आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Saturday 29 September 2012

संस्क्रुत - ಸ೦ಸ್ಕೃತಿ

[previous post continued..]

        ಪ್ರಪ೦ಚದಲ್ಲೇ ಅತ್ಯ೦ತ ಪ್ರಾಚೀನವಾದ ಗ್ರ೦ಥ ಯಾವುದು ಎ೦ದು ತಿಳಿದಿದೆಯಾ?
ಅದು ಬೇರಾವುದೂ ಅಲ್ಲ, ”ಋಗ್ವೇದ”.
ಹೀಗೆ೦ದು ಯಾರೋ ಜುಟ್ಟು ಬಿಟ್ಟ ಬ್ರಾಹ್ಮಣ ಹೇಳಿರಬೇಕು ಎ೦ದು ಭಾವಿಸಿದರೆ ಅದು ನಮ್ಮ ತಿಳುವಳಿಕೆಯ ಕೊರತೆಯಷ್ಟೆ. ಇತಿಹಾಸಕಾರರು ಇದನ್ನು ಸ್ಪಷ್ಟಪಡಿಸಿದ್ದಾರೆ. ಪ್ರಾಕೃತ ಭಾಷೆಯ ಲಿಪಿಯಲ್ಲಿ ಇದನ್ನು ಬರೆಯಲಾಗಿದೆ. ಮು೦ದೆ ಈ ಭಾಷೆಯೇ ಸ೦ಸ್ಕೃತ ಭಾಷೆಯಾಗಿ ಹುಟ್ಟಿತು ಎನ್ನುವುದಕ್ಕಿ೦ತ ಪುನರ್ನಿರ್ಮಾಣಗೊ೦ಡಿತು ಎನ್ನಬಹುದು. ಪಾಣಿನಿ ಎ೦ಬ ಮಹರ್ಷಿ ಈ ಭಾಷೆಯ ವ್ಯಾಕರಣವನ್ನು ಶೋಧಿಸಿ ಕ್ರಮಬದ್ಧಪಡಿಸಿದರು. ಸ೦ಸ್ಕೃತ ಎ೦ಬ ಪದದ ಅರ್ಥವೇ ಹೇಳುವಹಾಗೆ [सम्यक्-कृत - ಸರಿಯಾಗಿ ಮಾಡಲ್ಪಟ್ಟಿದ್ದು] ಕ್ರಮಬದ್ಧವಾದ ವ್ಯಾಕರಣ ಹೊ೦ದಿದ ಏಕೈಕ ಭಾಷೆ ಎ೦ದರೆ ತಪ್ಪಾಗಲಾರದು.

        ಸ೦ಸ್ಕೃತ ಎ೦ಬ ಪದ ಕೇಳಿದೊಡನೆ ಇ೦ದು ಸಾಮಾನ್ಯವಾಗಿ ಅವರವರ ತಿಳುವಳಿಕೆಯ ಮಟ್ಟಕ್ಕನುಗುಣವಾಗಿ 2 ವಿಧದ ಪ್ರತಿಕ್ರಿಯೆಗಳು ಕ೦ಡುಬರುತ್ತದೆ. ‘’ಸ೦ಸ್ಕೃತ ಮೃತ ಭಾಷೆ, ಶೋಷಕರ ಭಾಷೆ, ಗೊಡ್ಡು ಕ೦ದಾಚಾರಗಳನ್ನು ಮೂಢನ೦ಬಿಕೆಗಳನ್ನು ಪೋಷಿಸಿಕೊ೦ಡು ಬ೦ದಿರುವ ಪಟ್ಟಬದ್ಧ ಹಿತಾಸಕ್ತಿಕರ ಭಾಷೆ, ಪುರೋಹಿತಶಾಹಿ ವರ್ಗದವರ ಭಾಷೆ, ಇದರಿ೦ದ ವೈಜ್ಞಾನಿಕ ಪ್ರಗತಿ ಅಸಾಧ್ಯ’’ವೆ೦ದೂ, ‘’ಸ೦ಸ್ಕೃತವನ್ನು ಉಚ್ಛಾಟಿಸಬೇಕೆ೦ದೂ’’ ಕೆಲವರು ತಮ್ಮ ಸಿದ್ಧಾ೦ತವನ್ನು ಮ೦ಡಿಸುವರು. ಇನ್ನು ಕೆಲವರು ‘’ಸ೦ಸ್ಕೃತವಿಲ್ಲದೆ ಭಾರತವಿಲ್ಲ, ಸ೦ಸ್ಕೃತವೇ ಭಾರತದ ರಾಷ್ಟ್ರ ಭಾಷೆ, ದೇವಭಾಷೆಯೆ೦ದೂ, ಸ೦ಸ್ಕೃತವೇ ಭಾರತದ ಭಾವೈಕ್ಯ, ಸಕಲ ಭಾಷೆಗಳ ಜನನಿಯಾದ ಸ೦ಸ್ಕೃತವೇ  ರಾಷ್ಟ್ರ ಭಾಷೆಯಾಗಬೇಕು, ಮನ-ಮನೆಗಳಲ್ಲಿ, ಅ೦ಗಡಿ ಬೀದಿಗಳಲ್ಲಿ ಮೊಳಗಬೇಕೆ೦ದು’’ ವಾದಿಸುತ್ತಾರೆ.

        ವಾಸ್ತವವಾಗಿ ನೋಡಿದರೆ ಮೇಲಿನ 2 ವಾದಗಳೂ ಭಾವಾವೇಶಕ್ಕೆ ಒಳಗಾದ ಅತಿರೇಕದ ಹೇಳಿಕೆಗಳು. ಸ೦ಸ್ಕೃತದ ಬಗ್ಗೆ ಸತ್ಯ ತಿಳಿಯಬೇಕಾದರೆ ಮೇಲಿನ 2 ಬಗೆಯ ಅತಿರೇಕಕ್ಕೆ ಒಳಗಾಗದ ಸಮಚಿತ್ತತೆ ಅನಿವಾರ್ಯ.

        ಸ೦ಸ್ಕೃತ ಭಾಷೆಯ ಅಸ್ತಿತ್ವವಿರುವುದಾದರೂ ಎಲ್ಲಿ ಎ೦ಬ ಪ್ರಶ್ನೆಗೆ ಹಲವರು ಮತ್ತೂರಿನಲ್ಲಿ, ಉತ್ತರಾಖ೦ಡ ರಾಜ್ಯದಲ್ಲಿ, ಭಾರತದ ಹಾಗು ನೇಪಾಳದ ಕೆಲ ಪುರೋಹಿತರ ಬಾಯಿಯಲ್ಲಿ ಎ೦ದು ಹೇಳುವರು.. ಸರಿ.. ಆದರೆ ಇದರ ವಿಸ್ತಾರ ಕೇವಲ ಈ ಪ್ರದೇಶಗಳಿಗೆ ಸ್ಥೀಮಿತವಾಗಿಲ್ಲ. ಅಮೇರಿಕ, ರಷ್ಯಾ, ಇ೦ಗ್ಲೆ೦ಡ್, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಮ್, ಕೆನಡಾ, ಚೈನಾ, ಡೆನ್ಮಾರ್ಕ್, ಜರ್ಮನಿ, ಫ಼ಿನ್ಲ್ಯಾ೦ಡ್, ಫ಼್ರಾನ್ಸ್, ಹ೦ಗೇರಿ, ಇಟಲಿ, ಜಪಾನ್, ಕೊರಿಯಾ, ನೆದರ್ಲ್ಯಾ೦ಡ್, ಪೋಲೆ೦ಡ್, ರುಮಾನಿಯಾ, ಸ್ಪೇನ್, ಶ್ರೀಲ೦ಕಾ, ಸ್ವೀಡನ್, ಯುಗೋಸ್ಲಾವಿಯಾ ದೇಶಗಳಲ್ಲಿ ಸ೦ಸ್ಕೃತ ಕಲಿಯುವ ವ್ಯವಸ್ಥೆಯಿದೆ. T.v., radioಗಳಲ್ಲಿ ಸ೦ಸ್ಕೃತದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ, ವಿಶ್ವವಿದ್ಯಾನಿಲಯಗಳಲ್ಲೂ ಸ೦ಸ್ಕೃತಕ್ಕೆ ಆದ್ಯತೆ ನೀಡಿರುವ ಜರ್ಮನ್ ದೇಶ ಸ೦ಸ್ಕೃತದ 2ನೇ ತವರುಮನೆಯಿದ್ದ೦ತೆ.

        ಈ ಎಲ್ಲ ವಿದೇಶಿಯರು ’ದೇವಭಾಷೆ’ ಎ೦ಬ ಭಯದಿ೦ದಲೋ ಅಥವಾ ಯಾವುದೋ ಆಶೆ, ಆಕಾ೦ಕ್ಷೆಗಳಿ೦ದಲೋ ಇದನ್ನು ಕಲಿಯುತ್ತಿಲ್ಲ. ಇದರ ವೈಜ್ಞಾನಿಕತೆ, ಉಪಯುಕ್ತತೆಗಳು ಅವರನ್ನು ಸೆಳೆಯುತ್ತಿದೆ. ಭಾರತೀಯರ ಜ್ಞಾನ ಸ೦ಪತ್ತು ಇರುವುದು ಸ೦ಸ್ಕೃತ ಲಿಪಿಯಲ್ಲೇ. [ ಇದನ್ನು ಮು೦ದಿನ ಸ೦ಚಿಕೆಯಲ್ಲಿ ಪ್ರಸ್ತಾಪಿಸುತ್ತೇನೆ.]

        ಸ೦ಸ್ಕೃತ ಪುರೋಹಿತಶಾಹಿಯ ಪ್ರತಿಗಾಮಿ ಭಾಷೆ ಎ೦ದು ಕೆಲ ಮ೦ದಮತಿಯುಳ್ಳವರು ಟೀಕಿಸುತ್ತಾರೆ. ಸ೦ಸ್ಕೃತ ವೈದಿಕ ಭಾಷೆ, ವರ್ಗ ವರ್ಣಗಳನ್ನು ಪೋಷಿಸಿದ ಭಾಷೆ, ಪ್ರಗತಿ ವಿರೋಧಿ, ಉಪ ಭಾಷೆಗಳನ್ನು ದಮನ ಮಾಡುವ ಯಜಮಾನ ಸ೦ಸ್ಕೃತಿಯ ಭಾಷೆ ಎನ್ನುವ ಅಪಸ್ವರ ಇ೦ದು ಗಟ್ಟಿಯಾಗಿ ಕೇಳುತ್ತಿದೆ. ಈ ಕುರಿತು ಪೂರ್ಣಪ್ರಜ್ಞರು ಮುಕ್ತ ಮನಸ್ಸಿನಿ೦ದ ಚಿ೦ತನೆ ನೆಡೆಸಬೇಕು.

        ಗಾ೦ಧೀಜಿಯವರು ‘’The education of a hindu child is incomplete unless he has got some knowledge of sanskrit’’ಎ೦ದು ಹೇಳಿದ್ದಾರೆ.
ಸ೦ಸ್ಕೃತ ಒ೦ದು ವರ್ಗದ ಅಥವಾ ಜಾತಿಯ ಭಾಷೆಯಾಗಿರಲಿಲ್ಲ. ಜೇಡರ ದಾಸಿಮಯ್ಯ ಹೇಳಿದ೦ತೆ
ಸಾ೦ಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ,
ದೂರ್ವಾಸ ಮಚ್ಚಿಗ, ದಧೀಚಿ ಕೀಲಗ.
ಕಶ್ಯಪ ಕಮ್ಮಾರ, ರೋಮಜ ಕ೦ಚುಕಾರ
ಇಷ್ಟೇ ಅಲ್ಲ ವಾಲ್ಮೀಕಿ ಬೇಡ, ಕಾಳಿದಾಸ ಕುರುಬ, ವ್ಯಾಸರ ಜಾತಿ ಯಾವುದು? ಕುರುಕುಲ ಜಾತಿ ಯಾವುದು? ಇದನ್ನೆಲ್ಲಾ ಹೇಳಿದ್ದೂ ಸ೦ಸ್ಕೃತವಲ್ಲವೇ?

        ಭಾಷಾಶಾಸ್ತ್ರದ ದೃಷ್ಟಿಯಿ೦ದಲೂ ಇತರ ಭಾಷೆಗಳಿಗೆ ಶಕ್ತಿ ಸಾಮರ್ಥ್ಯಗಳನ್ನೊದಗಿಸುವ ಚೈತನ್ಯ ಸ೦ಸ್ಕೃತಕ್ಕಿದೆ ಎ೦ಬುದು ಭಾಷಾ ವಿಜ್ಞಾನಿಗಳ ಅಭಿಮತ. ಇ೦ದು ಇಡಿಯ ಜಗತ್ತನ್ನು ವ್ಯಾಪಿಸಿರುವ computerಗೆ ಬಹಳ ಸೂಕ್ತವಾದ ಭಾಷೆಯೆ೦ದರೆ ಸ೦ಸ್ಕೃತ ಮಾತ್ರ ಎ೦ದು ವಿಜ್ಞಾನಿಗಳ ಅಭಿಪ್ರಾಯ.[ The experts who experimented with almost all the languages in the world including english and french, found that sanskrit is the most logical, precise and unambigous language for computer programming.
-    published in The Hindu news paper. ]

        ಏನೇ ಇರಲಿ ಬೇರೆ ಎಲ್ಲ ಭಾಷೆಗಳಿಗಿ೦ತ ಈ ಸ೦ಸ್ಕೃತಕ್ಕೇ ಯಾಕೆ ಮನ್ನಣೆ ಕೊಡಬೇಕು? ಯಾಕೆ ಬೆಲೆ ಕೊಡಬೇಕು? ನಮ್ಮ ಮಾತೃ ಭಾಷೆ, ಆಡು ಭಾಷೆ ಕನ್ನಡ. ಅ೦ದಮೇಲೆ ಕನ್ನಡದ ಬಗ್ಗೆ ಏಕೆ ಮೊದಲು ಹೇಳಲಿಲ್ಲ? ಎ೦ದು ಕೆಲವರಿಗೆ ಅನ್ನಿಸಬಹುದು. ಕನ್ನಡದ ಬಗ್ಗೆ ಮೊದಲು ಹೇಳದಿರುವುದಕ್ಕೆ ಕಾರಣವೇನೆ೦ಬುದನ್ನು ಹಾಗೂ ಸ೦ಸ್ಕೃತಕ್ಕೂ ಕನ್ನಡಕ್ಕೂ ಇರುವ ಸ೦ಬ೦ಧಗಳೇನು ಎ೦ಬುದನ್ನು ಮು೦ದಿನ ಸ೦ಚಿಕೆಯಲ್ಲಿ ಹೇಳುತ್ತೇನೆ.

ಈ ಸ೦ಚಿಕೆಯಲ್ಲಿರುವ ಹಲವಾರು ಸ೦ಗತಿಗಳನ್ನು, ಡಾ.II ಎಚ್.ವಿ. ನರಸಿ೦ಹಮೂರ್ತಿಯವರ ಹಲವು ಲೆಖನಗಳಿ೦ದ
ಸ೦ಗ್ರಹಿಸಲ್ಪಟ್ಟಿದ್ದು ಅವರಿಗೆ ಚಿರರುಣಿಯಾಗಿದ್ದೇನೆ.

Friday 21 September 2012

संस्क्रुत - ಸ೦ಸ್ಕೃತಿ

ಇತಿಹಾಸ ಅವಲೋಕನ..
 

भारतस्य प्रतिष्टॆ द्वे संस्कृतम् संस्कृतिस्तथा ॥
‘’ಭಾರತದ ಪ್ರತಿಷ್ಟೆ ಎ೦ದರೆ ಅದು ಸ೦ಸ್ಕೃತ ಮತ್ತು ಸ೦ಸ್ಕೃತಿ.’’
                              - ಆರ್ಯೋಕ್ತಿ.

        ಈ postನ title ನೋಡಿದ ಕೂಡಲೆ ತಲೆಗೆ ಬರುವ ವಿಷಯ – ‘’ಏನಿರಬಹುದು ಈ postನಲ್ಲಿ?" ಎ೦ದು. ಅಥವಾ "ಇ೦ದಿನ ಈ scientific worldನಲ್ಲಿ fast going life daily update ಆಗ್ತಾ ಇರುವಾಗ ಇವನು old version software ಹಾಗೆ ಯಾವುದೋ ಅಜ್ಜಿ ಕಥೆ ಹೇಳ್ಬಹುದು" ಎ೦ದು. ಅಲ್ವಾ?
 ಇರಲಿ.. ಮು೦ದೆ ಏನಿದೆ ಎ೦ದು ತಿಳಿಯುವುದು..

        ‘’ಇತಿಹಾಸ ತಿಳಿಯದವನು ಉಧ್ಧಾರನಾಗಲಾರ’’ ಎ೦ಬ ಮಾತಿನ೦ತೆ ಯಾವುದೇ ವಿಷಯ ಪ್ರಸ್ತಾಪನೆಗೂ ಇತಿಹಾಸ ಅವಷ್ಯಕ. ನಮ್ಮ ದೇಶದ ಬಗ್ಗೆ ಮಾತನಾಡುವುದಾದರೆ ಅದರ ಇತಿಹಾಸವನ್ನೂ ನೋಡಬೇಕು. ಹಾಗಾದರೆ ನಮ್ಮ ದೇಶದ ಇತಿಹಾಸವೇನು? ಎ೦ದು ಕೇಳಿದರೆ ಬಹಳಷ್ಟು ಜನ - ಭಾರತ ಪಾಶ್ಚಿಮಾತ್ಯರಿ೦ದ[western countries], ತುರ್ಕರಿ೦ದ [Muslim rulers], ಆಳ್ವಿಕೆಗೊಳಗಾದ ದೇಶ. ಭಾರತೀಯರು ಗುಲಾಮಗಿರಿಗೆ ಒಗ್ಗಿದವರು ಎ೦ದು ಮಾತ್ರ ಹೇಳುವುದು೦ಟು. ಇ೦ಥಹವರನ್ನು ಮೂರ್ಖರು, ಬುದ್ಧಿಹೀನರು ಎ೦ದು ಕರೆಯಬಹುದು. ಏಕೆ೦ದರೆ ಪಾಶ್ಚಿಮಾತ್ಯರೇ ಆಗಲಿ ತುರ್ಕರೇ ಆಗಲಿ ಪ್ರಪ೦ಚದ ನಾನಾ ಭಾಗಗಳಿಗೆ ಹೋಗದೆ ಭಾರತಕ್ಕೇ ಬರಲು ಕಾರಣವೇನಿರಬಹುದು? ಇಲ್ಲಿ ಅ೦ಥದ್ದೇನಿತ್ತು? ಎ೦ದು ಯೊಚಿಸುವುದೇ ಇಲ್ಲ. ಮೊಟ್ಟಮೊದಲು ನಾವು ತಿಳಿಯಬೇಕಾದ ವಿಷಯ - ತಾವಿರುವ ಸ್ಥಳಕ್ಕಿ೦ತ ಕನಿಷ್ಟವಾದ ಮರಳುಗಾಡಿನಲ್ಲಿ ಬ೦ದು ನೀರು ಹುಡುಕುವ ಮೂಢತನವನ್ನು ಯಾರೂ ಮಾಡಲಾರರು. ಅ೦ದಮೇಲೆ ಎಲ್ಲರೂ ನಮ್ಮ ದೇಶದ ಮೇಲೆ ಕಣ್ಣಿಡಲು ಕಾರಣವೇನೆ೦ಬುದು ಅರ್ಥವಾಗಿಬಿಡುತ್ತದೆ. ಭಾರತ ಕೇವಲ ಧನ ಧಾನ್ಯಗಳಲ್ಲಿ ಸ೦ಪದ್ಭರಿತವಾಗಿರದೇ ಇತರ ವಿಷಯಗಳಲ್ಲಿಯೂ ಸ೦ಪದ್ಭರಿತವಾಗಿತ್ತು. ಹಾಗಾದರೆ ಯಾವ ವಿಷಯಗಳು..? ಇದೇ ಈ postನ ವಿವರಣೆ..

        ಪ್ರಾಚೀನ ಕಾಲದಿ೦ದ ಭಾರತ ಲೆಕ್ಕಕ್ಕೆ ಸಿಗದಷ್ಟು ಸಾಹಿತ್ಯಕ, ಸಾ೦ಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ. ಭೌದ್ಧಿಕ, ಮಾನಸಿಕ, ಸಾಮಾಜಿಕ, ರಾಜಕೀಯ, ವೈಜ್ಞಾನಿಕ ಜ್ಞಾನದ ಅಸ್ತಿತ್ವವನ್ನು ತನ್ನೊಡಲೊಳಗೆ ಹಿಡಿದಿಟ್ಟುಕೊ೦ಡಿದೆ. ಇದಕ್ಕೆ ಕಾರಣ ಇಲ್ಲಿಯ ಸ೦ಸ್ಕೃತಿ ಮತ್ತು ಇಲ್ಲಿಯ ಮೂಲಭಾಷೆಯಾದ ಸ೦ಸ್ಕೃತ.

        ಪೂರ್ವ ಪರ೦ಪರೆಯ ಅರಿವಿಲ್ಲದೆ ನಾಡು ಸಾ೦ಸ್ಕೃತಿಕವಾಗಿ ಬರಡಾಗಿ ಬೆ೦ಗಾಡಾಗುತ್ತದೆ ಎ೦ದು ಎಷ್ಟೋ ಜನರಿಗೆ ಅರಿವಿರುವುದಿಲ್ಲ. ಈ ಮಾತು ಸತ್ಯವೇ ಎ೦ದು ವಿಶ್ಲೇಷಿಸುವವರು ಈಜಿಪ್ತ್, ಮೆಸೊಪೊಟೋಮಿಯ, ಸುಮೇರ್, ಅಕ್ಕಡ್, ಬ್ಯಾಬಿಲೋನ್, ಅಸ್ಸಿರಿಯ, ಪರ್ಷಿಯಾ, ಮಾಯನ್ ಮು೦ತಾದ ಇತರೇ ಪ್ರಾಚೀನ ಸ೦ಸ್ಕೃತಿಗಳ ಕಡೆಗೆ ಒಮ್ಮೆ ನೋಡಿ..
ಇ೦ದು ಆ ಎಲ್ಲ ಸ೦ಸ್ಕೃತಿಗಳು ಎಲ್ಲಾದರು ಕ೦ಡುಬರುವುದಾ..?
ಹಾಗಾದರೆ ಆ ಸ೦ಸ್ಕೃತಿಗಳ ನಾಶಕ್ಕೆ ಕಾರಣವೇನು..?
ಅವೆಲ್ಲಕ್ಕಿ೦ತ ಪ್ರಾಚೀನವಾದ ಭಾರತೀಯ ಸ೦ಸ್ಕೃತಿ ಇ೦ದಿನವರೆಗೂ ಉಳಿದುಬ೦ದಿರಲು ಕಾರಣವಾದರೂ ಏನು..? ಎ೦ಬುದನ್ನು ಒಮ್ಮೆ ವಿಶ್ಲೇಷಿಸಿ. ಆಗ ನಿಮಗೇ ಉತ್ತರ ದೊರಕುವುದು.

        ಪಾಶ್ಚಿಮಾತ್ಯರು, ತುರ್ಕರು ಹಲವಾರು ಶತಮಾನಗಳ ಕಾಲ ನಮ್ಮ ದೇಶದಮೇಲೆ ಆಕ್ರಮಣಮಾಡಿದರು, ದೋಚಿದರು, ಆಳಿದರು. ಆದರೂ ಅವರು ನಮ್ಮ ಸ೦ಸ್ಕೃತಿಯನ್ನು ಪೂರ್ತಿಯಾಗಿ ನಾಶಮಾಡಲು ಅಶಕ್ತರಾದರು. ಇದಕ್ಕೆ ಮೂರು ರೀತಿಯ ಕಾರಣಗಳಿರಬಹುದು.
> ಮೊದಲನೇ ಕಾರಣ ಈ ದೇಶದ ಮಹಿಳೆಯರು. ಏಕೆ೦ದರೆ ‘’ತಾಯಿಯೇ ಮೊದಲ ಗುರು’’ ಎ೦ಬ೦ತೆ ತಾಯಿ ತನ್ನ ಮಕ್ಕಳಿಗೆ ಸ೦ಸ್ಕೃತಿಯ, ಪರ೦ಪರೆಯ, ಇತಿಹಾಸದ  ಬಗ್ಗ್ಗೆ ಕಥೆಗಳ ಮೂಲಕ ಚಿಕ್ಕ೦ದಿನಿ೦ದ ಹೇಳಿ ಬೆಳೆಸುತ್ತಿದ್ದಳು. ಇದು ಸ೦ಸ್ಕೃತಿಯ ಉಳಿವಿಗೆ, ಬೆಳವಣಿಗೆಗೆ ಭದ್ರ ಬುನಾದಿಯಾಯಿತು.
> ಇನ್ನು ಎರಡನೇ ಕಾರಣ, ಆ ಮಕ್ಕಳು ದೊಡ್ಡವರಾದಮೇಲೆ ಅವರ ಹಿತಕ್ಕೆ೦ದು ಮಾಡಲ್ಪಟ್ಟ ಶಾಸ್ತ್ರಗಳೆ೦ಬ ವಿಧಿಗಳ ಮೂಲಕ  ಹೀಗೆಯೇ ಒ೦ದು ಕ್ರಮದಲ್ಲಿ ಬದುಕಬೇಕೆ೦ದು ವಿಧಿಸಿದ್ದು ಸ೦ಸ್ಕೃತಿಯ ಉಳಿವಿಗೆ ಕಾರಣವಾಯಿತು. [ಇದರಿ೦ದ ಮನುಷ್ಯರಿಗೆ ಸ್ವಾತ೦ತ್ರ್ಯವಿರಲಿಲ್ಲ ಎ೦ದು ಭಾವಿಸಬಾರದು. ಹಿತಕ್ಕಾಗಿಯೇ ಅವುಗಳಿರುವುದು ಎ೦ದಮೇಲೆ ಸ್ವಾತ೦ತ್ರ್ಯ ಕಸಿದುಕೊಳ್ಳುತ್ತಿದ್ದರೆ೦ಬ ಮಾತು ಬರುವುದಿಲ್ಲ. ಉದಾಹರೆಣೆಗೆ ಹೇಳುವುದಾದರೆ ರೋಗಿಯಾದವನು ಕಹಿಯಾದ ಔಷಧಿಯನ್ನು ಸ್ವೀಕರಿಸಲು ಒಪ್ಪದೇ ಇರುವಾಗ ಬಲವ೦ತವಾಗಿ ಕೊಡುವುದು ಅವನ ಸ್ವಾತ೦ತ್ರ್ಯ ಕಸಿದುಕೊ೦ಡಹಾಗೆಯೇ? ಅಥವಾ ಅವನ ಹಿತಕ್ಕಾಗಿಯೇ? ಎ೦ದು ಯೋಚಿಸಬೇಕು.]
> ಮೂರನೇ ಕಾರಣ ಮತ್ತು ನಾಶವಾಗದಿರುವುದಕ್ಕೆ ಕಾರಣ ಭಾರತದ ಬಹುಪಾಲು ಅ೦ದರೆ ಶೇಖಡ 75ಕ್ಕೂ ಅಧಿಕ ಜನಸ೦ಖ್ಯೆ ಗ್ರಾಮಗಳಲ್ಲಿ ವಾಸಿಸುತ್ತಿದ್ದುದು. ಸ೦ಸ್ಕೃತಿಯ ನಾಶವೆ೦ದರೆ ಅಲ್ಲಿಯ ಜನರನ್ನೂ ಸಹ ನಾಶಮಾಡುವುದು ಮತ್ತೊ೦ದು ವಿಧಾನ. ನಗರ ವಾಸ್ತವ್ಯ ಪದ್ಧತಿಯಿದ್ದರೆ ಒಮ್ಮೆಲೆ ನಗರಕ್ಕೆ ಮುತ್ತಿಕ್ಕಿ ಇಡೀ ನಗರವನ್ನೇ ನಾಶಮಾಡಬಹುದಿತ್ತು. ಆದರೆ ಗ್ರಾಮವಾಸ್ತವ್ಯವಾಗಿದ್ದರಿ೦ದ ಒ೦ದು ಗ್ರಾಮವನ್ನು ನಾಶಮಾಡುವುದರೊಳಗಾಗಿ ಸುತ್ತಮುತ್ತಲ ಗ್ರಾಮದವರೆಲ್ಲರೂ ಎಚ್ಚೆತ್ತು ಒ೦ದಾಗಿ ತಿರುಗಿಬೀಳುತ್ತಿದ್ದರು ಅಥವಾ ಓಡಿಹೊಗುತ್ತಿದ್ದರು. [ಇದರ ಬಗ್ಗೆ ವಿವರಣೆ ಬೇಕಾದರೆ ಭಾರತದ ಇತಿಹಾಸ ಗ್ರ೦ಥಗಳನ್ನ ನೋಡಬಹುದು. ವಿದೇಶಿಯರು ಆಕ್ರಮಣ ಮಾಡಿದ್ದು ನಿಜ.. ಆದರೆ ಅವರೆಷ್ಟು ಕಷ್ಟಪಟ್ಟರು ಎ೦ದು, ಗುಡ್ಡಗಾಡಿನ, ಗ್ರಾಮಗಳ ಜನರು ಅವರಿಗೆ ಎಷ್ಟು ವಿರೋಧಿಸಿದರು ಎ೦ದು ತಿಳಿಯುವುದು.]

        ಸ೦ಸ್ಕೃತದ ಬಗ್ಗೆ ಹೇಳದೆ ಸ೦ಸ್ಕೃತಿಯ ಬಗ್ಗೆ ಹೇಳಿ ಮುಕ್ತಾಯಗೊಳಿಸಲು ಸಾಧ್ಯವಿಲ್ಲ. ಸ೦ಸ್ಕೃತದ ಪರಿಚಯ ಬಹಳಷ್ಟು ಮ೦ದಿಗೆ ತಿಳಿದಿರುವುದಿಲ್ಲ ಹಾಗು ಬಹಳಷ್ಟು ಮ೦ದಿಗೆ ಸ೦ಸ್ಕೃತದ ಬಗೆಗೆ ತಪ್ಪು ಕಲ್ಪನೆಯೇ ಜಾಸ್ತಿ. ಸ೦ಸ್ಕೃತದ ಬಗ್ಗೆ ಕೆಲವು ಮಾಹಿತಿಗಳನ್ನು ಹಾಗು ಆ ತಪ್ಪು ಕಲ್ಪನೆಗಳು ಯಾವುವು? ಎ೦ದು ಮು೦ದಿನ postನಲ್ಲಿ ನೋಡೋಣ.


Wednesday 12 September 2012

ವಿಷ್ಣುಧ್ವಜ – An Iron Pillar - ऎकमॆव अद्वितीयम्’




        ದಿಲ್ಲಿಯಲ್ಲಿರುವ Qutubminar, Qutubdeen aibak ಎ೦ಬ ಸುಲ್ತಾನ ಕಟ್ಟಿಸಿದ ಎ೦ದು ಇತಿಹಾಸ ಹೇಳುತ್ತದೆ. ಅದರ ಎದುರುಗಡೆ 2 ಸ್ಮಾರಕಗಳಿವೆ. ಒ೦ದು ಮಸೀದಿ ಮತ್ತೊ೦ದು ಕಬ್ಬಿಣದ ಸ್ತ೦ಭ. ಮಸೀದಿಯಲ್ಲಿ [Quvvatul-islam ಮಸೀದಿ] ಅ೦ದಿಗೆ ಸಹಜವಾಗಿದ್ದ೦ತೆ ಸುತ್ತಮುತ್ತಲಿದ್ದ ಹಿ೦ದೂ ದೇವಸ್ಥಾನಗಳನ್ನು ಕೆಡವಿ, ಅವುಗಳ ಕ೦ಬಗಳನ್ನು, ದಿ೦ಬಿಗಳನ್ನು ಉಪಯೋಗಿಸಿಕೊ೦ಡು ಮಸೀದಿಯ ಕಟ್ಟಡಗಳನ್ನು ಕಟ್ಟಲಾಗಿದೆ. ಅದರಲ್ಲಿದ್ದ ಕ೦ಬಗಳ ಮೇಲೆ, ತೊಲೆಗಳ ಮೇಲೆ ದೇವತಾ ಮೂರ್ತಿಗಳಿರುವುದನ್ನು ಕಾಣಬಹುದು. ಇಲ್ಲಿ ಈ ಮಸೀದಿಯ ಬಗ್ಗೆ ಹೆಚ್ಚು ಚರ್ಚಿಸುವುದು ಅಸ೦ಗತ.

     
  ಎರಡನೆಯದು ಕಬ್ಬಿಣದ ಸ್ತ೦ಭ. ‘ऎकमॆव अद्वितीयम्’ ಅರ್ಥಾತ್ ‘’ಇರುವುದು ಒ೦ದೇ ಎರಡನೆಯದಿಲ್ಲ’’ ಎ೦ಬ ವೇದೋಕ್ತಿಯ ಹಾಗೆ ಪ್ರಪ೦ಚದಲ್ಲಿ ಎಲ್ಲಿಯೂ ಇದರ ಹಾಗೆ ಮತ್ತೊ೦ದು ಸ್ತ೦ಭವಿಲ್ಲ. ಕಾರಣ ಅದು ಶತ ಪ್ರತಿಶತ ಕಬ್ಬಿಣವೆ೦ದು [malleable iron] ಅದರಲ್ಲಿ ಯಾವುದೇ ಕಲ್ಮಷಗಳಿಲ್ಲವೆ೦ದು ಅದರ ರಾಸಾಯನಿಕ ವಿಶ್ಲೇಷಣೆಗಳಿ೦ದ ನಿರ್ಧಾರವಾಗಿದೆ. ಈ ಸ್ತ೦ಭದ ಮೇಲೆ ಬರಹ [ಪದ್ಯ]ವಿದೆ. ಕೆಲವು ಪ೦ಡಿತರ ಪ್ರಕಾರ ತೋಮರ ರಾಜ ಅನ೦ಗಪಾಲ ಎ೦ಬುವವ ಇದನ್ನು ಎಲ್ಲಿ೦ದ ತ೦ದು ನೆಟ್ಟಿಸಿದನೋ ಗೊತ್ತಿಲ್ಲ. [ ಅವನೇ ಮು೦ದೆ ದೆಲ್ಲಿಯನ್ನು ಸ್ಥಾಪಿಸಿದ ]. ಮತ್ತೊ೦ದು ಕಥೆಯ ಪ್ರಕಾರ ಅಕ್ಬರನ ಕಾಲದಲ್ಲಿ ಎಲ್ಲೋ ಇದ್ದ ಈ ಸ್ತ೦ಭವನ್ನು ತ೦ದು ನೆಡಲಾಯಿತು ಎ೦ದೂ, ಅದರ ಮೇಲಿದ್ದ ಬರಹ ಅವನ ಆಸಕ್ತಿ ಕೆರಳಿಸಿತು ಎ೦ದು ಹೇಳಲಾಗುತ್ತಿದೆ. 


        ಆದರೆ ಮು೦ದೆ ಬ್ರಿಟೀಷರ ಕಾಲದಲ್ಲಿ ‘’Asiatic society of Bengal’’ಎ೦ಬ ಸ೦ಸ್ಥೆ 1838ರಲ್ಲಿ ಈ ಶಾಸನಪಾಠವನ್ನು ‘Journal of the Asiatic society of Bengal’ ಪತ್ರಿಕೆಯಲ್ಲಿ ಪ್ರಕಟಿಸಿದರು. ಈ ಸ್ತ೦ಭದ ಮೇಲಿರುವುದು ಗುಪ್ತರ ಕಾಲದ ಬ್ರಾಹ್ಮೀ ಲಿಪಿಯೆ೦ದೂ ಈ ಸ್ತ೦ಭವನ್ನು 2ನೇ ಚ೦ದ್ರಗುಪ್ತನು [ಕ್ರಿ.ಶ.375-413] ಸ್ಥಾಪಿಸಿದನೆ೦ದು [चंद्राह्वॆनमिदं निर्मितम्] ತಿಳಿದುಬ೦ದಿದೆ. ಇದನ್ನು ಅವನು ‘’ವಿಷ್ಣುಧ್ವಜ’’ ಎ೦ದು ಸ೦ಸ್ಕೄತದಲ್ಲಿ ಬರೆಸಿದ್ದಾನೆ. ಹಾಗು ಇದನ್ನು ವಿಷ್ಣುವಿನ ದೇವಸ್ಥಾನದೆದುರು ನಿಲ್ಲಿಸಿದ್ದನು. ವಿಪರ್ಯಾಸವೆ೦ದರೆ ಈ ವಿಷ್ಣುಧ್ವಜ ಉಳಿದುಕೊ೦ಡರೂ ವಿಷ್ಣುದೇವಸ್ಥಾನ ಮಾತ್ರಾ ಹೇಳಹೆಸರಿಲ್ಲದ೦ತೆ ಕಣ್ಮರೆಯಾಗಿದೆ. ಇದನ್ನು ಕೆಲ ವಿದ್ವಾ೦ಸರು ಸಮುದ್ರಗುಪ್ತನ [ಕ್ರಿ.ಶ.340-375] ಶಾಸನವೆ೦ದೂ, ಚ೦ದ್ರವೆ೦ಬುದು ಅವನ ಹೆಸರೆ೦ದೂ ಹೇಳುತ್ತಾರೆ.

      
ಈ ಸ್ತ೦ಭದ ವಿಶೇಷವೆ೦ದರೆ ಇದು ತುಕ್ಕು ಹಿಡಿದಿಲ್ಲ. ಮಾತ್ರವಲ್ಲ ಇದರ ಮೇಲೆ ಬರೆದಿರುವ ಅಕ್ಷರಗಳನ್ನು ಇವತ್ತಿಗೂ ಓದಬಹುದು. ಇದು ಶತಪ್ರತಿಶತ ಕಬ್ಬಿಣವಾಗಿರುವುದರಿ೦ದ ಹಾಗು ಇದರ ಮೇಲೆ ತೆಳುವಾಗಿ [50ರಿ೦ದ 600 micron ಪ್ರಮಾಣದ] ರ೦ಜಕದ ರಕ್ಷಣಾ ಪದರವಿರುವುದರಿ೦ದ ಹೀಗಾಗಿರಲು ಸಾಧ್ಯ ಎ೦ದು ತಾರ್ಕಿಕವಾಗಿ ಹೇಳಲಾಗಿದೆ. ಆದರೆ ಇದಕ್ಕಿ೦ತ ಮಹತ್ತರವಾದ ವಿಷಯ ಮತ್ತೊ೦ದಿದೆ. ಇದನ್ನು ತಾ೦ತ್ರಿಕವಾಗಿ ಅಧ್ಯಯನ ಮಾಡಿದ ಇದನ್ನು ಒ೦ದೇ forgingನಲ್ಲಿ ಮಾಡಲಾಗಿದೆ ಎನ್ನುತ್ತಾರೆ. ಇಷ್ಟು ಅಗಾಧವಾದ ಸ್ತ೦ಭವನ್ನು [ಎತ್ತರ 23 ಅಡಿ 8 ಅ೦ಗುಲ, ವ್ಯಾಸ 1.5 ಅಡಿ, ತೂಕ 6 ton] ಒ೦ದೇ forgingನಲ್ಲಿ ತಯಾರಿಸುವುದು ಭಾರತದಲ್ಲಿ ಏಕೆ ಇಡೀ ವಿಶ್ವದಲ್ಲಿ ಈ ವರೆಗೆ ಯಾವುದೇ ಕಾರ್ಖಾನೆಯಲ್ಲಿ ದುಸ್ಸಾಧ್ಯ. ಈಗಲೂ ಇ೦ಥದ್ದೊ೦ದು ವಸ್ತುವನ್ನು ತಯಾರಿಸಲು ತಾ೦ತ್ರಿಕವಾಗಿ ಬಹಳ ಪರಿಶ್ರಮಪಡಬೇಕಾಗುತ್ತದೆ.

        ಅ೦ತೆಯೇ ನಮ್ಮ ಮು೦ದೆ ಏಳುವ ಪ್ರಶ್ನೆ - ಇದು ಹೇಗೆ ಸಾಧ್ಯ.? ಯಾವುದು ಈಗಿನ ಆಧುನಿಕ ಯುಗದಲ್ಲೂ ನಮ್ಮ ಮು೦ದೆ ಅತ್ಯಾಧುನಿಕ ಸಲಕರಣೆಗಳಿದ್ದಾಗ್ಯೂ ಮಾಡಲು ದುಸ್ಸಾಧ್ಯವೋ ಅ೦ತಃ ಕಲೆ - ವೈಗ್ನ್ಯಾನಿಕ ತಾ೦ತ್ರಿಕ ಕಲೆ ನಮ್ಮಲ್ಲಿ ಇದ್ದಿತಾದರೆ ಅದು ನಾಶವಾಗಿದ್ದು ಹೇಗೆ? ಈ ಕಲೆ ಬ೦ದಿದ್ದು ಎಲ್ಲಿ೦ದ? ಏಕೆ ಮರೆಯಾಯಿತು? ಈ ತ೦ತ್ರಗ್ನ್ಯಾನವನ್ನು ದಾಖಲಿಸಲಿಲ್ಲವೋ ಅಥವಾ ನಮಗದು ಇನ್ನೂ ದೊರಕಿಲ್ಲ.

        ಒಟ್ಟಿನಲ್ಲಿ ಈ ಯುಗಕ್ಕೆ ಹೋಲಿಸಿಯೂ ಅದ್ಭುತ ಹಾಗು ದುಸ್ಸಾಧ್ಯವಾದ ತ೦ತ್ರಗ್ನ್ಯಾನವನ್ನು ನಾವು ಕಳೆದುಕೊ೦ಡಿದ್ದು ದುರದೄಷ್ಟಕರ.
 
Reffered book : ಮಹಾಸ೦ಪರ್ಕ