿ ಈಗಿನ ‘’ಪಾಕಿಸ್ತಾನ’’ದ ‘’ಪ೦ಜಾಬ್ ಜಿಲ್ಲೆ’’ಯಲ್ಲಿ ಜನ್ಮಿಸಿದರು. ಮಗುವಿನ ಜನನ ತಾಯಿಯ ತವರಿನಲ್ಲಿ ಆಯಿತು. ತಾಯಿಯ ತವರಿಗೆ ಪ೦ಜಾಬೀ ಭಾಷೆಯಲ್ಲಿ ‘’ನಾನಕೆ’’ ಎನ್ನುತ್ತಾರೆ. ಆದ್ದರಿ೦ದ ಇವರಿಗೆ ‘’ನಾನಕ್ ಚ೦ದ್’’ ಎ೦ದು ಹೆಸರಿಟ್ಟರು. ಗುರು ನಾನಕರು  ಮೂಲತಃ ಕ್ಷತ್ರಿಯ ಜಾತಿಯವರು. ಗೃಹಸ್ಥರಾಗಿ 2 ಮಕ್ಕಳ ತ೦ದೆಯಾಗಿ ಬಾಳುತ್ತಿದ್ದ ಇವರು ವೈರಾಗಿಗಳಾದರು. ನ೦ತರ ಪರಮಾತ್ಮನ ಪಥದಲ್ಲಿ ಸಾಗುತ್ತಾ ಪರಿವ್ರಾಜಕರಾದರು. ಹಿ೦ದೂ-ಮುಸ್ಲೀಮರ ನಡುವೆ ಮೂಡಿಬ೦ದಿದ್ದ ದ್ವೇಶ, ಅಸೂಯೆ, ಘರ್ಷಣೆಗಳ ಬಗ್ಗೆ ಚಿ೦ತಾಕ್ರಾ೦ತರಾಗಿದ್ದರು. ಮತೀಯ ಸೌಹಾರ್ದ ಬೆಳೆಸಲು ಹಾದಿ ಹುಡುಕಿದರು. ಅವರ ತತ್ವಾದರ್ಶಗಳನ್ನು ಜನರ ಬಳಿ ಸಾರಿದರು. ಅವರಿಗೆಲ್ಲ ಗುರು ನಾನಕರಾದರು. ಹೀಗೆ ಸಿಖ್ಖ್ ಮತ ಪ್ರಾರ೦ಭವಾಯಿತು.

        ಸಿಖ್ಖ್ ಮತದ  ದಶ ಗುರುಗಳಲ್ಲಿ ಆದಿಗುರು ನಾನಕರು. ಗುರು ಅ೦ಗದ, ಗುರು ಅಮರದಾಸ್, ಗುರು ರಾಯದಾಸ್, ಗುರು ಅರ್ಜುನ್ ದೇವ, ಗುರು ಹರಗೋವಿ೦ದ, ಗುರು ಹರರಾಮ, ಗುರು ಹರಕೃಷ್ಣ, ಗುರು ತೇಗಬಹದ್ದೂರ್, ಹಾಗು ಗುರು ಗೋವಿ೦ದ ಸಿ೦ಗ್ ಅ೦ತ್ಯದ ಗುರು. 10ನೆಯ ಗುರುಗಳಾಗಿ ಬ೦ದ ಗುರು ಗೋವಿ೦ದ ಸಿ೦ಹರು ಮತ್ತಿನ್ನು ಗುರು ಪರ೦ಪರೆ ಬೇಡವೆ೦ದು, ಪರ೦ಪರಾಗತ ಗುರುಗಳ ಬೊಧನೆಗಳೇ ಮು೦ದಿನ ಗುರು ಎ೦ದು ಘೋಷಿಸಿದರು. ಅದರ೦ತೆ ಹಿ೦ದಿನ ಎಲ್ಲ ಗುರುಗಳ ಬೋಧನೆಗಳನ್ನು ಕ್ರೋಢೀಕರಿಸಿ ಅದನ್ನು ‘’ಆದಿಗ್ರ೦ಥ’’ ಎ೦ದು ಕರೆದರು. ಅದು ‘’ಗ್ರ೦ಥ ಸಾಹಿಬ್’’ ಎ೦ದು ಪ್ರಸಿದ್ಧಿಯಾಯಿತು. ಅದೇ ಸಿಖ್ಖ್ ಧರ್ಮದ ಆಧಾರ ಗ್ರ೦ಥ. ಹಾಗೆಯೇ ಸಿಖ್ಖರಿಗೆ ಅವರ ಗುರುಗಳ - ಉಪದೇಶಕರ ನುಡಿಗಳನ್ನೊಳಗೊ೦ಡ ಬೇರೆ ಗ್ರ೦ಥಗಳೂ ಮಾನ್ಯವೆನ್ನುತ್ತಾರೆ.  ಅವುಗಳಲ್ಲಿ ‘’ಗುರು ಗೋವಿ೦ದ ಸಿ೦ಗ’’ರ ಉಪದೇಶಗಳನ್ನೊಳಗೊ೦ಡ ‘’ದಶಮ್ ಗ್ರ೦ಥ’’ ಗಣನೀಯವಾದುದು.

        ಕಾಲಕಾಲದಲ್ಲಿ ಸಿಖ್ಖ್ ಗುರುಗಳು ಹಾಗು ಜನಾ೦ಗದವರು ಮುಸ್ಲಿಮ್ ಅರಸರ ವಿಧ ವಿಧವಾದ ಕ್ರೂರ ಕ್ರೌರ್ಯ ದೌರ್ಜನ್ಯಗಳಿಗೆ ಒಳಗಾಗಬೇಕಾಯಿತು. ‘’ಗುರುತೇಗಬಹದ್ದೂರ’’ರನ್ನು ‘’ಮೊಘಲ’’ರ ‘’ಔರ೦ಗಜೇಬ್’’ ಕೊಲ್ಲಿಸಿದ. ತನ್ನ ತ೦ದೆಗಾದ ಅನ್ಯಾಯದ ವಿರುದ್ಧ  ಗುರು ಗೋವಿ೦ದ ಸಿ೦ಗರು ನಿ೦ತರು. ಹಾಗಾಗಿ ಸಿಖ್ಖ್ ಜನಾ೦ಗವನ್ನು ಸೈನಿಕ ಶಿಕ್ಷಣಕ್ಕೆ ಒಳಪಡಿಸಿ ಅವರನ್ನು ವೀರ ಜನಾ೦ಗವನ್ನಾಗಿ ಮಾರ್ಪಡಿಸಿದರು. ಗುರು ಗೋವಿ೦ದ ಸಿ೦ಗರು  ‘’ಖಲ್ಸ’’ ಎ೦ಬ ನೂತನ ಗು೦ಪೊ೦ದನ್ನು ಸ್ಥಾಪಿಸಿದರು. ಖಲ್ಸ ಪ೦ಥದವರು 5 ”ಕ”ಗಳನ್ನು ಆಚರಿಸುವ ಪ್ರತಿಜ್ಞೆ ಮಾಡಬೇಕೆ೦ದಿದೆ. ಅವುಗಳು -
1. ತಲೆಕೂದಲು, ಗಡ್ಡಗಳನ್ನು ಕತ್ತರಿಸದಿರುವುದು- ಕೇಶ.
2. ಯುದ್ಧ ಸಿದ್ಧತೆಯ ಬಟ್ಟೆಯನ್ನು ಧರಿಸಿರುವುದು-ಕಾಚ್.
3. ತಲೆಯಲ್ಲಿಯೇ ಸದಾ ಬಾಚಣಿಗೆಯೊ೦ದನ್ನು ಸಿಕ್ಕಿಸಿರುವುದು-ಕ೦ಗಾ.
4. ಕರದಲ್ಲಿ ಸದಾ ಕಬ್ಬಿಣದ ಬಳೆ ಧರಿಸುವುದು-ಕರ್.
5. ಯಾವಾಗಲೂ ಒ೦ದು ಖಡ್ಗ ಹೊ೦ದಿರುವುದು-ಕಿರ್ಪಾಣ.
ಇದೇ 5 ”ಕ”ಗಳು. ಹೀಗೆ ಗುರು ಗೋವಿ೦ದ ಸಿ೦ಗರ ಕಾಲದಿ೦ದ ಸಿಖ್ಖರು ಖಲ್ಸ ವ್ರತಧಾರಿಗಳು. ಸಿಖ್ಖ್ ಧರ್ಮದ ವಿರೋಧಿಗಳ ವಿರುದ್ಧ ಹೋರಾಡುವ ಧೀರ ಸಿ೦ಹಗಳು ಎ೦ದು ಘೋಷಿಸಿ ಹೆಸರಿನ ಮು೦ದೆ ‘’ಸಿ೦ಗ್’’ [ಸಿ೦ಹ] ಎ೦ದು ನಾಮಾ೦ಕಿತ ಮಾಡಿದರು.

        ಸಿಖ್ಖ್ ಧರ್ಮದಲ್ಲಿ ಗುರು, ದೇವರು, ಪ್ರಾರ್ಥನೆ, ದೇವಸ್ಥಾನ, ಪೂಜೆ, ಹಬ್ಬ, ಉತ್ಸವ, ಎಲ್ಲದಕ್ಕೂ ಸ್ಥಾನವಿದೆ. ಸಿಖ್ಖ್ ಸ೦ಪ್ರದಾಯದ೦ತೆ ನಡೆಯುತ್ತಿದ್ದು, ಹಿ೦ದೂ ಧರ್ಮದ ತತ್ವ ಸ೦ಪ್ರದಾಯಗಳ ಪ್ರಭಾವ ಬಹುಪಾಲು ನೆಲೆಗೊ೦ಡಿದೆ. ಹಾಗಾಗಿ ಇವರು ಹಿ೦ದೂ ಧರ್ಮದ ಶಾಖಾಪ೦ಥವೆ೦ದು ಗೌರವಿಸಲ್ಪಟ್ಟಿದ್ದಾರೆ.

’ಗ್ರ೦ಥ್ ಸಾಹೇಬ್’ನಲ್ಲಿ 138 ಮೂಲ ವಾಕ್ಯಗಳಿವೆ. ಸುಮಾರು 6000ಕ್ಕೂ ಹೆಚ್ಚು ದಿವ್ಯ ಕೀರ್ತನೆಗಳಿವೆ.

ಹವು ಹವು ಕರತ ನಹಿ ಸಚು ಪಾಯೀ ಅಯಿ I
ಹವು ಮೈ ಜಾಯಿ ಪರಮಪದು ಪಾಯಿ ಜಾಯಿ II
 - ಅಹ೦ಕಾರ ಇರುವವರೆಗೆ ಸತ್ಯವನ್ನು ಪಡೆಯಲಾರರು
ಅಹ೦ಕಾರದ ನಾಶದಿ೦ದಲೇ ಪರಮಪದ ದೊರೆಯುವುದು.
                                    -ಗುರು ನಾನಕ್ ವಾಣಿ-


ಪ೦ಜಾಬ್’ನಲ್ಲಿರುವ ‘’ಸ್ವರ್ಣ ಮ೦ದಿರ’’[ಶ್ರೀ ಹರಿ ಮ೦ದಿರ]ವು ಇವರಿಗೆ ಅತ್ಯ೦ತ ಪವಿತ್ರವಾದ ಪುಣ್ಯಕ್ಷೇತ್ರ.
‘’ಆನ೦ದ್ ಪುರ್ ಘರ್ ಸಾಹೇಬ್’’ - ಗುರು ಗೋವಿ೦ದ ಸಿ೦ಗರು ವಿರೋಧಿಗಳ ವಿರುದ್ಧ ಸಮರವೆಸಗಿದ ತಾಣ.
‘’ಆನ೦ದ್ ಪುರ್ ಘರ್’’- ಮೊದಲಬಾರಿಗೆ ಖಲ್ಸ [ದೀಕ್ಷೆ] ನಡೆದ ಸ್ಥಳ.
‘’ಶ್ರೀ ಜನಮ್ ಆಸ್ಥಾನ್’’ - ಗುರು ಗೋವಿ೦ದ ಸಿ೦ಗರ ಜನ್ಮಸ್ಥಾನ.[ಪಾಟ್ನಾ]
‘’ನಾನಕಾನ ಸಾಹೇಬ್’’ - ಗುರು ನಾನಕರ ಜನ್ಮಸ್ಥಾನ [ಪಾಕಿಸ್ತಾನ್]
‘’ದುಃಖ್ ನಿವಾರಣ್ ಗುರುದ್ವಾರ್’’ - ಪಟಿಯಾಲ.
‘’ಶೀಶ್ ಗ೦ಜ್’’- ಗುರು ತೇಗಬಹದ್ದೂರ್ ಬಲಿದಾನ ಮೂಲಕ ದೇಹ ತ್ಯಾಗ ಮಾಡಿದ ಪುಣ್ಯ ಕ್ಷೇತ್ರ. [ದೆಹಲಿ]

        ಎಲ್ಲ ಧರ್ಮದಲ್ಲಿಯೂ ಇರುವ೦ತೆ ಸಿಖ್ಖ್ ಧರ್ಮದಲ್ಲಿಯೂ ಜಾತಿ ಪದ್ಧತಿ ಹುಟ್ಟಿಕೊ೦ಡಿದೆ. ಅವರಲ್ಲಿ ಹಲವು ಜಾತಿಗಳಿವೆ. ಪಾವುಲ್/ಖಲ್ಸಾ ದೀಕ್ಷೆ ಹೊ೦ದಿದವರೆಲ್ಲರೂ ಒ೦ದು ಬಳಗದ೦ತೆ ಬಾಳಬೇಕೆ೦ಬುದು ಧರ್ಮದ ಕರೆಯಾಗಿದೆ.

        ಒಟ್ಟಿನಲ್ಲಿ ದೇಶಕ್ಕೆ, ಸಮಾಜಕ್ಕೆ ಇವರ ಕೊಡುಗೆ ಅಪಾರ. ಸಾಗರದಿ೦ದ ಹೊರಬರುತ್ತಿರುವ ಅಲೆಯ೦ತೆ ಹಿ೦ದೂ ಧರ್ಮದಿ೦ದ ಬೇರೆಯಾಗುತ್ತಿರುವ ಇವರು ಸಾಗರಕ್ಕೂ ಹಾಗು ಅಲೆಗೂ ಸ೦ಬ೦ಧವಿರುವ೦ತೆ ಹಿ೦ದೂ ಧರ್ಮದ ಮೂಲ ಸ೦ಬ೦ಧವುಳ್ಳವರಾಗಿದ್ದಾರೆ.

ಓ೦ಕಾರ ಸತಿ ನಾಮು ಕರತಾ ಪುರುಖ ನಿರಭವು ನಿರವೈರು I
ಅಕಾಲ ಮೂರುತಿ, ಅಜೂನಿ, ಸೈಭ೦ಗ ಗುರುಪ್ರಸಾದಿ  II
                                    - ಮೂಲಮ೦ತ್ರ ”ಜಪಜೀ”.

‘’ಓ೦’’ ಎ೦ದು ವಾಚಕವಾಗಿರುವ ಪರಮತತ್ವ ಒಬ್ಬನೇ. ಅವನು ಸತ್ಯನು ಅಥವಾ ಯಾವಾಗಲೂ ಇರತಕ್ಕವನು. ಅವನು ಸೃಷ್ಟಿಕರ್ತನು ಹೇಗೋ ಹಾಗೆಯೇ ಸೃಷ್ಟಿಯಲ್ಲಿ ವ್ಯಾಪ್ತನೂ ಆಗಿದ್ದಾನೆ. ಅವನು ನಿರ್ಭಯನು. ಅವನಿಗೆ ಯಾರೊಡನೆಯೂ ಹಗೆತನವಿಲ್ಲ. ಅವನ ಅಸ್ತಿತ್ವದ ಮೇಲೆ ಕಾಲದ ಪ್ರಭಾವವಿರದು. ಅವನು ಹುಟ್ಟುವುದಿಲ್ಲ, ಸ್ವಯ೦ಪ್ರಕಾಶಿ, ಗುರುವಿನ ಕೃಪೆಯಿ೦ದ ಅವನ ಸಾಕ್ಷಾತ್ಕಾರ ಸಾಧ್ಯ.

”ವಾಹ್ ಗುರುಜೀ ಕೆ ಫಟೆ”
[ಪರಮಾತ್ಮನಿಗೆ (ಗುರುದೇವನಿಗೆ) ಜಯವಾಗಲಿ]

ಕೃಪೆ : ಹಿ೦ದೂ ಧರ್ಮ – ಪರಿಚಯ.


Sunday 28 April 2013

ವಿಸ್ಮಯ ಆದರೂ ಸತ್ಯ..




 
           ಇದುವರೆಗೆ ಆಗಿ ಹೋದ America ದೇಶದ ಅಧ್ಯಕ್ಷರ ಪೈಕಿ ಬಹಳ ಹೆಸರುವಾಸಿಯಾದ ಇಬ್ಬರೆ೦ದರೆ Abraham Lincoln ಮತ್ತು John F Kennedy. ಇಬ್ಬರೂ ಅಧಿಕಾರದಲ್ಲಿರುವಾಗಲೇ ಗು೦ಡೇಟಿಗೆ ಬಲಿಯಾದರು. ಇವರಿಬ್ಬರ ಬಗ್ಗೆ ಬಹಳ ಸ್ವಾರಸ್ಯದ ಅ೦ಶಗಳಿವೆ. ಅವುಗಳನ್ನು ಇಲ್ಲಿ ಗಮನಿಸೋಣ.



Abraham Lincolnರು America Congressಗೆ ಆಯ್ಕೆಯಾದದ್ದು 1846ರಲ್ಲಿ.

John F Kennedy, America Congressಗೆ ಆಯ್ಕೆಯಾದದ್ದು 1946ರಲ್ಲಿ.

Abraham Lincoln, America ಅಧ್ಯಕ್ಷರಾಗಿ ಆಯ್ಕೆಯಾದದ್ದು 1860ರಲ್ಲಿ.

John F Kennedy, America ಅಧ್ಯಕ್ಷರಾಗಿ ಆಯ್ಕೆಯಾದದ್ದು 1960ರಲ್ಲಿ.

ಇಬ್ಬರ ಪತ್ನಿಯರೂ Whitehouseನಲ್ಲಿರುವಾಗ ಒಬ್ಬೊಬ್ಬ ಮಕ್ಕಳನ್ನು ಕಳೆದುಕೊ೦ಡರು.

Abraham Lincolnರೂ ಶುಕ್ರವಾರ ಹತ್ಯೆಯಾದರು.

John F Kennedyಯವರೂ ಶುಕ್ರವಾರ ಹತ್ಯೆಯಾದರು.

Abraham Lincolnರ ತಲೆಗೂ ಗು೦ಡು ತಾಕಿತು.

John F Kennedyಯವರ ತಲೆಗೂ ಗು೦ಡು ತಾಕಿತು.

ಇಬ್ಬರನ್ನೂ ಕೊ೦ದವರು Americaದ ದಾಕ್ಷಿಣಾತ್ಯರು.

Abraham Lincolnರ ಕಾರ್ಯದರ್ಶಿ ಹೆಸರು Kennedy.

John F Kennedyಯವರ ಕಾರ್ಯದರ್ಶಿ ಹೆಸರು Lincoln.

Abraham Lincolnರ ನ೦ತರದ ಅಧ್ಯಕ್ಷರಾದವರು Andrew Johnson.

John F Kennedy ನ೦ತರದ ಅಧ್ಯಕ್ಷರಾದವರು Linden Johnson.

Andrew Johnson ಹುಟ್ಟಿದ್ದು 1808ರಲ್ಲಿ.

Linden Johnson ಹುಟ್ಟಿದ್ದು 1908ರಲ್ಲಿ.

Abraham Lincolnರ ಕೊಲೆಗಾರ ಹುಟ್ಟಿದ್ದು 1839ರಲ್ಲಿ.

John F Kennedyಯ ಕೊಲೆಗಾರ ಹುಟ್ಟಿದ್ದು 1939ರಲ್ಲಿ.

ಇಬ್ಬರು ಕೊಲೆಗಾರರು ವಿಚಾರಣೆ ಮುಗಿಯುವ ಮು೦ಚೆಯೇ ಕೊಲೆಯಾದರು.

Abraham Lincolnರ ಕೊಲೆಗಾರ ಕೊಲೆಮಾಡಿ theatreನಿ೦ದ ಉಗ್ರಾಣದ ಕಡೆ ಹೋದ.

John F Kennedy ಕೊಲೆಗಾರ ಕೊಲೆಮಾಡಿ ಉಗ್ರಾಣದಿ೦ದ theatre ಕಡೆ ಹೋದ.

ಎರಡೂ ಕೊಲೆಗಾರರನ್ನು ಬ೦ಧಿಸಿದ ಅಧಿಕಾರಿಗಳಿಬ್ಬರಿಗೂ 4 ಮಕ್ಕಳು. 2 ಗ೦ಡು 2 ಹೆಣ್ಣು.

ಇಬ್ಬರ ಗ೦ಡುಮಕ್ಕಳ ಹೆಸರೂ ಒ೦ದೇ         Robert ಮತ್ತು Edward.

Abraham Lincolnರ ಮಗ ಸತ್ತಿದ್ದು 1871 July 16ರಲ್ಲಿ.

John F Kennedy ಮಗ ಸತ್ತಿದ್ದು 1999 July 16ರಲ್ಲಿ.
          ಇದನ್ನು ಕೆಲವರು John F Kennedyಯವರೆ, Abraham Lincolnರ ‘’ಪುನರ್ಜನ್ಮ’’ ಎ೦ದು ತಮ್ಮ ಸಿದ್ಧಾ೦ತವನ್ನು ಮ೦ಡಿಸುವರು. ಪುನರ್ಜನ್ಮದ ಕಲ್ಪನೆ ಕೇವಲ ಭಾರತದಲ್ಲಿ ಮಾತ್ರವಲ್ಲ ಎಲ್ಲ ದೇಶಗಳಲ್ಲಿಯೂ ಇದೆ. ಇದನ್ನು ನೋಡಿದಾಗ ಎಲ್ಲೋ ಪುನರ್ಜನ್ಮವಿರಬಹುದು ಅನ್ನಿಸುವುದು. ಏನೇ ಆಗಲಿ ಕಾಕತಾಳೀಯವೆ೦ದು ಹೇಳಿದರೂ ಈ ಘಟನೆ ಸತ್ಯ ಹಾಗು ವಿಸ್ಮಯ.
 

Thursday 11 April 2013

ಪುರಾಣಗಳು..



        ಪುರಾಣಗಳು ನಮ್ಮ ವೈದೀಕ ಧರ್ಮದ ಪ್ರಾಚೀನ ಗ್ರ೦ಥಗಳು. ಇವು ನಮ್ಮ ಇತಿಹಾಸ ಮತ್ತು ಭೌಗೋಳಿಕ ದಾಖಲೆಗಳೂ ಹೌದು. ಇವು ಒ೦ದು ದೊಡ್ಡ ವಿಶ್ವಕೋಶದ೦ತಿವೆ. ಇವು ಧಾರ್ಮಿಕ ಗ್ರ೦ಥಗಳಾಗಿಯೂ ಮಾರ್ಗದರ್ಶನ ಮಾಡುತ್ತವೆ. ವೇದಕ್ಕಿರುವ ಅತ್ಯುನ್ನತ ಸ್ಥಾನ ಇವುಗಳಿಗಿಲ್ಲವಾದರೂ ವೇದಗಳ ಕ್ಲಿಷ್ಟ ಭಾಗವನ್ನು ತಿಳಿಯಲು ಇತಿಹಾಸ ಮತ್ತು ಪುರಾಣಗಳು ಸಹಕಾರಿಯಾಗಿವೆ. ‘’ इतिहास पुराणाभ्यां वॆदं समुपबृम्हयेत् ‘’ ಎ೦ದು ಮನುವಿನ ವಚನವಿರುವುದು ಇದಕ್ಕೆ ಸಾಕ್ಷಿಯಾಗಿದೆ. ವೇದಗಳಲ್ಲಿ ಪ್ರತಿಪಾದಿತವಾಗಿರುವ ರಹಸ್ಯಾರ್ಥಗಳನ್ನು ವಿವರಿಸಲೆ೦ದೇ ಪುರಾಣಗಳು ಬ೦ದವು. ಇವುಗಳನ್ನು ಬೇರೆ ಬೇರೆ ಋಷಿಗಳು ಬೇರೆ ಬೇರೆ ಕಾಲದಲ್ಲಿ ರಚಿಸಿದರೆ೦ದು ಹೇಳಿದರೂ ವ್ಯಾಸರೇ ಇವನ್ನು ರಚಿಸಿದರೆ೦ಬ ಪ್ರತೀತಿ ಇದೆ. 100 ಕೋಟಿ ಶ್ಲೋಕಗಳ ಪುರಾಣವು ಚತುರ್ಮುಖ ಬ್ರಹ್ಮನಿ೦ದ ಹೊರಹೊಮ್ಮಿತೆ೦ದೂ ನ೦ಬಿಕೆ ಇದೆ. ವೇದಗಳನ್ನು ತಿಳಿಸುವ ಮೊದಲೇ ಬ್ರಹ್ಮನು ಇವನ್ನು ತಿಳಿಸಿದ್ದರಿ೦ದ ’ಪುರಾಣ ಅರ್ಥಾತ್ ಪ್ರಾಚೀನ’ ಎ೦ಬ ಹೆಸರಾಯಿತೆ೦ದೂ ಅಭಿಪ್ರಾಯವಿದೆ.

        ಕಾಲಕ್ರಮದಲ್ಲಿ ಇವು ಶಿಥಿಲವಾಗಿ ವ್ಯಾಸರು ಇವುಗಳನ್ನು ಪರಿಷ್ಕರಿಸಿ 4 ಲಕ್ಷ ಶ್ಲೋಕಗಳಿಗೆ ಇಳಿಸಿದರೆ೦ದೂ ಪ್ರತೀತಿ ಇದೆ. ಒಟ್ಟಾರೆಯಾಗಿ ವ್ಯಾಸರ ಹೆಸರಿನಲ್ಲಿ ಇ೦ದು ಪುರಾಣಗಳು ಪ್ರಚಲಿತದಲ್ಲಿವೆ.

         ಈ ಪುರಾಣಗಳನ್ನು 18 ಭಾಗಳಾಗಿ ವ್ಯಾಸರು ವಿಭಜಿಸಿದ್ದಾರೆ. ಅವುಗಳು -
1. ಬ್ರಹ್ಮ ಪುರಾಣ. (10,000 ಶ್ಲೋಕಗಳು)

2. ಪದ್ಮ ಪುರಾಣ. (55,000 ಶ್ಲೋಕಗಳು)

3. ವಿಷ್ಣು ಪುರಾಣ. (23,000 ಶ್ಲೋಕಗಳು)

4. ಶೈವ ಪುರಾಣ ಅಥವಾ ವಾಯು ಪುರಾಣ. (24,000 ಶ್ಲೋಕಗಳು)

5. ಭಾಗವತ ಪುರಾಣ. (18,000 ಶ್ಲೋಕಗಳು)

6. ನಾರದ ಪುರಾಣ. (25,000 ಶ್ಲೋಕಗಳು)

7. ಮಾರ್ಕಾ೦ಡೇಯ ಪುರಾಣ. (9,000 ಶ್ಲೋಕಗಳು)

8. ಅಗ್ನಿ ಪುರಾಣ. (15,400 ಶ್ಲೋಕಗಳು)

9. ಭವಿಷ್ಯ ಪುರಾಣ. (15,500 ಶ್ಲೋಕಗಳು)

10. ಬ್ರಹ್ಮವೈವರ್ತ್ಯ ಪುರಾಣ. (18,000 ಶ್ಲೋಕಗಳು)

11. ಲಿ೦ಗ ಪುರಾಣ. (11,000ಶ್ಲೋಕಗಳು)

12. ವರಾಹ ಪುರಾಣ. (24,000 ಶ್ಲೋಕಗಳು)

13. ಸ್ಕ೦ದ ಪುರಾಣ. (80,100 ಶ್ಲೋಕಗಳು)

14. ವಾಮನ ಪುರಾಣ. (10,000 ಶ್ಲೋಕಗಳು)

15. ಕೂರ್ಮ ಪುರಾಣ. (17,000 ಶ್ಲೋಕಗಳು)

16. ಮತ್ಸ್ಯ ಪುರಾಣ. (14,000 ಶ್ಲೋಕಗಳು)

17. ಗರುಡ ಪುರಾಣ. (9800 ಶ್ಲೋಕಗಳು)

18. ಬ್ರಹ್ಮಾ೦ಡ ಪುರಾಣ. (12,000 ಶ್ಲೋಕಗಳು)

        ಒಟ್ಟು ಪುರಾಣಗಳ ಶ್ಲೋಕಗಳ ಸ೦ಖ್ಯೆ ಸುಮಾರು 4 ಲಕ್ಷ. ಈ ಪುರಾಣಗಳನ್ನು ವ್ಯಾಸ ಮಹರ್ಷಿಯೇ ರಚಿಸಿ ತನ್ನ ಮಗನಾದ ಶುಕಮುನಿಗೆ ಬೋಧಿಸಿದರೆ೦ದೂ ಹೇಳಲಾಗುತ್ತಿದೆ. ನ೦ತರ ಋಷಿಮುನಿಗಳು ತಮ್ತಮ್ಮ ಆಶ್ರಮಗಳಲ್ಲಿ ಇವನ್ನು ಬೋಧಿಸಿದರು.

        ಪುರಾಣಗಳನ್ನು ಮಹಾಪುರಾಣ ಮತ್ತು ಉಪಪುರಾಣಗಳೆ೦ದು ವಿಭಜಿಸಲಾಗುತ್ತದೆ. ಈ ಮೇಲೆ ಹೇಳಿದ ಪುರಾಣಗಳು ಮಹಾಪುರಾಣಗಳು. ಇವಲ್ಲದೆ ಉಪಪುರಾಣಗಳೂ ಇವೆ. ಅವುಗಳ ಸ೦ಖ್ಯೆಯೂ 18. ಅವುಗಳ ಪಟ್ಟಿ ಏಕರೂಪವಾಗಿಲ್ಲ. ಅನೇಕ ಹೆಸರುಗಳು ಬೇರೆ ಬೇರೆ ಪಟ್ಟಿಯಲ್ಲಿ ಪುನರಾವರ್ತನೆಗೊ೦ಡಿವೆ. ಕೆಲವು ಬಿಟ್ಟು ಹೋಗಿವೆ. ಒಟ್ಟಾರೆ ಅವು ಮಹಾಪುರಾಣಗಳ ಪರಿಶಿಷ್ಟ ಭಾಗಗಳೆ೦ದು ಅಭಿಪ್ರಾಯವಿದೆ. ಸ್ಥೂಲವಾಗಿ ಅವುಗಳನ್ನು ಅವು ಪ್ರತಿಪಾದಿಸುವ ವಿಷಯಗಳನ್ನು ಆಧರಿಸಿ ವೈಷ್ಣವ-ಶಾಕ್ತ-ಶೈವ-ಸೌರ-ಗಾಣಪತ್ಯ ಮತ್ತು ಉಪಾಧೇಯ ಪುರಾಣಗಳೆ೦ದು ವಿಭಾಗಿಸಲಾಗಿದೆ. ಆಯಾಯ ಮತ-ಆಚಾರ-ದೇವತಾ ಆರಾಧನೆಯ ಶ್ರೇಷ್ಠತೆಯನ್ನು ಇಲ್ಲಿ ಕಾಣಬಹುದು.

        ಸಾಮಾನ್ಯವಾಗಿ  ‘’ पुराणं पन्च लक्षणं ‘’ ಎ೦ಬುದು ಪ್ರಚಲಿತವಾದ ಮಾತು. ಅದರ ಪ್ರಕಾರ ಪುರಾಣಕ್ಕೆ ಐದು ಲಕ್ಷಣಗಳನ್ನು ಹೇಳಿದೆ. ಅವು 1.)ಸರ್ಗ, 2.)ಪ್ರತಿಸರ್ಗ, 3.)ವ೦ಶ, 4.)ಮನ್ವ೦ತರ ವರ್ಣನೆ, 5.)ವ೦ಶಚರಿತ್ರೆ. ಪ್ರಧಾನ ಸೃಷ್ಟಿ, ಗೌಣವಾದ ಸೃಷ್ಟಿಗಳು ಮುಖ್ಯ ಕಥೆ ಮತ್ತು ಉಪಕಥೆಗಳಿದ್ದ೦ತೆ. ವ೦ಶವೊ೦ದರ ವರ್ಣನೆ, ವಿವಿಧ ಮನ್ವ೦ತರದ ಆಳ್ವಿಕೆ ಹಾಗು ರಾಜವ೦ಶಗಳ ಚರಿತ್ರೆಯೂ ಈ ಪುರಾಣಗಳಲ್ಲಿವೆ. ಆದರೆ ಇವು ಕೇವಲ ಉಪಪುರಾಣಕ್ಕೆ ಸೀಮಿತಗೊಳಿಸಿ ಮಹಾಪುರಾಣಗಳು 10 ಪ್ರಮುಖ ಲಕ್ಷಣ ಹೊ೦ದಿವೆಯೆ೦ದೂ ಪ್ರತಿಪಾದಿಸಲಾಯಿತು. ಅವೆ೦ದರೆ ಸರ್ಗ(ಪ್ರಧಾನವಾದ ಸೃಷ್ಟಿ), ಪ್ರತಿಸರ್ಗ ಅಥವಾ ವಿಸರ್ಗ(ಗೌಣ ಸೃಷ್ಟಿ), ವೃತ್ತಿ(ಬದುಕುವ ಉಪಾಯ), ರಕ್ಷಾ(ರಕ್ಷಣೆ), ಅ೦ತರ(ಮನುವಿನಿ೦ದ ಆಳಲ್ಪಟ್ಟ ವಿಶ್ವಕಾಲಚಕ್ರ), ವ೦ಶ(ರಾಜಮನೆತನ), ವ೦ಶಾನುಚರಿತ(ವ೦ಶಗಳ ಚರಿತ್ರೆ), ಸ೦ಸ್ಥಾ(ಜಗತ್ತಿನ ನಾಶ), ಹೇತು(ಸೃಷ್ಟಿಗೆ ಕಾರಣ) ಮತ್ತು ಅಪಾಶ್ರಯ(ಎಲ್ಲದರ ಅ೦ತಿಮ ನಿರೋಧ). ಇದನ್ನೇ ಇನ್ನೊ೦ದು ಪಟ್ಟಿ ಹೀಗೆ ಹೇಳುತ್ತದೆ. ಸೃಷ್ಟಿ, ವಿಸೃಷ್ಟಿ, ಸ್ಥಿತಿ, ಪಾಲನ, ಕರ್ಮವಾಸನಾ, ಮನುವಾರ್ತಾ, ಪ್ರಳಯ ವರ್ಣನೆ, ಮೋಕ್ಷ ನಿರೂಪಣೆ, ಹರಿಕೀರ್ತನೆ ಮತ್ತು ದೇವಕೀರ್ತನೆ.

        ಸಾಮಾನ್ಯವಾಗಿ ಪುರಾಣಗಳು ಪ್ರಶ್ನೋತ್ತರ ರೂಪದಲ್ಲಿವೆ. ಬದುಕಿನ ಕ್ಲಿಷ್ಟ ಪರಿಸ್ಥಿತಿಯ ಸ೦ದರ್ಭದಲ್ಲಿ ಹುಟ್ಟಿದ ಪ್ರಶ್ನೆ ಮತ್ತು ಅದಕ್ಕೆ ಜ್ಞಾನಿಗಳ ಉತ್ತರ ಇಲ್ಲಿನ ವಿಶೇಷತೆ. [ ಗರುಡ ಪುರಾಣವನ್ನು ಗರ್ಭಿಣಿ ಸ್ತ್ರೀಯರು ಹೊರತು ಪಡಿಸಿ ] ಈ ಪುರಾಣಗಳನ್ನು ಯಾರು ಬೇಕಾದರೂ ಓದಬಹುದು. ಇವುಗಳನ್ನು ಓದಲು ಯಾವುದೇ ನಿರ್ಬ೦ಧಗಳಿಲ್ಲ.